ನಾಟಕ ಅಂದರೆ ರಂಜನೆ ಮಾತ್ರವಲ್ಲ : ಕೆ.ವಿ. ಅಕ್ಷರ
Team Udayavani, Feb 20, 2017, 3:45 AM IST
ಉಡುಪಿ: ರಂಜಿಸುವುದು ಮಾತ್ರ ನಾಟಕದ ಮೂಲ ಉದ್ದೇಶವಲ್ಲ. ನಾಟಕದಲ್ಲಿ ಸಮಾಜಮುಖೀ ಚಿಂತನೆ, ಸಮಸ್ಯೆಗಳಿಗೆ ಸ್ಪಂದನೆ ಬಹಳ ಮುಖ್ಯ ಎಂದು ರಂಗ ನಿರ್ದೇಶಕ, ನೀನಾಸಂ ಮುಖ್ಯಸ್ಥ ಅಕ್ಷರ ಕೆ.ವಿ. ಹೇಳಿದರು.
ಅವರು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಥಬೀದಿ ಗೆಳೆಯರ ಆಶ್ರಯದಲ್ಲಿ ಮುರಾರಿ-ಕೆದ್ಲಾಯ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂವಹನ ಮಾಧ್ಯಮಗಳು ಸಮೂಹ ಸಮ್ಮೊàಹಿನಿಮಾಧ್ಯಮಗಳಾಗುತ್ತಿವೆ. ಪ್ರಮುಖವಾಗಿ ಟಿ.ವಿ.ಅರಿವಳಿಕೆ (ಅನಸ್ತೇಶಿಯಾ) ಕೊಡುವ ಮಾಧ್ಯಮ ವಿದ್ದಂತೆ. ಉತ್ಸವಗಳು ಹೆಚ್ಚಾಗುತ್ತಿದ್ದು, ಅದರ ಮಹತ್ವ ಕಡಿಮೆಯಾಗುತ್ತಿದೆ. ನಾಟಕ, ಉತ್ಸವಗಳು ನಿಧಾನವಾಗಿ ತನ್ನ ಸಾಂಸ್ಕೃತಿಕ ಚಹರೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿವೆ. ಸಂಸ್ಕೃತಿಯು ಉಪಭೋಗಿಸುವ ಮಟ್ಟಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆತ್ಮವಿಮರ್ಶೆ, ಆತ್ಮಾವಲೋಕನ ಅಗತ್ಯ ಎಂದರು.ತೆಂಕನಿಡಿಯೂರು ಸ.ಪ್ರ. ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ| ನಿಕೇತನ ಮಾತನಾಡಿ, ಮಹಿಳೆ ತಾನು ಒಬ್ಬಂಟಿಯಾಗಿ ಓಡಾಡಬಲ್ಲೆ ಎನ್ನುವ ಶಕ್ತಿಯು ರಂಗಭೂಮಿಯ ನಾಟಕ, ನೃತ್ಯಗಳಂತಹ ಕ್ರಿಯಾಶೀಲ ಚಟುವಟಿಕೆಯಿಂದ ಸಿಗುತ್ತವೆ. ನಾಡು ಮಾತ್ರವಲ್ಲ ಅಹಂಕಾರ ತುಂಬಿಕೊಂಡಿರುವ ನಾವೂ ಕೂಡ ಬರಿದಾಗುತ್ತಿದ್ದೇವೆ ಎಂದರು.
ಲೇಖಕ ವಿವೇಕ ಶಾನುಭಾಗ, ರಥಬೀದಿ ಗೆಳೆಯರ ಬಳಗದ ಅಧ್ಯಕ್ಷ ಮುರಳೀಧರ ಉಪಾಧ್ಯಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ, ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ನೀನಾಸಂ ಕಲಾವಿದರಿಂದ ಮಾಲತಿ ಮಾಧವ ಪ್ರದರ್ಶನಗೊಂಡಿತು. ಸಂತೋಷ್ ಬಲ್ಲಾಳ್ ಸ್ವಾಗತಿ
ಸಿದರು. ಸಂತೋಷ್ ನಾಯಕ್ ಪಟ್ಲ ನಿರ್ವಹಿಸಿದರು.
“ಸಮರ್ಥ ರಂಗಮಂದಿರವಿಲ್ಲ’
ರಂಗಭೂಮಿಯು ಸಾಂಸ್ಕೃತಿಕ, ಸಾಮಾಜಿಕವಾಗಿ ಮಹತ್ವ ಕಳೆದುಕೊಳ್ಳಲು ಮುಖ್ಯ ಕಾರಣ ಒಂದು ಭದ್ರವಾದ ನೆಲೆಗಟ್ಟು ಇನ್ನೂ ನಿರ್ಮಾಣವಾಗಿಲ್ಲ. ಸಾಂಸ್ಕೃತಿಕ ನಗರಿ ಎಂದು ಕರೆಯಿಸಿಕೊಂಡ ಉಡುಪಿಯಲ್ಲಿ ಇನ್ನೂ ಒಂದು ಸಮರ್ಥ ರಂಗಮಂದಿರ ನಿರ್ಮಾಣಗೊಂಡಿಲ್ಲ. ಇದ್ದ 2-3 ರಂಗಮಂದಿರ ಗಳು ಆಗ ಹೇಗೆ ಇದ್ದವೋ, ಈಗಲೂ ಹಾಗೆಯೇ ಇವೆ. ಯುವ ರಂಗಕರ್ಮಿಗಳ ಉತ್ಸಾಹ ನಿಜಕ್ಕೂ ಶ್ಲಾಘನೀಯ ಎಂದು ಕೆ.ವಿ. ಅಕ್ಷರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು