ಕುಂದಾಪುರ ನಗರದಲ್ಲಿ ಮತ್ತೆ ಇರಲಿದೆ ಕಸದ ಡಬ್ಬ

ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಕೊನೆಯಾಗಬೇಕಿದೆ...

Team Udayavani, Nov 9, 2021, 5:31 AM IST

ಕುಂದಾಪುರ ನಗರದಲ್ಲಿ ಮತ್ತೆ ಇರಲಿದೆ ಕಸದ ಡಬ್ಬ

ಕುಂದಾಪುರ: ಕಸದಬುಟ್ಟಿ ರಹಿತ ಪುರಸಭೆ ವ್ಯಾಪ್ತಿಯಲ್ಲಿ ಮತ್ತೆ ಕಸದ ಬುಟ್ಟಿಗಳು ಅಲ್ಲಲ್ಲಿ ಕಾಣಿಸಿಕೊಳ್ಳಲಿವೆ.ನಗರಗಳಲ್ಲಿ ಭಾರೀ ಗಾತ್ರದ ತೊಟ್ಟಿಗಳಿದ್ದವು. ಕಾಂಕ್ರೀಟ್‌ ಹಾಗೂ ಕಬ್ಬಿಣದ ದೊಡ್ಡ ತೊಟ್ಟಿಗಳಲ್ಲಿ ತ್ಯಾಜ್ಯ, ಕಸವನ್ನು ಎಸೆಯಲಾಗುತ್ತಿತ್ತು. ತೊಟ್ಟಿ ಇದ್ದರೂ ಅದರ ಒಳಗೆ ಕಸ ಹಾಕದೇ ಅದರ ಸುತ್ತ, ಹೊರಾವರಣದಲ್ಲಿ ಕಸ ಹಾಕುವವರ ಸಂಖ್ಯೆಯೇ ಹೆಚ್ಚು. ಹೀಗಿರುವ ತೊಟ್ಟಿಗಳು ನಗರ ಸೌಂದರ್ಯದ ಮೇಲೆ ಕಪ್ಪು ಚುಕ್ಕೆ ಇದ್ದಂತೆ. ಆ ಪರಿಸರದಲ್ಲಿ ದುರ್ನಾತದಿಂದ ಹೋಗುವುದು ಕೂಡ ಕಷ್ಟವೇ. ಅಷ್ಟಲ್ಲದೇ ಸುತ್ತಮುತ್ತಲಿನ ಅಂಗಡಿಯವರಿಗೂ ಗ್ರಾಹಕರು ಬರದಂತೆ ತಡೆಯಲು ಈ ಬುಟ್ಟಿ ಹೊರತಾಗಿ ಬೇರೆ ಬೇಡ. ಅನಂತರದ ದಿನಗಳಲ್ಲಿ ಕಸ ಸಂಗ್ರಹಕ್ಕೆ ಸರಕಾರ ಪ್ರತ್ಯೇಕ ವ್ಯವಸ್ಥೆ ಮಾಡಿತು.

ಮನೆ ಮನೆ ಸಂಗ್ರಹ
ಮನೆ ಮನೆ ಕಸ ಸಂಗ್ರಹ ಹಾಗೂ ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹ ವ್ಯವಸ್ಥೆ ಆರಂಭವಾಯಿತು. ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳೂ ಈ ವ್ಯವಸ್ಥೆ ಜಾರಿಗೆ ತಂದವು. ಅದರಂತೆ ಎಲ್ಲ ಮಳಿಗೆಗಳು, ಮನೆಗಳಿಗೆ ಸರಕಾರದಿಂದ ಕಸದ ಬುಟ್ಟಿಯನ್ನು ನೀಡಲಾಯಿತು. ಅದರಲ್ಲೇ ಕಸವನ್ನು ಹಸಿಕಸ, ಒಣಕಸ ಎಂದು ಪ್ರತ್ಯೇಕಿಸಿ ನೀಡಬೇಕೆಂದು ನಿಯಮ ಮಾಡಲಾಯಿತು. ವಾರ್ಷಿಕ ಶುಲ್ಕ ಸಂಗ್ರಹವನ್ನೂ ಮಾಡಲಾಯಿತು. ಕಸ ಸಂಗ್ರಹಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಯಿತು. ಈ ವ್ಯವಸ್ಥೆ ಸುಸೂತ್ರವಾಗಿ ಒಂದು ಹಳಿಗೆ ಬರುತ್ತಿದ್ದಂತೆಯೇ ನಗರದಲ್ಲಿ ಹಾಕಿದ ದೊಡ್ಡ ಗಾತ್ರದ ಕಸದ ಬುಟ್ಟಿಗಳನ್ನು ರಾಜ್ಯದ ಎಲ್ಲೆಡೆ ಎಂಬಂತೆ ತೆಗೆದು ಹಾಕಲಾಯಿತು. ಈ ಮೂಲಕ ಸ್ವತ್ಛ ಭಾರತ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮಾಡಲಾಯಿತು.

ಟ್ವಿನ್‌ ಬಿನ್‌
ಈಗ ಮತ್ತೆ ಟ್ವಿನ್‌ ಬಿನ್‌ ಪದ್ಧತಿ ಜಾರಿಗೆ ತರಲಾಗುತ್ತಿದೆ. ಅದರಂತೆ ನಗರದ ವಿವಿಧೆಡೆ ಕಂಬಗಳನ್ನು ಅಳವಡಿಸಲಾಗುತ್ತಿದ್ದು ಅದರಲ್ಲಿ ಹಸಿಕಸ ಹಾಗೂ ಒಣಕಸ ಪ್ರತ್ಯೇಕಿಸಿ ಹಾಕಲು ಎರಡು ಬುಟ್ಟಿಗಳನ್ನು ಇಡಲಾಗುತ್ತದೆ. ಅದನ್ನು ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಕ್ಕೆ, ಬುಟ್ಟಿಯನ್ನು ಕಂಬದಿಂದ ತೆಗೆಯದೆ ವಾಹನದೊಳಗೆ ನೇರ ಅನ್‌ಲೋಡ್‌ ಮಾಡಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತದೆ.

ಇದನ್ನೂ ಓದಿ:ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚನ ಬಿಡುಗಡೆ ಮಾಡಿದ ಸಿಎಂ

ಅಸಮಾಧಾನ
ಕಸದ ಬುಟ್ಟಿಗಳನ್ನು ತೆಗೆದು ಮಳಿಗೆಗಳು, ಅಂಗಡಿಗಳು ಹಾಗೂ ಮನೆಗಳಿಂದ ಕಸ ಸಂಗ್ರಹ ಶುಲ್ಕ ವಸೂಲಿ ಮಾಡಲಾಗುತ್ತಿದೆ. ನಿತ್ಯ ಕಸವೇ ಇಲ್ಲದ ಚಿನ್ನದ ಮಳಿಗೆಯಂತಹ ಅಂಗಡಿಗಳಿಂದಲೂ ಶುಲ್ಕ ವಸೂಲಿಯಂತೂ ನಿತ್ಯದ ಬಾಬತ್ತೇ ನಡೆಯುತ್ತದೆ. ದೊಡ್ಡ ತೊಟ್ಟಿಗಳನ್ನು ತೆಗೆಯುವುದು ಎಂದು ತೀರ್ಮಾನಿಸಿ ಈಗ ಮತ್ತೆ ಬುಟ್ಟಿಗಳನ್ನು ಇಡುವ ನಿರ್ಧಾರ ಸರಿ ಅಲ್ಲ ಎಂಬ ಅಪಸ್ವರದ ಮಾತುಗಳೂ ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಅಷ್ಟಲ್ಲದೆ ಕಸದ ಬುಟ್ಟಿ ಇಟ್ಟರೆ ಬಹುತೇಕ ಸಾರ್ವಜನಿಕರು ಬುಟ್ಟಿಯೊಳಗೆ ಕಸ ಹಾಕದೇ ಅದರ ಸುತ್ತಮುತ್ತವೇ ಹಾಕುವ ಕಾರಣ ಮತ್ತೂಮ್ಮೆ ಕಸಸಂಗ್ರಹ ತಾಣವಾಗುವ ಅಪಾಯವೂ ಇದೆ ಎಂಬ ಮಾತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ರಸ್ತೆ ಬದಿ ಇಂಟರ್‌ಲಾಕ್‌ ಅಳವಡಿಸಿ ಅದನ್ನು ತೆಗೆದು ಅಸಮರ್ಪಕವಾಗಿ ಜೋಡಿಸಿ ಲಿಟ್ಟರ್‌ ಕಂಬ ಹಾಕಲಾಗುತ್ತಿದೆ. ಪ್ರತೀ ಸಲ ಕಾಂಕ್ರೀಟ್‌ ರಸ್ತೆ, ಇಂಟರ್‌ಲಾಕ್‌ ಅಳವಡಿಕೆಯಾದ ಕೂಡಲೇ ಇಂತಹ ಹೊಸ ಕಾಮಗಾರಿ ಮಾಡುವ ವಿಧಾನ ಕೈಬಿಡಬೇಕು ಎಂಬ ಆಗ್ರಹವೂ ಇದೆ.

ನಗರ ಸ್ವಚ್ಛತೆಗಾಗಿ
ನಗರದಲ್ಲಿ ಓಡಾಡುವ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಎಂದು ಈ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುತ್ತಾರೆ ಪುರಸಭೆಯವರು. ದಿನವೊಂದಕ್ಕೆ 10 ಸಾವಿರದಷ್ಟು ವಿದ್ಯಾರ್ಥಿಗಳು ಬರುವ ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ಪ್ರವೃತ್ತಿ ಇದೆ. ಸಣ್ಣಪುಟ್ಟ ಕಾಗದ ಚೂರು, ಪ್ಲಾಸ್ಟಿಕ್‌ ಕಸ, ಜೂಸ್‌ ಪ್ಯಾಕೆಟ್‌ಗಳು, ತಿಂಡಿ ಖಾಲಿ ಪೊಟ್ಟಣಗಳು ಹೀಗೆ ಬೇರೆ ಬೇರೆ ವಿಧದ ಕಸಗಳನ್ನು ಸಾರ್ವಜನಿಕರು ಎಲ್ಲಿ ಹಾಕುವುದು ಎಂದು ತಿಳಿಯದೇ ರಸ್ತೆ ಬದಿ ಎಸೆದು ಹೋಗುತ್ತಾರೆ. ಇದು ಸುಂದರ ಕುಂದಾಪುರ ಕಲ್ಪನೆಗೆ ವಿರೋಧವಾಗಿದೆ. ನಗರ ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಕಾರಣದಿಂದ ಅತೀ ಹೆಚ್ಚು ಪ್ರವಾಸಿಗರು ಬರುವ ಕೋಡಿ ಸಮುದ್ರ ಕಿನಾರೆಯಲ್ಲಿ 10ರಿಂದ 15 ಬುಟ್ಟಿಗಳು, ಕುಂದಾಪುರ ನಗರದಲ್ಲಿ 35ರಿಂದ 40 ಬುಟ್ಟಿಗಳನ್ನು ಅಳವಡಿಸಲಾಗುತ್ತದೆ. ಅದಕ್ಕಾಗಿ ಕಬ್ಬಿಣದ ಕಂಬ ಹಾಕುವ ಕಾರ್ಯ ನಡೆಯುತ್ತಿದೆ. ಬುಟ್ಟಿಗಳ ಅಳವಡಿಕೆ ಇನ್ನಷ್ಟೇ ನಡೆಯಬೇಕಿದೆ. ಈ ಕಾರ್ಯಕ್ಕಾಗಿ 4 ಲಕ್ಷ ರೂ. ವ್ಯಯಿಸಲಾಗುತ್ತಿದೆ.

ಸರಿಯಲ್ಲ
ಕಸದಬುಟ್ಟಿಗಳನ್ನು ತೆಗೆಯುವ ನಿರ್ಣಯ ಮಾಡಿ, ಮನೆಮನೆ ಕಸ ಸಂಗ್ರಹಕ್ಕೆ ಕಡ್ಡಾಯಶುಲ್ಕ ಸಂಗ್ರಹಿಸುವಾಗ ಮತ್ತೆ ಕಸದ ಬುಟ್ಟಿ ಅಳವಡಿಸುವುದು ಸರಿಯಲ್ಲ.
-ರಾಜೇಶ್‌ ಕಾವೇರಿ,
ಮಾಜಿ ಉಪಾಧ್ಯಕ್ಷರು, ಪುರಸಭೆ

ಪ್ರವಾಸಿಗರಿಗಾಗಿ
ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು, ವಿದ್ಯಾರ್ಥಿಗಳು, ಬೇರೆ ಬೇರೆ ಊರುಗಳಿಂದ ನಗರಕ್ಕೆ ವಿವಿಧ ಕಾರ್ಯಗಳಿಗೆ ಬರುವವರು ಸಣ್ಣಪುಟ್ಟ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಈ ಕಾರಣಕ್ಕೆ ಸಣ್ಣ ಗಾತ್ರದ ಬುಟ್ಟಿಗಳನ್ನು ಇಡಲಾಗುತ್ತಿದೆ. ದಿನಕ್ಕೆ ಎರಡು ಬಾರಿ ಅದರಿಂದ ಕಸ ಸಂಗ್ರಹಿಸಲಾಗುತ್ತದೆ.
ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.