ಜೀವನದ ಕೊನೆಯ ಟ್ರಿಪ್ ಆದ ದಿನದ ಕೊನೆಯ ಟ್ರಿಪ್ : ಹೊಂಡಕ್ಕೆ ಟಿಪ್ಪರ್ ಬಿದ್ದು ಇಬ್ಬರು ಸಾವು
Team Udayavani, Aug 8, 2020, 8:26 AM IST
ಬೆಳ್ಮಣ್: ರಸ್ತೆಬದಿಯ ನೀರಿನ ಹೊಂಡಕ್ಕೆ ಟಿಪ್ಪರ್ ಬಿದ್ದು ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು ಬಳಿ ಶುಕ್ರವಾರ ಸಂಜೆ ನಡೆದಿದೆ.
ಚಾಲಕ ಕಾರ್ಕಳ ಕುಕ್ಕುಂದೂರಿನ ಅರುಣ್ ಕುಮಾರ್, ಕ್ಲೀನರ್ ತಮಿಳು ನಾಡು ಮೂಲದ ಯುವಕ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೋರ್ವ ವಾಹನದಿಂದ ಎಸೆಯಲ್ಪಿಟ್ಟಿದ್ದು, ಗಾಯಗೊಂಡಿದ್ದಾರೆ.
ಮೃತ ಚಾಲಕ ಅರುಣ್ ಕುಮಾರ್ ಅವರು ಬಸ್ ಚಾಲಕರಾಗಿದ್ದು, ಸದ್ಯ ಕೋವಿಡ್ ಕಾರಣದಿಂದ ಬಸ್ ಟ್ರಿಪ್ ಕಡಿತವಾದ ಕಾರಣ ಟಿಪ್ಪರ್ ಚಾಲಕರಾಗಿ ದುಡಿಯುತ್ತಿದ್ದರು.
ಶುಕ್ರವಾರ ಸಂಜೆ ದಿನದ ಕೊನೆಯ ಟ್ರಿಪ್ ಆಗಿ ಜಾರ್ಕಳದಿಂದ ನಿಂಜೂರಿಗೆ ಕಲ್ಲು ಕೊಂಡೊಯ್ಯುತ್ತಿದ್ದರು. ಈ ವೇಳೆ ಪಳ್ಳಿ ನಿಂಜೂರು ಬಳಿ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದೆ. ಟಿಪ್ಪರ್ ಪಲ್ಟಿಯಾದ ಕಾರಣ ಅದರಿಂದ ಹೊರಬರಲಾಗದೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ