ಮಳೆಗಾಲಕ್ಕೆ ಕೊಂಕಣ ರೈಲ್ವೇ ಸರ್ವಸನ್ನದ್ಧ
Team Udayavani, Jun 4, 2021, 6:53 AM IST
ಉಡುಪಿ: ಮಳೆಗಾಲದ ಋತುವಿಗೆ ಕೊಂಕಣ ರೈಲ್ವೇ ಸರ್ವಸನ್ನದ್ಧವಾಗಿದೆ. ಕೊಲಾಡ್ನಿಂದ ತೋಕೂರು ವರೆಗಿನ 740 ಕಿ.ಮೀ. ದೂರದ ಮಾರ್ಗದಲ್ಲಿ ಎಲ್ಲ ಸುರಕ್ಷಾ ಕ್ರಮಗಳನ್ನೂ ಅಳವಡಿಸಲಾಗಿದೆ. ಮಳೆ ನೀರು ಹರಿಯುವ ತೋಡನ್ನು ಸರಿಪಡಿಸಲಾಗಿದ್ದು ಮಣ್ಣು ಜರಿತವಾಗುವ ಕಡೆ ಗಮನಹರಿಸಿ ಕಾಮಗಾರಿ ನಡೆಸಲಾಗಿದೆ.
ರೈಲುಗಳ ಸುಗಮ ಸಂಚಾರಕ್ಕಾಗಿ ಮಳೆಗಾಲದಲ್ಲಿ 681 ಸಿಬಂದಿ ಗಸ್ತು ನಡೆಸಲಿದ್ದು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ 24 ಗಂಟೆಯೂ ಗಸ್ತು ತಿರುಗಲಿದ್ದಾರೆ. ಇಂತಹ ಕಡೆ ವೇಗ ನಿಯಂತ್ರಣವನ್ನು ಕಾಯ್ದು ಕೊಳ್ಳಲಾಗುವುದು. ಯಾವುದೇ ತುರ್ತು ಸಂದರ್ಭಗಳಲ್ಲಿ ನಿಭಾಯಿಸುವ ತಂಡಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕಾಮಗಾರಿ ನಡೆಸಿದ ಪರಿಣಾಮ ಬಂಡೆಗಳು ಉರುಳಿ ರೈಲು ಸೇವೆಗೆ ಧಕ್ಕೆಯಾದ ನಿದರ್ಶನಗಳಿಲ್ಲ.
ಅತಿಯಾದ ಮಳೆ ಸುರಿಯುವ ಸಂದರ್ಭ 40 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ. ರತ್ನಾಗಿರಿ ಮತ್ತು ವೆರ್ನಾದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ತುರ್ತು ವೈದ್ಯಕೀಯ ನೆರವನ್ನು ಒಳಗೊಂಡ ಎಆರ್ಎಂವಿ (ಆಕ್ಸಿಡೆಂಟ್ ರಿಲೀಫ್ ಮೆಡಿಕಲ್ ವ್ಯಾನ್) ಸಿದ್ಧವಾಗಿದೆ. ವೆರ್ನಾದಲ್ಲಿ ಎಆರ್ಟಿಯನ್ನೂ (ಆಕ್ಸಿಡೆಂಟ್ ರಿಲೀಫ್ ಟ್ರೈನ್) ಇರಿಸಲಾಗಿದೆ.
ಎಲ್ಲ ಸುರಕ್ಷಾ ಶ್ರೇಣಿಯ ಸಿಬಂದಿ ನಿಯಂತ್ರಣ ಕಚೇರಿ/ನಿಲ್ದಾಣವನ್ನು ತುರ್ತು ಸಂದರ್ಭ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಮೊಬೈಲ್ ದೂರವಾಣಿಯನ್ನು ಕೊಡಲಾಗಿದೆ. ಲೋಕೋ ಪೈಲಟ್ ಮತ್ತು ಗಾರ್ಡ್ಗಳಿಗೆ ವಾಕಿ ಟಾಕಿ ಒದಗಿಸಲಾಗಿದೆ.
ಮಡಗಾಂವ್, ಚಿಪ್ಳೂಣ್, ರತ್ನಾಗಿರಿ, ವಿಲ್ವಾಡೆ, ಕನಕವಾಲಿ, ಮಾಂಗಾಂವ್, ಕಾರವಾರ, ಭಟ್ಕಳ, ಉಡುಪಿಯಲ್ಲಿ ಮಳೆ ಮಾಪನಯಂತ್ರವನ್ನು ಅಳವಡಿಸ ಲಾಗಿದೆ. ಕಾಳಿ ನದಿ (ಮಾಂಗಾಂವ್ – ವೀರ್ ನಡುವೆ), ಸಾವಿತ್ರಿ ನದಿ (ವೀರ್ ಸಾಪೆ ವಮಾನೆ ನಡುವೆ), ವಶಿಷ್ಟಿ ನದಿ (ಚಿಪ್ಳೂಣ್- ಕಮಾತೆ ನಡುವೆ) ಪ್ರವಾಹ ಎಚ್ಚರಿಕೆ ವ್ಯವಸ್ಥೆ ರೂಪಿಸಲಾಗಿದೆ. ಗಾಳಿಯ ಪ್ರಮಾಣ ಅರಿಯಲೂ 4 ಕಡೆ ಅನೆಮೊಮೀಟರ್ ಅಳವಡಿಸ ಲಾಗಿದೆ.
24×7 ನಿಯಂತ್ರಣ ಕೊಠಡಿ ಬೇಲಾಪುರ, ರತ್ನಾಗಿರಿ, ಮಡಗಾಂವ್ನಲ್ಲಿ 24×7 ಸಮಯದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಜೂ. 10ರಿಂದ ಅ. 31ರ ವರೆಗೆ ಮಳೆಗಾಲದ ವೇಳಾಪಟ್ಟಿಯಂತೆ ರೈಲುಗಳನ್ನು ಓಡಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ