ವಿಶ್ವನಾಥ ಶೆಟ್ಟಿ ಅಗಲಿಕೆಯಿಂದ ಕಂಬಳ ಕ್ಷೇತ್ರ ಬಡವಾಗಿದೆ : ಕಡಂಬ
Team Udayavani, Jan 9, 2019, 7:45 PM IST
ಪಡುಬಿದ್ರಿ: ವಿಶ್ವನಾಥ ಶೆಟ್ಟಿ ಕರಿಂಜೆ ಅವರ ಅಗಲುವಿಕೆಯಿಂದ ಕಂಬಳ ಕ್ಷೇತ್ರವು ನಿಜಕ್ಕೂ ಬಡವಾಗಿದೆ. ಆದರೂ ಅವರ ಆದರ್ಶಗಳು ಸದಾ ನಮ್ಮೊಡನೆ ಇರುವುದಾಗಿ ಕಂಬಳ ಕ್ಷೇತ್ರದ ಅನುಭವಿ ಹಿರಿಯ, ಕಂಬಳ ಅಕಾಡೆಮಿಯ ಪ್ರೇರಣಾ ಶಕ್ತಿ ಗುಣಪಾಲ ಕಡಂಬ ಹೇಳಿದರು. ಅವರು ಪಡುಬಿದ್ರಿಯ ಬಂಟ್ಸ್ ಸಂಘದಲ್ಲಿ ಜ. 9ರಂದು ನಡೆದಿದ್ದ ಮೂಡುಬಿದಿರೆ ಕರಿಂಜೆ ವಿಶ್ವನಾಥ ಶೆಟ್ಟಿ ಅವರ ವೈಕುಂಠ ಸಮಾರಾಧನೆಯ ಸಂದರ್ಭದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವನಾಥ ಶೆಟ್ಟಿ ಅವರು ಬಾಲ್ಯದ ಕಷ್ಟದ ದಿನಗಳನ್ನು, ಕಂಬಳ ಕ್ಷೇತ್ರಕ್ಕೆ ಕಾಲಿರಿಸಿದ ಬಳಿಕ ತಮ್ಮ ಕೋಣಗಳನ್ನು ಪ್ರೀತಿಸುವುದರೊಂದಿಗೆ ತನ್ನ ಕೆಲಸಗಾರರ, ಮನೆಯ ಹಿರಿ, ಕಿರಿಯ ಹಾಗೂ ಸಮಾಜದಲ್ಲಿ ಸಂಕಷ್ಟಕ್ಕೊಳಗಾದ ಮಂದಿಗೂ ಸಹಾಯ, ಸಹಕಾರಗಳನ್ನಿತ್ತು ಬೆಳೆಸಿದ ಔದಾರ್ಯ ಪೂರ್ಣ ಸ್ವಭಾವ ಇತರರಿಗೆ ಮಾದರಿಯಾಗುವಂಥದ್ದು. ಕೆಲವೊಮ್ಮೆ ನಿಷ್ಠುರವಾದಿಯಾಗಿ ನಮಗೆ ಕಂಡುಬಂದರೂ ಮೃದು ಹೃದಯಿ ಅವರಾಗಿದ್ದರು. ತನ್ನ ತಪ್ಪಿಗಾಗಿ ಯಾವುದೇ ಸಂಕೋಚಗಳಿಲ್ಲದೇ ಕ್ಷಮೆಯಾಚಿಸುವ ಮಹಾನ್ ಗುಣ ಅವರದ್ದಾಗಿತ್ತು ಎಂದರು. ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ನೆರೆದವರೆಲ್ಲರೂ ವಿಶ್ವನಾಥ ಶೆಟ್ಟಿ ಕರಿಂಜೆ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ವಿಶ್ವನಾಥ ಶೆಟ್ಟಿ ಅವರ ಪತ್ನಿ ಶಶಿಕಲಾ ಶೆಟ್ಟಿ, ಪುತ್ರಿ ವಿನುಲತಾ ಶೆಟ್ಟಿ, ಅಳಿಯ ಅಕ್ಷತ್ ಶೆಟ್ಟಿ, ಕಾಪು ಪುರಸಭಾ ಸದಸ್ಯ ಕಿರಣ್ ಆಳ್ವ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಕಂಬಳ ಕ್ಷೇತ್ರದ ಗಣ್ಯರಾದ ಭಾಸ್ಕರ ಕೋಟ್ಯಾನ್ ಎಡೂ¤ರು, ಶಾಂತಾರಾಮ ಶೆಟ್ಟಿ ಬಾರ್ಕೂರು, ಸದಾನಂದ ಶೆಟ್ಟಿ ಬೆಳುವಾಯಿ, ರೋಹಿತ್ ಹೆಗ್ಡೆ ಎರ್ಮಾಳು, ಸಂದೀಪ್ ಶೆಟ್ಟಿ ಕನ್ಯಾನಗುತ್ತು ಕಾಪು, ರತ್ನಾಕರ ಶೆಟ್ಟಿ ಉಳಿಯಾರಗೋಳಿ, ಕಾಪು ದಿವಾಕರ ಶೆಟ್ಟಿ, ನವೀನ್ಚಂದ್ರ ಜೆ. ಶೆಟ್ಟಿ, ಪಿ. ಆರ್. ಶೆಟ್ಟಿ, ಶಾಂತರಾಜ ಜೈನ್, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಇರುವೈಲು ಶಶೀಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?