ಮೊದಲ ಬಾರಿಗೆ ಬತ್ತಿದ ಕಿಂಡಿ ಅಣೆಕಟ್ಟು, ಅಜೆಕಾರು ಪರಿಸರದಲ್ಲಿ ನೀರಿನದ್ದೇ ಸಮಸ್ಯೆ
Team Udayavani, May 16, 2019, 10:41 AM IST
ಅಜೆಕಾರು: ಅದು ದಶಕಗಳ ಹಿಂದೆ ಕಟ್ಟಿದ ಕಿಂಡಿ ಅಣೆಕಟ್ಟು, ಎಂದೂ ಬತ್ತದ ದರ್ಬುಜೆ ದೆಕ್ಕಟ್ಟೆ ನದಿ ನೀರು, ಆದರೆ ಈಗ ಕಿಂಡಿ ಅಣೆಕಟ್ಟಿನಲ್ಲಿ ನೀರಿಲ್ಲ. ಜನರಿಗೆ ಮೊದಲ ಭಾರಿಗೆ ನೀರಿನ ಸಮಸ್ಯೆ. ಇದು ಅಜೆಕಾರು, ಮರ್ಣೆ ಗ್ರಾಮದ ನೀರಿನ ಸಮಸ್ಯೆಯ ಕಥೆ.
ಹೌದು, ದಶಕಗಳ ಹಿಂದೆ ಕಿಂಡಿ ಅಣೆಕಟ್ಟು ಕಟ್ಟಿ ನೀರಿನ ಸಮಸ್ಯೆಗೆ ಪರಿಹಾರ ಕೈಗೊಂಡಿದ್ದ ಈ ಭಾಗದ ಜನರಿಗೆ ಈಗ ಮತ್ತೆ ನೀರಿನ ಸಮಸ್ಯೆ ಭೂತ ಕಾಡುತ್ತಿದೆ. ಈ ಭಾಗದ ಜನರಿಗೆ ನೀರು ಸರಬರಾಜು ಮಾಡುತ್ತಿದ್ದ ಕಿಂಡಿ ಅಣೆಕಟ್ಟಿನ ನೀರು ದಶಕಗಳ ನಂತರ ಮೊದಲ ಬಾರಿಗೆ ಆವಿಯಾಗಿದೆ.
ಸದ್ಯ ಈ ನೀರಿನ ಸಮಸ್ಯಗೆ ತಾತ್ಕಾಲಿನ ಪರಿಹಾರ ಕೈಗೊಂಡಿದ್ದು, ಹೊಳೆಯ ಹೂಳೆತ್ತಿ ಕಿಂಡಿ ಅಣೆಕಟ್ಟಿಗೆ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಅಜೆಕಾರು- ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಕುಮಾರ್ ಅವರು ಮುತುವರ್ಜಿ ವಹಿಸಿ ಜೆಸಿಬಿ ಮೂಲಕ ಹೊಳೆಯ ನೀರನ್ನು ಅಣೆಕಟ್ಟು ಭಾಗಕ್ಕೆ ಹರಿಸುವ ವ್ಯವಸ್ಥೆ ಮಾಡಿದರು. ಮುಂದೆ ನೀರನ್ನು ಫಿಲ್ಟರ್ ಮಾಡಿ ಗ್ರಾಮದ ಜನರಿಗೆ ಉಪಯೋಗಕ್ಕೆ ನಿಡಲಾಗುವುದು ಎಂದು ಅಜೆಕಾರು ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ