ಮಣಿಪಾಲ ಕೆಎಂಸಿ ನಿವೃತ್ತ ಡೀನ್ ಡಾ| ಎ. ಕೃಷ್ಣ ರಾವ್ ನಿಧನ
Team Udayavani, Jul 27, 2020, 1:24 AM IST
ಉಡುಪಿ: ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮೊದಲ ಸಿಬಂದಿ, ಕೆಎಂಸಿ ನಿವೃತ್ತ ಡೀನ್ ಡಾ| ಎ. ಕೃಷ್ಣ ರಾವ್ (96) ಜು. 26ರಂದು ಮಣಿಪಾಲ ಸೋನಿಯಾ ಕ್ಲಿನಿಕ್ ಆವರಣದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪುತ್ರಿಯರಾದ ಸೋನಿಯಾ ಕ್ಲಿನಿಕ್ನ ಡಾ| ಗಿರಿಜಾ, ಡಾ| ಗೌರಿ, ಡಾ| ಶುಭಗೀತಾ ಅವರನ್ನು ಅಗಲಿದ್ದಾರೆ.
1954ರಲ್ಲಿ ಮಣಿಪಾಲದ ನಿರ್ಮಾತೃ ಡಾ| ಟಿಎಂಎ ಪೈ ಅವರು ದೇಶದ ಮೊದಲ ಖಾಸಗಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ ಸಂದರ್ಭ ಮಣಿಪಾಲಕ್ಕೆ ಬಂದ ಡಾ| ಕೃಷ್ಣ ರಾವ್ ಮತ್ತು ಪತ್ನಿ ಡಾ| ಪದ್ಮಾ ರಾವ್ ಅನಂತರ ಜೀವಿತದ ಕೊನೆಯವರೆಗೂ ಮಣಿಪಾಲದಲ್ಲಿ ನೆಲೆಸಿದ್ದರು. ಡಾ| ರಾವ್ ಮೂಲತಃ ಆಂಧ್ರಪ್ರದೇಶದವರು.
ಫಿಸಿಯಾಲಜಿ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದರು. ಅವರು ಜ್ಞಾನದೊಂದಿಗೆ ಸರಳತೆ, ವಿನಯಶೀಲತೆ, ಬದ್ಧತೆಯನ್ನು ಹೊಂದಿ ಜನಮನ್ನಣೆ ಪಡೆದಿದ್ದರು. ವೈದ್ಯಕೀಯ ಕ್ಷೇತ್ರದ ಶಿಕ್ಷಕರಿಗೆ ಹೊಸ ಬಗೆಯ ಬೋಧನೆಯನ್ನು ಅಳವಡಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ದಾಖಲಾರ್ಹ ಮಹತ್ವಪೂರ್ಣ ಸೇವೆ ಸಲ್ಲಿಸಿದ್ದರು.
ಕೆಎಂಸಿಯ ಡೀನ್ ಆಗಿ 22 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕವೂ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ| ರಾವ್ ಅನೇಕ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ ಹಿರಿಮೆ ಇವರಿಗೆ ಇದೆ. ಮಣಿಪಾಲ ಕೆಎಂಸಿ ಈಗ ಈ ಮಟ್ಟದಲ್ಲಿ ಶೈಕ್ಷಣಿಕ ಗುಣಮಟ್ಟದಲ್ಲಿ ಬೆಳೆಯಲು ಡಾ| ಕೃಷ್ಣ ರಾವ್ ಅವರು ಹಾಕಿದ ಅಡಿಪಾಯ ಕಾರಣವಾಗಿದೆ.
ಜೀವನದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಡಾ| ರಾವ್ ಪ್ರಸಿದ್ಧರಾದುದು ಕೆಎಂಸಿ ಡೀನ್ ಎಂದು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಅಧ್ಯಕ್ಷರಾಗಿಯೂ ಅವರು ಅನೇಕ ವರ್ಷ ಮಾರ್ಗದರ್ಶನ ಮಾಡಿದ್ದರು.
ಡಾ| ಟಿಎಂಎ ಪೈಯವರು ಮಣಿಪಾಲದಲ್ಲಿ ರೋಟರಿ ಕ್ಲಬ್ ಆರಂಭಿಸಿದಾಗ ಡಾ| ರಾವ್ ರೋಟರಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು.
ಸಾರ್ವಜನಿಕರಿಗೆ ಸೋಮವಾರ ಬೆಳಗ್ಗೆ 8.30ರಿಂದ 9 ಗಂಟೆಯವರೆಗೆ ಮಣಿಪಾಲದ ಸೋನಿಯಾ ಕ್ಲಿನಿಕ್ನಲ್ಲಿ ಅಂತಿಮ ನಮನ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು