ಉಜ್ವಲಾ ಗೋಲ್ಮಾಲ್ ಪ್ರಕರಣ: ಅರ್ಹರಿಗೆ ಗ್ಯಾಸ್ ವಿತರಣೆ ಆರಂಭ
Team Udayavani, Jul 12, 2018, 4:46 PM IST
ಬೈಂದೂರು: ಕೇಂದ್ರ ಸರಕಾರದ ಉಜ್ವಲಾ ಯೋಜನೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ವ್ಯಾಪ್ತಿಯಲ್ಲಿ ಯಾರಧ್ದೋ ಹೆಸರಿನ ಕನೆಕ್ಷನ್ ಇನ್ಯಾರಿಗೋ ನೀಡಿದ್ದ ಪ್ರಕರಣ ತಾರ್ಕಿಕ ಅಂತ್ಯ ಕಾಣುವಂತಿದ್ದು, ಅಸಲಿ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಸಿಗಲಿದೆ.
“ಯಾರಧ್ದೋ ಹೆಸರಿಗೆ ಇನ್ನಾರಿಗೋ ಕನೆಕ್ಷನ್’ ಎಂದು ಯೋಜನೆ ಹಂಚಿಕೆಯಲ್ಲಿ ಆದ ಅಕ್ರಮ ಕುರಿತು ಉದಯವಾಣಿ ಸವಿವರವಾಗಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವಾಲಯ ಕೂಡಲೇ ಕ್ರಮ ಕೈಗೊಂಡಿದ್ದವು. ಜಿಲ್ಲಾಧಿಕಾರಿಗಳು ಜು. 9ರಂದು ಜಿಲ್ಲಾ ಗ್ಯಾಸ್ ವಿತರಕರ ಸಭೆ ಕರೆದು ವಿವರವನ್ನು ನೀಡುವಂತೆ ಆದೇಶಿಸಿದ್ದರು. ಈ ಯೋಜನೆಯ ನೋಡಲ್ ಏಜೆನ್ಸಿಯಾದ ಎಚ್ಪಿಸಿಎಲ್ ಕಂಪೆನಿಯ ಅಧಿಕಾರಿಗಳು ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಜತೆಗೆ ತನಿಖೆಗೂ ಸೂಚಿಸುವುದಾಗಿ ತಿಳಿಸಿದ್ದರು.
ಇದೆಲ್ಲದರ ಪರಿಣಾಮವಾಗಿ ಯೋಜನೆಯ ಅಸಲಿ ಫಲಾನುಭವಿಗೆ ಬುಧವಾರ ಗೌರಿ ಎಂಬವರಿಗೆ ಗಂಗೊಳ್ಳಿಯ ಗ್ಯಾಸ್ ಏಜೆನ್ಸಿಯವರು ಸಂಪರ್ಕ ನೀಡಿದರು. ಗೌರಿ ಅವರು ಬೈಂದೂರಿನ ಹೇರೂರಿನವರಾಗಿದ್ದು, ಪ.ಪಂಗಡಕ್ಕೆ ಸೇರಿದ್ದರು. ಆದರೆ ಇವರ ಹೆಸರಿನಲ್ಲಿ ಗೌರಿ ದೇವಾಡಿಗ ಎಂದು ನಮೂದಿಸಿ ಗಂಗೊಳ್ಳಿಯಲ್ಲಿ ಬೇರೆಯವರಿಗೆ ಗ್ಯಾಸ್ ವಿತರಿಸಲಾಗಿತ್ತು.
ಕಾನೂನು ಕ್ರಮ
ಈ ಕುರಿತು ಮಾತನಾಡಿದ ಅಧಿಕಾರಿಗಳು, ಅರ್ಹ ಫಲಾನುಭವಿಗಳಿಗೆ ಉಜ್ವಲಾ ಯೋಜನೆ ಸಂಪರ್ಕ ದೊರೆಯದಿದ್ದರೆ ತಕ್ಷಣ ಸಮೀಪದ ವಿತರಕರನ್ನು ಭೇಟಿ ಮಾಡಿ ದಾಖಲೆ ನೀಡಿ ಸಂಪರ್ಕ ಪಡೆದುಕೊಳ್ಳಬಹುದು. ಈ ಯೋಜನೆ ದುರುಪಯೋಗದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದು, ಅಕ್ರಮ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಅಕ್ರಮ ಬಯಲು
ಬೈಂದೂರು ಗ್ರಾಮೀಣ ಪ್ರದೇಶದ ಕೆಲವರು ಯೋಜನೆಯ ಸೌಲಭ್ಯ ಪಡೆಯಲು ಗ್ಯಾಸ್ ವಿತರಕರನ್ನು ಭೇಟಿ ಮಾಡಿದಾಗ ನಿಮ್ಮ ಖಾತೆಗೆ ಸಂಪರ್ಕ ನೀಡಿಯಾಗಿದೆ ಎಂದು ಸ್ಥಳೀಯ ಏಜೆನ್ಸಿಯವರು ತಿಳಿಸಿದ್ದಾರೆ.
ಈ ಪ್ರಕರಣದ ವಿವರ ಕಲೆಹಾಕಿ ದಾಗ ಬೈಂದೂರು ವ್ಯಾಪ್ತಿಯ ಹಲವಾರು ಮಂದಿಯ ಟಿನ್ ನಂಬರ್ ಬಳಸಿ ಗಂಗೊಳ್ಳಿ ವಿತರಕರು ಬೇರೆಯವರಿಗೆ ಗ್ಯಾಸ್ ಸಂಪರ್ಕ ನೀಡಿದ್ದರು. ಬ್ರಹ್ಮಾವರದಲ್ಲೂ ಇದೇ ರೀತಿ ಸಾವಿರಾರು ಜನರಿಗೆ ರಾಂಗ್ ಕನೆಕ್ಷನ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.
ಜಿಲ್ಲಾ ಪಂಚಾಯತ್ ಸಭೆಯಲ್ಲಿ ಚರ್ಚೆ; ಎಚ್ಪಿಸಿಎಲ್ ಅಧಿಕಾರಿಗಳಿಂದಲೂ ತನಿಖೆ
ಉಡುಪಿ: ಉಜ್ವಲಾ ಯೋಜನೆಯಡಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಸಂಪರ್ಕ ಹಗರಣ ಬುಧವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರತಿಧ್ವನಿ ಸಿತು. ಜಿಲ್ಲೆಯ ಕೆಲವು ಗ್ಯಾಸ್ ಏಜನ್ಸಿಗಳು ಅಕ್ರಮ ಸಂಪರ್ಕ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆಯ ಪ್ರಗತಿಯ ಕುರಿತು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸಭೆಯಲ್ಲಿ ಪ್ರಶ್ನಿಸಿದರು.
ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು, ಜಿಲ್ಲೆಯ ಎರಡು ಗ್ಯಾಸ್ ಏಜನ್ಸಿಗಳು ಫಲಾನುಭವಿಗಳ ಹೆಸರಿ ನಲ್ಲಿ ಬೇರೆಯವರಿಗೆ ಸಂಪರ್ಕ ನೀಡಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆಗೆ ಸೂಚಿಸಿದ್ದಾರೆ. ಉಜ್ವಲಾ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಎಚ್.ಪಿ.ಸಿ.ಎಲ್. ಸಂಸ್ಥೆಯು ನೋಡಲ್ ಆಗಿದ್ದು, ಪ್ರಕರಣದ ಬಗ್ಗೆ ಎಚ್ಪಿಸಿಎಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಜ್ವಲಾ ಫಲಾನುಭವಿಗಳ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?