ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ
Team Udayavani, Sep 28, 2022, 12:33 AM IST
ಪಡುಬಿದ್ರಿ: ನಾಲ್ಕು ವರ್ಷಗಳ ಹಿಂದೆ ಉಚ್ಚಿಲ ಪೊಲ್ಯ ನಿವಾಸಿ ಇರ್ಫಾನ್ ಶೇಖ್ ಅವರನ್ನು ವಿವಾಹವಾಗಿದ್ದ ಝಾಯಿದಾ (27) ಅವರು ಗಂಡ, ಅತ್ತೆ, ಮಾವ, ಬಾವ ಹಾಗೂ ಆತನ ಹೆಂಡತಿ ಸೇರಿ ಐವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆಯತ್ನದ ದೂರನ್ನು ದಾಖಲಿಸಿದ್ದಾರೆ.
ತನಗೆ ಗಂಡನೂ ಸೇರಿ ಅತ್ತೆ ಮನೆಯವರು ನಿರಂತರ 5 ಲಕ್ಷ ರೂ. ನಗದು ಹಾಗೂ ಚಿನ್ನವನ್ನು ತರುವಂತೆ ಕಿರುಕುಳ ನೀಡುತ್ತಿದ್ದರು. ಸೆ. 25ರ ರಾತ್ರಿ ತನ್ನನ್ನು ಕೊಲ್ಲುವ ಯತ್ನವನ್ನೂ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದಲೂ ಈ ಕಿರುಕುಳವು ನಡೆಯುತ್ತಲೇ ಬಂದಿದೆ. ಈಗ ತಾನು ಮೂರು ವರ್ಷದ ಗಂಡು ಮಗುವಿನ ತಾಯಿಯಾಗಿದ್ದು, ಸೆ. 25ರ ರಾತ್ರಿ ಮಾವ ಸುಲೈಮಾನ್ ಶೇಖ್, ಅತ್ತೆ ಆಲೀಮಾ, ಬಾವ ಅಫ್ಜಲ್ ಶೇಖ್ ಹಾಗೂ ಆತನ ಪತ್ನಿ ಸಬೀನಾ ಒಟ್ಟು ಸೇರಿ ಕುತ್ತಿಗೆ ಹಿಸುಕಿ, ಕೈಬೆರಳನ್ನು ತಿರುಚಿ, ಸೀಮೆ ಎಣ್ಣೆ ಸುರಿದು ಸುಡಲು ಯತ್ನಿಸಿದ್ದಾರೆ. ಬಾವನ ಹೆಂಡ್ತಿ ತಲೆಗೂದಲನ್ನು ಎಳೆದು ಸುತ್ತಿಗೆಯಿಂದ ಹೆಗಲಿಗೆ ಹೊಡೆದಿದ್ದಾರೆ. ಬಾವ ಅಫ್ಜಲ್ ಶೇಖ್ ಕೈಯಿಂದ, ಮರದ ಸೋಂಟೆಯಿಂದ ಹೊಡೆದಿದ್ದಾರೆ.
ಅವರಿಂದ ಬಿಡಿಸಿಕೊಂಡು ಮಗುವನ್ನೆತ್ತಿಕೊಂಡು ಹೊರ ಹೋಗಿ ರಿಕ್ಷಾದಲ್ಲಿ ತಾಯಿ ಮನೆ ನಿಟ್ಟೆಗೆ ಹೋಗಿದ್ದು, ಸೆ. 26ರಂದು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವೆ ಎಂದು ಝಾಹಿದಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?