ಚರಂಡಿಗೆ ಸ್ಲ್ಯಾಬ್ ಅಳವಡಿಸಿ ರಸ್ತೆ ಅಗಲಗೊಳಿಸಿ


Team Udayavani, Feb 21, 2020, 7:05 AM IST

2002KDLM8PH1

ಕುಂದಾಪುರ: ಮೂವತ್ತಕ್ಕಿಂತ ಹೆಚ್ಚು ಮನೆಗಳಿರುವ ಆಶ್ರಯ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ಹಾಗಾಗಿ ತ್ಯಾಜ್ಯ ನೀರು ನಿಲ್ಲುತ್ತದೆ. ಸಂಜೆಯಾಗುತ್ತಲೇ ಸೊಳ್ಳೆಗಳ ಸಂಗೀತ ಕಛೇರಿ ಆರಂಭವಾಗುತ್ತದೆ. ಮೈಗೆ ಕೈಗೆ ಕಚ್ಚುತ್ತವೆ. ಅನಾರೋಗ್ಯ ಉಂಟಾದರೆ ಯಾರು ಹೊಣೆ. ಸ್ವತ್ಛತೆಯ ಕುರಿತು ಭಾಷಣ ಮಾಡಿ ಅದನ್ನು ಅನುಷ್ಠಾನ ಮಾಡದಿದ್ದರೆ ಹೇಗೆ ಎಂದು ಖಾರವಾಗಿಯೇ ಮಾತಿಗೆ ತೊಡಗುತ್ತಾರೆ ಟಿ.ಟಿ. ರೋಡ್‌ನ‌ ಆಶ್ರಯ ಕಾಲನಿಯ ಜನತೆ.

ಸುದಿನ ವಾರ್ಡ್‌ ಸುತ್ತಾಟ ಸಂದರ್ಭ ಇಲ್ಲಿನ ಜನರು ದೂರುಗಳ ಮೇಲೆ ದೂರು ಎಂಬಂತೆ ಹೇಳಿದ್ದು ಹೆಚ್ಚಾಗಿ ಚರಂಡಿ ಅವ್ಯವಸ್ಥೆ ಕುರಿತಾಗಿಯೇ. ಇಡೀ ವಾರ್ಡ್‌ನಲ್ಲಿ ಪ್ರಮುಖವಾಗಿ ಕೇಳಿ ಬಂದದ್ದು ಮೂರೇ ಸಮಸ್ಯೆ. ಚರಂಡಿಗೆ ಸ್ಲ್ಯಾಬ್ ಅಳವಡಿಸಬೇಕೆಂಬ ಬೇಡಿಕೆ, ರಸ್ತೆಗೆ ಇಂಟರ್‌ಲಾಕ್‌ ಹಾಕಬೇಕೆಂಬ ಮನವಿ, ಚರಂಡಿ ವ್ಯವಸ್ಥೆ ಸರಿಮಾಡಬೇಕೆಂಬ ಆಗ್ರಹ.

ಸ್ಲ್ಯಾಬ್ ಹಾಕಲಿ
ಟಿ.ಟಿ. ರೋಡ್‌ನ‌ ಉದ್ದಕ್ಕೂ ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಯನ್ನು ಅಗೆದು ಹಾಳುಗೆಡವಲಾಗಿದೆ. ಮ್ಯಾನ್‌ಹೋಲ್ಗಳನ್ನು ರಸ್ತೆಯಿಂದ ಎತ್ತರಕ್ಕೆ ಅಳವಡಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲಿ ಎರಡೂ ಬದಿ ಚರಂಡಿಯಿದ್ದು ಆದಕ್ಕೆ ಸ್ಲ್ಯಾಬ್ ಅಳವಡಿಸಿದರೆ ರಸ್ತೆ ಅಗಲವಾಗಲಿದೆ. ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ.

ರಸ್ತೆ ಬೇಕು
ಟಿ.ಟಿ. ರೋಡ್‌ ಕೊನೆಯಾಗುತ್ತಿದ್ದಂತೆ ದೊರೆಯುವ ದೇವಸ್ಥಾನದ ಸಮೀಪ ಅನೇಕ ಮನೆಗಳಿವೆ. ಇಲ್ಲಿಗೆ ಇಂಟರ್‌ಲಾಕ್‌ ಹಾಕಿದ ಅಥವಾ ಕಾಂಕ್ರಿಟ್‌ ರಸ್ತೆ ಬೇಕೆಂಬ ಬೇಡಿಕೆಯಿದೆ. ಕೈಪಾಡಿ ದೇವಸ್ಥಾನ ಬಳಿ, ಮೇಲ್‌ಗ‌ರಡಿ ದೇವಸ್ಥಾನ ಬಳಿ ರಸ್ತೆಗಳಿಗೆ ಇಂಟರ್‌ಲಾಕ್‌ ಹಾಕಿದರೆ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗುತ್ತದೆ.

ಹಾಳಾದ ಬಸ್‌
ಆಶ್ರಯ ಕಾಲನಿ ಬಳಿ ಒಂದು ಹಳೆಯ ಗುಜುರಿ ಬಸ್‌ ನಿಂತಿದೆ. ಇದು ಬ್ಯಾಂಕಿನವರು ಮುಟ್ಟುಗೋಲು ಹಾಕಿದ ಬಸ್‌ ಎನ್ನಲಾಗಿದೆ. ಈ ಬಸ್‌ ಉದ್ಯಾನವನದ ಸಮೀಪ ನಿಂತಿದ್ದು ಅನೈತಿಕ ಚಟುವಟಿಕೆಯ ಅಡ್ಡಾಗಿ ಪರಿಣಮಿಸಿದೆ. ಇದರ ಸಮೀಪ ಬಾವಿ, ಉಪಯೋಗವಿಲ್ಲದ ನೀರಿನ ಹಳೆಯ ಟ್ಯಾಂಕ್‌ ಒಂದು ಇದ್ದು ಅದನ್ನು ತೆರವುಗೊಳಿಸಬೇಕೆಂಬ ಬೇಡಿಕೆಯೂ ಇದೆ. ಇಲ್ಲದೇ ಇದ್ದಲ್ಲಿ ಅಪಾಯ ಸಂಭವಿಸಬಹುದು ಎಂಬ ಆತಂಕವಿದೆ. ಏಕೆಂದರೆ ಪಕ್ಕದಲ್ಲೇ ಶಾಲೆಯಿದೆ.

ನಾಯಿ ಕಾಟ
ಈ ಪರಿಸರದಲ್ಲಿ 15ಕ್ಕಿಂತ ಹೆಚ್ಚಿನ ಬೀದಿ ನಾಯಿಗಳಿವೆ. ಶಾಲಾ ಮಕ್ಕಳ ಓಡಾಟಕ್ಕೆ, ಹಿರಿಯ ನಾಗರಿಕರ ಓಡಾಟಕ್ಕೆ ಈ ನಾಯಿಗಳೇ ಭಯಾನಕಕಾರಿ. ಇವುಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆಗೆ ಒಳಪಡಿಸಬೇಕೆಂದು ಬೇಡಿಕೆ ಸ್ಥಳೀಯರದ್ದಾಗಿದೆ. ಏಕೆಂದರೆ ಆಗಾಗ ಈ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುತ್ತದೆ. ಇಲ್ಲಿನ ಶಾಲೆಗೆ 30ರಷ್ಟು, ಅಂಗನವಾಡಿಗೆ 30ರಷ್ಟು ಮಕ್ಕಳು ಬರುತ್ತಾರೆ. ಈ ಪರಿಸರದ ಮನೆಗಳಲ್ಲೂ ಮಕ್ಕಳಿದ್ದಾರೆ. ಅವರನ್ನು ಆಡಲು ಬಿಡಲು ನಾಯಿ ಗಳಿಂದಾಗಿ ಹೆದರಿಕೆಯಾಗುತ್ತದೆ ಎನ್ನುತ್ತಾರೆ ಮಹಿಳೆಯರು.

ಶೌಚಾಲಯ
ಬಸವೇಶ್ವರ ಯುವಕ ಮಂಡಲದ ಎದುರು ಪುರಸಭೆ ಕಟ್ಟಿಸಿದ ಸಾರ್ವಜನಿಕ ಶೌಚಾಲಯ ಇದೆ. ಇದರಲ್ಲಿ 2 ಶೌಚಾಲಯಗಳು ಸುಸ್ಥಿತಿಯಲ್ಲಿದ್ದು ಇನ್ನೆರಡು ಸುಸ್ಥಿತಿಯಲ್ಲಿ ಇಲ್ಲ. ಇದರ ನಿರ್ವಹಣೆ ಕಡೆಗೆ ಪುರಸಭೆ ಗಮನಕೊಟ್ಟಿಲ್ಲ. ತಿಂಗಳಿಗೊಮ್ಮೆಯಾದರೂ ಸರಿಪಡಿಸಬೇಕೆಂದು ಜನ ಕೇಳುತ್ತಿದ್ದಾರೆ. ಸದ್ಯ ಸ್ಥಳೀಯರೇ ಇದನ್ನು ನಿರ್ವಹಿಸಿದ್ದಾರೆ.

ನೀರಿಲ್ಲ
ಪುರಸಭೆ ನೀರಿನ ಸಂಪರ್ಕ ಇದೆ. ಆದರೆ ಅದು ಸಮಯಪಾಲನೆ ಆಗುತ್ತಿಲ್ಲ. ಪುರಸಭೆ ನೀರು ಸಮಯಕ್ಕೆ ಸರಿಯಾಗಿ ಬಂದರೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ನಳ್ಳಿ ಬುಡದಲ್ಲಿ ಕೊಡಪಾನ ಇಟ್ಟು ನೀರಿಗಾಗಿ ಕಾಯುವ ಸನ್ನಿವೇಶ ಉಂಟಾಗುತ್ತದೆ.

ಒಳಚರಂಡಿ ಮಾಡಲಿ
ಆಶ್ರಯ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ಪೂಣರಗೊಳಿಸಬೇಕು. ಚರಂಡಿಯಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ವಾರ್ಡ್‌ನಿಂದ ಆಯ್ಕೆಯಾದವರು ಕನಿಷ್ಠ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಿಂಗಳಿಗೊಮ್ಮೆಯಾದರೂ ಜನರ ಸಮಸ್ಯೆ ಆಲಿಸಬೇಕು.
-ವಿ. ಉಮೇಶ್‌ ಆಶ್ರಯ ಕಾಲನಿ, ಟಿ.ಟಿ. ರೋಡ್‌

ಅಪಾಯಕಾರಿ ಟ್ಯಾಂಕ್‌ ತೆಗೆಯಲಿ
ಆಶ್ರಯ ಕಾಲನಿ ಬಳಿ ಪಾರ್ಕ್‌ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿ, ಉಪಯೋಗವಿಲ್ಲದ ಹಳೆ ಟ್ಯಾಂಕ್‌ ಇದೆ. ಅದನ್ನು ತೆರವುಗೊಳಿಸಬೇಕು.
-ರೋಹಿತ್‌, ಟಿ.ಟಿ.ರೋಡ್‌

ಆಗಬೇಕಾದ್ದೇನು?
ಚರಂಡಿಗೆ ಸ್ಲ್ಯಾಬ್ ಅಳವಡಿಸಬೇಕು.
ಒಳಚರಂಡಿ ಕಾಮಗಾರಿ ನಡೆಸಬೇಕು.
ರಸ್ತೆಗಳಿಗೆ ಇಂಟರ್‌ಲಾಕ್‌ ಅಳವಡಿಕೆ.

ಕಾಮಗಾರಿ ನಡೆದಿದೆ
ಟಿ.ಟಿ.ರೋಡ್‌ ಪ್ರವೇಶಿಕೆಯಲ್ಲಿ 3.8 ಲಕ್ಷ ರೂ. ವೆಚ್ಚದಲ್ಲಿ ಚರಂಡಿಗೆ ಸ್ಲ್ಯಾಬ್ ಅಳವಡಿಸಲಾಗಿದೆ. ಆಶ್ರಯ ಕಾಲನಿ ಬಳಿಯ ಉದ್ಯಾನವನ ಅಭಿವೃದ್ಧಿಗೆ 5 ಲಕ್ಷ ರೂ. ಮೀಸಲಿಡಲಾಗಿದೆ. ವಿನಾಯಕದಿಂದ ಕೋಡಿಗೆ ಹೋಗುವ ರಸ್ತೆ ಬದಿ ಇಂಟರ್‌ಲಾಕ್‌ ಅಳವಡಿಸಬೇಕೆಂಬ ಬೇಡಿಕೆ ಇದೆ. ಜನರ ಬೇಡಿಕೆಗಳಿಗೆ ಯಥಾಸಾಧ್ಯ ಸ್ಪಂದಿಸಲಾಗುತ್ತಿದೆ. ಇದ್ದ ಅನುದಾನದಲ್ಲಿ ಕಾಮಗಾರಿಗಳನ್ನು ಮಾಡಲಾಗಿದ್ದು ಇನ್ನಷ್ಟು ಕಾಮಗಾರಿಗಳು ಆದ್ಯತೆ ನೆಲೆಯಲ್ಲಿ ಈಡೇರಿಕೆಯಾಗಲಿವೆ.
-ವೀಣಾ ಭಾಸ್ಕರ್‌,
ಸದಸ್ಯರು, ಪುರಸಭೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.