ಜೀರ್ಣಗೊಂಡ ಗೋಪುರದ ತಾಮ್ರಕ್ಕೆ ಉಡುಪಿ ಶ್ರೀ ಕೃಷ್ಣನ ರೂಪ
ಸುವರ್ಣ ಗೋಪುರ ಕೆಲಸ ಅಂತಿಮ ಹಂತ
Team Udayavani, May 22, 2019, 11:04 AM IST
ಉಡುಪಿ: ಶ್ರೀ ಕೃಷ್ಣ ಮಠದ ಗರ್ಭಗುಡಿಯ ಗೋಪುರದ ಮೇಲ್ಛಾವಣಿಯ ಜೀರ್ಣವಾದ ತಾಮ್ರವು ಟಂಕೆಯ ರೂಪ ಪಡೆದು ಕೊಂಡು ಪ್ರಸಾದ ರೂಪದಲ್ಲಿ ಭಕ್ತರ ಕೈಸೇರಲು ಸಿದ್ಧವಾಗಿದೆ.
ಗರ್ಭ ಗುಡಿಯ ಮೇಲ್ಛಾವಣಿಯಲ್ಲಿ ಜೀರ್ಣವಾದ 1,500 ಕೆ.ಜಿ. ತಾಮ್ರದ ತಗಡನ್ನು ತೆಗೆದು ಶುದ್ಧೀಕರಿಸಿ 4 ಇಂಚಿನ 20 ಸಾವಿರ ಟಂಕೆಗಳನ್ನು
ತಯಾರಿಸಲಾಗಿದೆ. ಪ್ರತೀ ಟಂಕೆಯ ಎರಡು ಪಾರ್ಶ್ವಗಳಲ್ಲಿ ಉಡುಪಿ ಶ್ರೀಕೃಷ್ಣನ ಚಿತ್ರ ಅಚ್ಚೊತ್ತಲಾಗಿದೆ. ಅದನ್ನು ಸುವರ್ಣ ಗೋಪುರಕ್ಕೆ ಧನ ಸಹಾಯ ಮಾಡಿದವರಿಗೆ ವಿತರಿಸಲಾಗುತ್ತದೆ. ಶೇ. 80 ಕೆಲಸ ಮುಕ್ತಾಯ ಕೆಲಸ ಶೇ. 80ರಷ್ಟು ಮುಕ್ತಾಯವಾಗಿದೆ. ಗೋಪುರಕ್ಕೆ ಸುಮಾರು 1. ಕೋ.ರೂ. ವೆಚ್ಚದ ಸಾಗುವಾನಿ ಮರ ಹಾಕಲಾಗಿದೆ. ಗೋಪುರದ ಮೆಲಂತಸ್ತಿನ ಚಿನ್ನದ ಹೊದಿಕೆ ಕಾರ್ಯ ಪೂರ್ಣಗೊಂಡಿದೆ.
ಸಾಗುವಾನಿ ಮರದ ಹೊದಿಕೆಯ ಮೇಲೆ ಸರ್ವಮೂಲ ಗ್ರಂಥ ಮತ್ತು ಹಂಸ ಮಂತ್ರ ಬರೆಸಿದ ತಾಮ್ರದ ತಗಡು ಹಾಕಲಾಗಿದೆ. ಅದರ ಮೇಲೆ ಬೆಳ್ಳಿ ಮತ್ತು ಬಂಗಾರದ ತಗಡು ಜೋಡಿಸಲಾಗಿದೆ. ಈಗ ಕೆಳ ಅಂತಸ್ತಿನ ಮರ, ತಾಮ್ರ ಬೆಳ್ಳಿ ಚಿನ್ನ ಆಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಕಲಶಕ್ಕೂ ಚಿನ್ನದ ಲೇಪನ ಗೋಪುರದ ಕಲಶಗಳಿಗೂ ಚಿನ್ನದಲೇಪನ ಮಾಡಲಾಗಿದೆ. ಜೂ. 3ರಂದು ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆಯೊಂದಿಗೆ ಶ್ರೀಕೃಷ್ಣ ಮಠಕ್ಕೆ ಬರಲಿದೆ. ಮೂರು ಕಲಶಗಳು ತಲಾ ಐದೂವರೆ, ನಾಲ್ಕೂವರೆ, ಮೂರು ಮುಕ್ಕಾಲು ಅಡಿ ಎತ್ತರವಿವೆ.
ಸುಮಾರು 4 ಇಂಚಿನ ತಾಮ್ರದ ತಗಡಿನಲ್ಲಿ ಕೃಷ್ಣಮೂರ್ತಿಯನ್ನು ಕೆತ್ತಲಾಗಿದೆ. ಇದರ ಸಂಪೂರ್ಣ ಕಾರ್ಯವನ್ನು ಉಡುಪಿಯ ಕುಶಲಕರ್ಮಿಗಳು ಮಾಡಿದ್ದಾರೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣವಾಗಲಿದೆ.
ವೆಂಕಟೇಶ್ ಶೇಟ್, ಸುವರ್ಣಗೋಪುರ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ