ಉಡುಪಿ: ಮಹಿಳಾ, ಮಕ್ಕಳ ಆಸ್ಪತ್ರೆಯ ಐಷಾರಾಮಿ ವಸ್ತುಗಳ ಸಾಗಾಟಕ್ಕೆ ತಡೆ
Team Udayavani, May 31, 2022, 12:51 AM IST
ಉಡುಪಿ: ಬಿ.ಆರ್.ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಜೂ.1ರಿಂದ ಸರಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ.
ಈ ನಡುವೆ ಸೋಮವಾರ ಆಸ್ಪತ್ರೆ ಕಚೇರಿಯಲ್ಲಿದ್ದ ಐಷಾರಾಮಿ ಸೋಫಾ, ಕುರ್ಚಿ, ಟೇಬಲ್ಗಳನ್ನು ಹೊತ್ತೂಯ್ಯಲು ಯತ್ನಿಸಿದ ಘಟನೆ ನಡೆಯಿತು.
ಸರಕಾರದ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿ ನಿರ್ದಿಷ್ಟ ವರ್ಷಗಳ ಕಾಲ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಬಿಆರ್ಎಸ್ ಹಾಗೂ ಸರಕಾರದ ನಡುವಿನ ಒಡಂಬಡಿಕೆಯಾಗಿತ್ತು. ಆದರೆ ಬಿ.ಆರ್.ಶೆಟ್ಟಿಯವರು ವ್ಯವಹಾರದಲ್ಲಿ ನಷ್ಟಕ್ಕೊಳಗಾದ ಅನಂತರ ಆಸ್ಪತ್ರೆಯನ್ನು ಸರಕಾರಕ್ಕೆ ಒಪ್ಪಿಸಿದ್ದರು.
ಆಸ್ಪತ್ರೆಯಲ್ಲಿದ್ದ ಕಚೇರಿಯ ಐಷಾರಾಮಿ ವಸ್ತುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹೊರಡಲು ಅನುವಾದ ಬಗ್ಗೆ ಜಿಲ್ಲಾ ಸರ್ಜನ್ಗೆ ಮಾಹಿತಿ ಲಭಿಸಿತು. ಕೂಡಲೇ ಅವರು ಪೊಲೀಸರ ಸಹಕಾರದಿಂದ ಆಗಮಿಸಿದ್ದು, ವಸ್ತುಗಳನ್ನು ಆಸ್ಪತ್ರೆಯಲ್ಲಿಯೇ ಇರಿಸುವಂತೆ ಸೂಚನೆ ನೀಡಿದ್ದಾರೆ.