ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಎಲ್ಲಿ?


Team Udayavani, Jun 11, 2018, 6:00 AM IST

2105ra2e-2.jpg

ಪಡುಬಿದ್ರಿ: ಹಲವು ಸಮಯಗಳಿಂದ ಸ್ವಂತ ಕಟ್ಟಡವಿಲ್ಲದೆ ದಿನ ದೂಡುತ್ತಿರುವ ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರಾದರೂ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ ಇದೆ. 

ಅಂಚೆ ಇಲಾಖೆ ಕಡತಗಳ ಪ್ರಕಾರ, ಈಗಾಗಲೇ ಪಡುಬಿದ್ರಿ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮೀಸಲು ಆದೇಶ ನೀಡ ಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಸಲಿಗೆ ಈಗ ಅದರ ಹೆಸರಿನಲ್ಲಿ ಯಾವುದೇ ಜಾಗವಿಲ್ಲ!

ಯಾವುದೇ ಜಾಗ ಮೀಸಲಿಲ್ಲ!
ಸದ್ಯ ಗ್ರಾ.ಪಂ. ಕಡತಗಳ ಪ್ರಕಾರ, ಅಂಚೆ ಇಲಾಖೆಗೆ ಪ್ರತ್ಯೇಕ ಜಾಗ ಮೀಸಲಿರಿಸಿಲ್ಲ! ಪಹಣಿ ಪತ್ರದಲ್ಲೂ ಯಾವುದೇ ಮಾಹಿತಿಗಳಿಲ್ಲ. ಬದಲಿಗೆ ಅಂಚೆ ಇಲಾಖೆ ತನಗೆ ನೀಡಲಾಗಿದೆ ಎಂದು ಹೇಳುವ ಜಾಗದಲ್ಲಿ ಸರಕಾರಿ ಜಾಗ ಎಂದು ನಮೂದಾಗಿದೆ. ಆದ್ದರಿಂದ ಮತ್ತೆ ಜಾಗಕ್ಕಾಗಿ ಅಂಚೆ ಇಲಾಖೆ ಪತ್ರ ವ್ಯವಹಾರ ನಡೆಸುವುದು ಅನಿವಾರ್ಯವಾಗಿದೆ. 

ಇಲಾಖೆ ಜಾಗ ಎಲ್ಲಿದೆ? 
1990ರಲ್ಲಿ  ಅಂಚೆ ಇಲಾಖೆಗೆ ಪಡುಬಿದ್ರಿ ಪೊಲೀಸ್‌ ಠಾಣೆ ಮತ್ತು ಪಡುಬಿದ್ರಿ ಪ್ರಾ. ಆ. ಕೇಂದ್ರಗಳ ಬಳಿಯಲ್ಲಿನ ನಿವೇಶನವೊಂದನ್ನು  ವಿಂಗಡಿಸಿ ಕೊಟ್ಟದ್ದು ಹೌದು. ಆದರೆ  ಈ ಜಾಗದಲ್ಲಿ ಇದುವರೆಗೂ ಕಟ್ಟಡವನ್ನು ಅಂಚೆ ಇಲಾಖೆ ನಿರ್ಮಿಸಿಕೊಂಡಿಲ್ಲವಾದ್ದರಿಂದ ಅದು ವಾಪಸ್‌ ಸರಕಾರದ ಸುಪರ್ದಿಗೆ ಹೋಗಿದೆ. ಆದರೆ ಇಂದಿನ ಕಂದಾಯ ಇಲಾಖಾ ದಾಖಲೆಗಳಲ್ಲಿ  ಪಡುಬಿದ್ರಿಯ ನಡಾÕಲು ಗ್ರಾಮದಲ್ಲಿ ಯಾವುದೇ ಭೂಮಿ ಅಂಚೆ ಇಲಾಖೆ ಹೆಸರಲ್ಲಿಲ್ಲ. ಆದರೆ ಕೇಂದ್ರ ಅಂಚೆ ಇಲಾಖೆ ಮಾತ್ರ ಪಡುಬಿದ್ರಿಯ ತನ್ನ ಜಾಗದಲ್ಲಿ 2019ಕ್ಕೆ ಕಟ್ಟಡ ಕಟ್ಟಲು ಸನ್ನದ್ಧವಾಗಿದೆ. ಅಂಚೆ ಇಲಾಖೆಗೆ ನೀಡಿದ್ದ ಜಾಗ ಪಾರ್ಕಿಂಗ್‌ಗೆ, ವಾರದ ಮಾರುಕಟ್ಟೆ ಸಂದರ್ಭ ಗೂಡ್ಸ್‌ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ಬಳಕೆಯಾಗುತ್ತಿದೆ. 

ಕಟ್ಟಡ ನಿರ್ಮಾಣ ಯೋಜನಾ  ಪಟ್ಟಿಯಲ್ಲಿ ಅಡಕ 
ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ  ನಿರ್ಮಾಣಕ್ಕಾಗಿ ಪ್ರತೀ ವರ್ಷ ಬೇಡಿಕೆ ಪಟ್ಟಿಯನ್ನು ದಿಲ್ಲಿ  ನಿರ್ದೇಶನಾಲಯಕ್ಕೆ ರವಾನಿಸಲಾಗುತ್ತಿತ್ತು. ಆದರೆ ಯೋಜನಾ ಪಟ್ಟಿಯಲ್ಲಿ  ಸೇರಿರಲಿಲ್ಲ. ಆದರೆ 2019ರ ವಾರ್ಷಿಕ ಯೋಜನಾ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದ್ದು, ಗ್ರಾ.ಪಂ. ಮೂಲಕ ಜಿಲ್ಲಾಡಳಿತ ನೀಡಿದ ಸ್ಥಳದಲ್ಲಿ  ಕಟ್ಟಡ ನಿರ್ಮಾಣವಾಗಲಿದೆ. 
– ರವಿ,ಅಂಚೆ ಇಲಾಖೆ  
ಸಹಾಯಕ ಅಧೀಕ್ಷಕರು,ಉಡುಪಿ  


ಪಹಣಿ ಪತ್ರವಿಲ್ಲ 

ನಡಾÕಲು ಗ್ರಾಮದ ಸ.ನಂಬ್ರ  47 – 8 ವಿಸ್ತೀರ್ಣ 1.32 ಎಕ್ರೆ  ಸರಕಾರಿ ಜಾಗದ ಕಾಲಂ  ನಂಬ್ರ  11ರಲ್ಲಿ  ಒಟ್ಟಾರೆ ವಿವಿಧ ಸರಕಾರಿ ಕಟ್ಟಡಗಳಿವೆ. ಇದರಲ್ಲಿ 15 ಸೆಂಟ್ಸ್‌ ಜಾಗ ವಿಂಗಡಣೆಯಾಗಿದ್ದರೂ ಅಂಚೆ ಕಚೇರಿಗೆ ನೀಡಿದ ಬಗ್ಗೆ ಯಾವುದೇ ವಿವರ ಇಲ್ಲ. ಅಂಚೆ ಕಚೇರಿಗೆ  ಕಟ್ಟಡ ಬೇಕಾದಲ್ಲಿ  ಪಂಚಾಯತ್‌ ಠರಾವು ಮಂಡಿಸಿ ಹೊಸ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ರವಾನಿಸಬೇಕಿದೆ. 
– ಪಂಚಾಕ್ಷರಿ ಸ್ವಾಮಿ
ಪಡುಬಿದ್ರಿ ಗ್ರಾ. ಪಂ. ಪಿಡಿಒ 

ಟಾಪ್ ನ್ಯೂಸ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.