ಬೈಕ್ನಲ್ಲಿ ವಿವಿಧ ರಾಷ್ಟ್ರಗಳಿಗೆ ಪ್ರಯಾಣ: ಸ್ವಾಗತ
Team Udayavani, Jun 18, 2019, 6:10 AM IST
ಕೊಲ್ಲೂರು: ಕೊಲ್ಲೂರು ದೇಗುಲದ ತಂತ್ರಿ ಹಾಗೂ ಪ್ರಧಾನ ಅರ್ಚಕ ಡಾ| ನಿತ್ಯಾನಂದ ಅಡಿಗ ಅವರು ಬೈಕಿನಲ್ಲಿ ಭಾರತ, ನೇಪಾಲ, ಭೂತಾನ್ ಹಾಗೂ ಬಾಂಗ್ಲಾದೇಶಗಳಲ್ಲಿ ಸಂಚರಿಸಿ ಜೂ. 17 ರಂದು ಕೊಲ್ಲೂರಿಗೆ ಮರಳಿದ್ದು, ಅವರನ್ನು ದೇಗುಲದ ವತಿಯಿಂದ ಸ್ವಾಗತಿಸಲಾಯಿತು.
ಮೇ 29ರಂದು ನಿತ್ಯಾನಂದ ಅಡಿಗ ಹಾಗೂ ಗಿರಿಧರ ಭಿಡೆ ಬೈಕ್ ಸವಾರಿಯ ಮೂಲಕ ವಿದೇಶ ದರ್ಶನಕ್ಕೆ ಸಾಗಿದ್ದರು. ಆದರೆ ಈ ನಡುವೆ ಭಿಡೆಯವರಿಗೆ ಬಿಸಿಲ ತಾಪದಿಂದ ಉಂಟಾದ ದೈಹಿಕ ಬಾಧೆಯಿಂದ ಕೊಲ್ಲೂರಿಗೆ ಹಿಂದಿರುಗ ಬೇಕಾಯಿತು. ಅನಂತರ ಅಡಿಗರು ಒಂಟಿಯಾಗಿ 18 ದಿನಗಳಲ್ಲಿ 10 ಸಾವಿರ ಕೀ.ಮೀ. ವ್ಯಾಪ್ತಿಯ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿ ಸುರಕ್ಷಿತವಾಗಿ ಈಗ ಊರಿಗೆೆ ಆಗಮಿಸಿದ್ದಾರೆ.
ಈ ಸಂದರ್ಭ ಅವರು ನೇಪಾಲ, ಭೂತಾನ್ ಹಾಗೂ ಬಾಂಗ್ಲಾದೇಶದ ಗಡಿಭಾಗದ ಸೈನಿಕರನ್ನು ಭೇಟಿ ಮಾಡಿದ್ದು, ಬಾಂಗ್ಲಾ ಭಾರತ ಗಡಿಯ ಸೆ„ನಿಕರ ಆತ್ಮೀಯತೆಯನ್ನು ಮೆಲುಕು ಹಾಕಿದರು. ಭೂತಾನ್ನ ರಸ್ತೆ, ಸಾರಿಗೆ ನಿಯಮ ಹಾಗೂ ವಾಹನ ಸಂಚಾರ ಹಾಗೂ ನಿಲುಗಡೆಯ ಕ್ರಮ ಇತರ ರಾಷ್ಟ್ರಗಳಿಗೆ ಮಾದರಿ ಎನ್ನುತ್ತಾರೆ.
ಮುಂದಿನ ದಿನಗಳಲ್ಲಿ ಎವೆರೆಸ್ಟ್ ಪರ್ವತವನ್ನು ಏರಬೇಕು ಆ ಮೂಲಕ ಹೊಸ ಸಾಧನೆಯ ಸಾಧಕನಾಗಬೇಕು ಎಂಬ ಹಂಬಲ ಹೊತ್ತಿರುವ ಅಡಿಗರು ಅದಕ್ಕಾಗಿ ಪೂರ್ವಭಾವಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ