ವಾಡೆಯ ಸೇವಕರಾಗಿ ಕರ್ತವ್ಯ ನಿರ್ವಹಿಸಿ: ಬಿಷಪ್
Team Udayavani, Aug 8, 2017, 5:50 AM IST
ಕುಂದಾಪುರ: ವಾಡೆಯ ಗುರಿಕಾರರು ತಾವು ಅ ಧಿಕಾರಸ್ಥರಂತೆ ನೆಡೆದುಕೊಳ್ಳದೇ ಸಮಾಜದ ಸೇವಕನಂತೆ ತಮ್ಮ ಕರ್ತವ್ಯ ನಿರ್ವಹಿಸಬೇಕು. ಕೇವಲ ಕ್ರೈಸ್ತರ ಸೇವೆ ಮಾಡುವುದಲ್ಲ, ಕಷ್ಟದಲ್ಲಿರುವ ಎಲ್ಲರ ಸೇವೆ ಮಾಡಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ| ವಂ| ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ ನುಡಿದರು.
ಅವರು ಕುಂದಾಪುರ ವಲಯದ 6 ಚರ್ಚ್ಗಳ ವಾಡೆಯ ಗುರಿಕಾರರಿಗೆ ಕುಂದಾಪುರದ ಸಂತ ಮೇರಿಸ್ ಜೂ. ಕಾಲೇಜಿನ ಸಭಾ ಭವನದಲ್ಲಿ ನೆಡೆದ ಗುರಿಕಾರರ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ನೀಡಿ ಮಾತನಾಡಿದರು.
ಸಂಕಷ್ಟಕ್ಕೆ ಗುರಿಯಾದವರಿಗೆ ಸಹಾಯ ಹಸ್ತ ನೀಡಿ. ವಾಡೆಯಲ್ಲಿ ಶ್ರಮದಾನ ಮಾಡಿ ಸಮಾಜಕ್ಕೆ ಒಳಿತನ್ನು ಮಾಡಿ. ವಾಡೆಯ ಏಕತೆಗಾಗಿ ಶ್ರಮಿಸಿ ಪ್ರೀತಿ ಬಾಂಧವ್ಯದ ಬೆಳವಣಿಗೆಗಾಗಿ ಶ್ರಮಿಸಿರಿ ಎಂದು ಅವರು ಹೇಳಿದರು.
ಕುಂದಾಪುರ, ಪಿಯುಸ್ ನಗರ, ಬಸೂÅರು, ಕೋಟೇಶ್ವರ, ಕೋಟ ಮತ್ತು ಕಂಡೂÉರು ಚರ್ಚ್ಗಳ ವಾಡೆಯ ಗುರಿಕಾರರು ಈ ತರಬೇತಿಯಲ್ಲಿ ಭಾಗವಹಿಸಿದರು.
ಈ ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಧ್ಯಾಪಕ ರೊನಾಲ್ಡ್ ಮೊರಾಸ್ ಉಪಯುಕ್ತ ಮಾಹಿತಿಯನ್ನು ಹಾಗೂ ತರಬೇತಿಯನ್ನು ನೀಡಿದರು. ಮೆಲ್ವಿನ್ ಮಸ್ಕರೇನಸ್ ತರಬೇತಿ ಕಾರ್ಯಾಗಾರಕ್ಕೆ ಸಹಕಾರ ನೀಡಿದರು. ಬರ್ನಾಡ್ ಡಿ’ಕೋಸ್ತಾ, ಜಾರ್ಜ್ ಡಿಸೋಜಾ ಮತ್ತು ಆಶಾ ಕರ್ವಾಲ್ಲೊ ತಮ್ಮ ಪ್ರತಿಕ್ರಿಯೆಯಗಳನ್ನು ಹಂಚಿಕೊಂಡರು
ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ| ಅನಿಲ್ ಡಿ’ಸೋಜಾ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ