Udyavara ಸೇತುವೆಯಿಂದ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Team Udayavani, Dec 13, 2023, 11:11 PM IST
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆಯ ಮೇಲೆ ಬುಧವಾರ ವ್ಯಕ್ತಿಯೋರ್ವ ತನ್ನ ಸ್ಕೂಟಿಯನ್ನು ನಿಲ್ಲಿಸಿ ಹೊಳೆಗೆ ಹಾರಿದ್ದು ರಾತ್ರಿಯ ವೇಳೆಗೆ ಸುಮಾರು 2 ಕಿ.ಮೀ. ದೂರದ ಅಂಕುದ್ರು ಬಳಿ ಶವ ಪತ್ತೆಯಾಗಿದೆ.
ಉಡುಪಿಯ ಎಲೆಕ್ಟ್ರಾನಿಕ್ಸ್ ಮತ್ತು ಗೃಹೊಪಯೋಗಿ ಸಂಸ್ಥೆಯೊಂದರ ವಾಹನ ಚಾಲಕ ಬೆಂಗಳೂರು ಮೂಲದ ರವೀಂದ್ರ ಭಟ್ (52) ಮೃತ ವ್ಯಕ್ತಿ.
ಬುಧವಾರ ಬೆಳಗ್ಗೆ ಉದ್ಯಾವರ ಸೇತುವೆಯ ಮೇಲೆ ನಿಲ್ಲಿಸಲಾಗಿದ್ದ ಸ್ಕೂಟಿಯಲ್ಲಿ ಮೊಬೈಲ್ ಫೋನು, ಪರ್ಸ್ ದಾಖಲೆ ಪತ್ರಗಳು ಮತ್ತು ವ್ಯಕ್ತಿಯ ಚಪ್ಪಲಿಗಳು ದೊರಕಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಕಟಪಾಡಿ ಹೊರಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಪಾಪನಾಶಿನಿ ಹೊಳೆಯಲ್ಲಿ ಹುಡುಕಾಟ ನಡೆಸಿದರು. ರಾತ್ರಿ ವೇಳೆಗೆ ಶವ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ