ಕರ್ಫ್ಯೂನಲ್ಲೂ ಉಡುಪಿ ಜಿಲ್ಲೆಯಾದ್ಯಂತ 644 ಜೋಡಿಗೆ ಕಂಕಣಭಾಗ್ಯ
Team Udayavani, Apr 25, 2021, 6:59 PM IST
ಉಡುಪಿ: ವಾರಾಂತ್ಯಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಉಡುಪಿ ತಾಲೂಕು ಸ್ತಬ್ಧಗೊಂಡಿತು ನಗರ ಸೇರಿ ತಾಲೂಕಿನಾದ್ಯಂತ ಅಗತ್ಯ ವಸ್ತು, ಸೇವೆಗಳನ್ನು ಹೊರತುಪಡಿಸಿ ಬಹುತೇಕ ಸಂಪೂರ್ಣ ಸ್ಥಗಿತವಾಗಿದ್ದು, ಮಳಿಗೆಗಳು ತೆರೆಯದೆ, ವಾಹನಗಳು ರಸ್ತೆಗಿಳಿಯದೆ ಪ್ರಮುಖ ವೃತ್ತ, ರಸ್ತೆಗಳು ಬಿಕೋ ಎನ್ನುತ್ತಿತ್ತು. ಕರ್ಫ್ಯೂ ನಡುವೆ ಜಿಲ್ಲೆಯಲ್ಲಿ 644 ಮದುವೆ ಸಮಾರಂಭಗಳು ನಡೆದಿದೆ.
ನಗರದಲ್ಲಿ ಔಷಧ ಮಳಿಗೆಗಳು, ಪೆಟ್ರೋಲ್ ಬಂಕ್ ಮತ್ತು ಬೆಳಗ್ಗೆ ನಿಗದಿತ ಅವ ಧಿವರೆಗೆ ಹಣ್ಣಿನ ಮಳಿಗೆಗಳು, ತರಕಾರಿ ಮಾರುಕಟ್ಟೆ ಗಳನ್ನು ಹೊರತುಪಡಿಸಿ, ಸಿಟಿ, ಸರ್ವೀಸ್, ಕೆಎಸ್ಸಾರ್ಟಿಸಿ ಸಾರಿಗೆ ಬಸ್ಗಳು, ಚಿತ್ರಮಂದಿರ, ಹೋಟೆಲ್, ಫುಟ್ ವೇರ್, ಬಟ್ಟೆ, ಕಿರಾಣಿ ಅಂಗಡಿ, ಗಾರ್ಮೆಂಟ್ಸ್ ಸೇರಿ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ಬಂದ್ ಮಾಡುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ :ವಾರಾಂತ್ಯ ಕರ್ಫ್ಯೂ; ಎಲೆಡೆ ಸಂಪೂರ್ಣ ಲಾಕ್
ಬ್ಯಾರಿಕೇಡ್ ನಿರ್ಮಾಣ
ವಾರಾಂತ್ಯ ಲಾಕ್ಡೌನ್ ನಿಮಿತ್ತ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದ ಪ್ರಮುಖ ಕ್ಲಾಕ್ ಟವರ್, ಮಣಿಪಾಲ ಸಿಂಡಿಕೇಟ್ ಸರ್ಕಲ್, ಸೇರಿದಂತೆ ಬಹುತೇಕ ವೃತ್ತಗಳಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿತ್ತು. ಕರ್ಫ್ಯೂನಲ್ಲಿಯೂ ಅನೇಕರು ಅನಗತ್ಯ ಓಡಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಯೊಬ್ಬರನ್ನು ತಡೆದು ವಿಚಾರಿಸಿದರು. ಸಕಾರಣ ನೀಡಿದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಇಲ್ಲವಾದಲ್ಲಿ ಹಿಂದಕ್ಕೆ ಕಳುಹಿಸಲಾಗುತ್ತಿತ್ತು.
ಸರಳ ಮದುವೆ
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎ.24 ಹಾಗೂ ಎ.25ರಂದು ಒಟ್ಟು 644 ಮದುವೆ ಸಮಾರಂಭ ನಡೆದಿದೆ. ಕಾರ್ಕಳದಲ್ಲಿ 58, ಹೆಬ್ರಿಯಲ್ಲಿ 16, ಕುಂದಾಪುರದಲ್ಲಿ 243, ಬೈಂದೂರಿನಲ್ಲಿ 79, ಉಡುಪಿ 122, ಕಾಪು 47, ಬ್ರಹ್ಮಾವರದಲ್ಲಿ ಒಟ್ಟು 79 ಮದುವೆ ಕಾರ್ಯಕ್ರಮಗಳು ನಡೆದಿವೆ. ಇವೆಲ್ಲವೂ ಆಯಾ ತಾಲೂಕಿನ ತಹಶೀಲ್ದಾರ್ ಅವರ ಅನುಮತಿ ಪಡೆದುಕೊಂಡಿವೆ.
ಆಟೋ ಸಂಚಾರ
ನಗರದಲ್ಲಿ ಜನಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ನರ್ಮ್ ಬಸ್ ಸಂಚಾರ ಇರಲಿಲ್ಲ. ನಗರದ ವಿವಿಧ ಕಡೆಯಲ್ಲಿ ಆಟೋ ಸಂಚಾರವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ