ಕೃಷ್ಣಮಠದಲ್ಲಿ ಎಡೆಸ್ನಾನ, ಮಡೆಸ್ನಾನ ನಿಷೇಧ; ಪಲಿಮಾರುಶ್ರೀ ನಿರ್ಧಾರ
Team Udayavani, Dec 13, 2018, 5:16 PM IST
ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ಷಷ್ಠಿ ಮಹೋತ್ಸವ ನಡೆಯಿತು. ಆದರೆ ಈ ಬಾರಿ ಸಾಂಪ್ರದಾಯಿಕ ಎಡೆಸ್ನಾನ, ಮಡೆಸ್ನಾನ ನಡೆಯಲಿಲ್ಲ.ಕೆಲವು ಭಕ್ತರು ಉರುಳು ಸೇವೆ ನಡೆಸಿದರು. ಅಷ್ಟೇ ಅಲ್ಲ ಇನ್ನುಂದೆ ಕೃಷ್ಣಮಠದಲ್ಲಿ ಎಡೆಸ್ನಾನ, ಮಡೆಸ್ನಾನ ನಿಷೇಧಿಸಲು ಪಲಿಮಾರುಶ್ರೀಗಳು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಈ ಹಿಂದೆ ಕೃಷ್ಣಮಠದಲ್ಲಿನ ಸುಬ್ರಹ್ಮಣ್ಯ ಗುಡಿ ಸಮೀಪ ಷಷ್ಠಿ ಮಹೋತ್ಸವದ ವೇಳೆ ಎಡೆಸ್ನಾನ, ಮಡೆಸ್ನಾನ ನಡೆಯುತ್ತಿತ್ತು. ಆದರೆ ತೀವ್ರ ವಿವಾದ ಹಾಗೂ ಕೋರ್ಟ್ ಆದೇಶದಿಂದ ಮಡೆಸ್ನಾನ ನಿಲ್ಲಿಸಲಾಗಿತ್ತು. ಎಡೆಸ್ನಾನ ಮುಂದುವರಿದಿತ್ತು.
ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿತ್ತು. ಹೀಗಾಗಿ ಷಷ್ಠಿ ಮಹೋತ್ಸವದ ವೇಳೆ ಎಡೆಸ್ನಾನ, ಮಡೆಸ್ನಾನ ನಿಷೇಧಿಸಲು ಪಲಿಮಾರುಶ್ರೀಗಳು ಸೇರಿದಂತೆ ಅಷ್ಟಮಠಾಧೀಶರು ನಿರ್ಧರಿಸಿದ್ದಾರೆ. ನಾನು ಕೂಡಾ ಈ ವಿಚಾರದಲ್ಲಿ ತಟಸ್ಥನಾಗುವುದಾಗಿ ತಿಳಿಸಿದ್ದೇನೆ. ಯಾವುದರ ಬಗ್ಗೆ ವಿವಾದ ಇದೆಯೋ ಅದರ ಬಗ್ಗೆ ಆಗ್ರಹ ಯಾಕೆ, ಇದರಿಂದ ಧರ್ಮಕ್ಕೇನೂ ನಷ್ಟವಿಲ್ಲ ಎಂದು ಪೇಜಾವರಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ