ವಿಶ್ವಶಕ್ತಿ-ವ್ಯಕ್ತಿಯ ಸಂಪರ್ಕ= ಪೂಜೆ


Team Udayavani, Aug 22, 2017, 7:10 AM IST

ganapa.jpg

ಮಳೆಗಾಲದಲ್ಲಿ ಮಳೆ ಆರಂಭವಾದ ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರುತ್ತದೆ. ಇದೊಂದು ಅಪ್ಪಟ ಪ್ರಕೃತಿ ಆರಾಧನೆಯ ಹಬ್ಬ. ವರ್ಷಾರಂಭದಲ್ಲಿಯೇ ಪ್ರಕೃತಿ ನಮಗಾಗಿ ಕೊಡುತ್ತಿರುವ ಎಲ್ಲ ಸವಲತ್ತುಗಳಿಗಾಗಿ ಕೃತಜ್ಞತಾರ್ಪಣೆ. ಪೂಜೆ ಅಂದರೆ ಕೃತಜ್ಞತಾರ್ಪಣೆ. ಆದರೆ ಸದ್ದುಗದ್ದಲದ ನಡುವೆ ಕೆಲವು ಬಾರಿ ಮೂಲ ಉದ್ದೇಶ ಮರೆಯುವ ಸಾಧ್ಯತೆ ಇರುತ್ತದೆ. 

ಭಾದ್ರಪದ ಮಾಸದಲ್ಲಿ ಗಣೇಶನ ಹಬ್ಬ ಬರುತ್ತದೆ. ನಾಗನ ಸ್ಥಾನದಲ್ಲಿ ಸುಬ್ರಹ್ಮಣ್ಯನನ್ನು ಪೂಜಿಸುವ ಕ್ರಮವೂ ಇದೆ. ಅನಂತರ ಗಣೇಶನಿಗೆ ಪೂಜೆ. 

ಪ್ರಾಚೀನ ಕಾಲದಲ್ಲಿ ಜನರೆಲ್ಲ ಇರುತ್ತಿದ್ದುದು ನದಿ ತಟಗಳಲ್ಲಿ. ಇದಕ್ಕೆ ಮುಖ್ಯ ಕಾರಣ ನೀರಿನ ಆಶ್ರಯ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವಾಗ ಕೇವಲ ನೀರಲ್ಲ, ಗುಡ್ಡ ಬೆಟ್ಟಗಳಿಂದ ಔಷಧೀಯ ಸಸ್ಯಗಳ ಸಂಪರ್ಕ ಹೊಂದಿದ ನೀರಾಗಿ ಹರಿಯುತ್ತದೆ. ಇದರ ಜೊತೆ ತಾಜಾ ಗುಣಮಟ್ಟದ ಮಣ್ಣೂ ಶೇಖರಣೆಯಾಗುತ್ತದೆ. ಈ ತಾಜಾ ಔಷಧೀಯ ಗುಣದ ಮಣ್ಣನ್ನು ತಂದು ಗಣಪತಿ ವಿಗ್ರಹ ತಯಾರಿಸುವುದು ಕ್ರಮವಾಗಿತ್ತು. ವಿಗ್ರಹ ತಯಾರಿಸುವಾಗ ಅಂದ ಚೆಂದದ ಪ್ರಶ್ನೆ ಮುಖ್ಯವಾಗಿರದೆ, ಪ್ರತಿಯೊಬ್ಬನಲ್ಲಿರುವ ಕಲಾವಂತನಿಗೆ ಒಂದು ವೇದಿಕೆಯಾಗಿರುತ್ತಿತ್ತು. ಒಟ್ಟಾರೆ ಮಣ್ಣಿನಲ್ಲಿ ದೇವನನ್ನು ಕಾಣುವ ಸಂಸ್ಕೃತಿಯಾಗಿತ್ತು. 

ಗಣೇಶ ಮನೆಗೆ ಬರುವುದೆಂದರೆ ಅದು ಸಂಭ್ರಮದ ದಿನ. ಇಲ್ಲಿ ವೈಭವ ಮುಖ್ಯವಲ್ಲ, ಪ್ರೀತಿಯ ಹೃದಯ ಮುಖ್ಯ. ಅದು ದೇವನ ದರ್ಶನ, ಪ್ರದರ್ಶನವಲ್ಲ. 

ವಿಗ್ರಹಕ್ಕೆ ಶುದ್ಧ ಅರಿಶಿನ ಮತ್ತು ಕುಂಕುಮದ ಲೇಪನವೇ ಬಣ್ಣವಾಗಿತ್ತು. ತೇದಿದ ಶ್ರೀಗಂಧದ ಬಳಕೆ ಇದ್ದೇ ಇರುತ್ತದೆ. ತಮ್ಮದೇ ವಠಾರದಲ್ಲಿ ಬೆಳೆದ ಅಕ್ಕಿ ಇತ್ಯಾದಿ ಧಾನ್ಯಗಳಿಂದ ಅಡುಗೆ ತಯಾರಿ ನಡೆಯುತ್ತಿತ್ತು. ಇದೆಲ್ಲವೂ ನಿಸರ್ಗದತ್ತವಾಗಿತ್ತು/ ಸಹಜವಾಗಿತ್ತು. ಕುಂಕುಮ, ಅರಶಿನ, ಶ್ರೀಗಂಧಕ್ಕೆ ಔಷಧೀಯ ಗುಣವಿದೆ. ಇದರ ಲೇಪನ, ಸ್ವೀಕರಣವೂ ಆರೋಗ್ಯದಾಯಿ. ಕುಂಕುಮ, ಅರಶಿನ ಲಕ್ಷಣದ ಸಂಕೇತವೂ ಹೌದು. ಒಟ್ಟಾರೆಯಾಗಿ ಪ್ರಕೃತಿಯಿಂದ ಬಂದ ಇವೆಲ್ಲ ವಸ್ತುಗಳು ನಮ್ಮಲ್ಲಿ ಒಂಥರ ಏಕತೆಯನ್ನು ತರಲೋಸುಗ ಹಬ್ಬಗಳ ಆಚರಣೆ ಬಂದಿರಬೇಕೆಂದೆನಿಸುತ್ತದೆ. ಯಾವುದೇ ರಾಸಾಯನಿಕ ಸಂಪರ್ಕವಿಲ್ಲದೆ ತಯಾರಿಸಿದ ಅಕ್ಕಿ, ಕಬ್ಬು, ಅರಳು, ಬೆಲ್ಲ, ಎಳ್ಳು ಇತ್ಯಾದಿಗಳನ್ನು ಸೇರಿಸಿದ ಅಡುಗೆ ತಯಾರಿಸಿದರೆ ಅದರ ರುಚಿಗಿಂತ ಔಷಧೀಯ ಗುಣ ಹೇಗಿರಲಿಕ್ಕಿಲ್ಲ? ಆಹಾರ ಮತ್ತು ಔಷಧ ಜತೆಜತೆಯಾಗಿದ್ದ ದಿನಗಳು ಅವು.

ಯಾವುದೇ ಒಂದು ವಿಷಯ ಸಹಜವಾಗಿರುತ್ತಿದ್ದರೆ ಅದರ ಪಾವಿತ್ರ್ಯ ಸಹಜವಾಗಿಯೇ ಅನುಭವಕ್ಕೆ ಬರುತ್ತದೆಯೋ ಏನೋ! ಅಸಹಜ ಅರ್ಥಾತ್‌ ಕೃತಕ ಪ್ರಯತ್ನಗಳಾದಲ್ಲಿ ಪಾವಿತ್ರ್ಯ ಅನ್ನೋದು ಅನುಭವಕ್ಕೆ ಬರುವುದೂ ಕಷ್ಟ. ಅಂದರೆ ಮನಸ್ಸುಗಳಿರಬಹುದು, ವಸ್ತುಗಳಿರಬಹುದು. ಅಸಹಜಗಳು ಜಾಸ್ತಿಯಾದಲ್ಲಿ ಪಾವಿತ್ರ್ಯದ ಸೃಷ್ಟಿಯೇ ಸಂಶಯಾತ್ಮಕ ಅಶುದ್ಧ ಮನಸ್ಸುಗಳು, ಅಶುದ್ಧ ವಸ್ತುಗಳನ್ನು ಇರಿಸಿಕೊಂಡು ಉತ್ತಮ ಫ‌ಲಿತಾಂಶ ನಿರೀಕ್ಷಿಸಿದರೆ…! ಸಹಜ ವಸ್ತುಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವಾಗ ತನ್ನೊಳಗೂ ದೇವನನ್ನು ಪ್ರತಿಷ್ಠಾಪನೆ ಮಾಡುವುದು ಸುಲಭ ಸಾಧ್ಯವಾಗಬಹುದು. ಪೂಜೆ ಅಂದರೆ ಕೊನೆಗೂ ವಿಶ್ವಶಕ್ತಿಗೂ (ಯುನಿವರ್ಸಲ್‌ ಎನರ್ಜಿ) ತನಗೂ ಏನೋ ಒಂದು ಸಂಬಂಧದ ಹುಟ್ಟುಹಾಕುವಿಕೆಯಲ್ಲವೆ? ಈ ದೃಷ್ಟಿಯಲ್ಲಿ ಗಣೇಶನ ಹಬ್ಬ ಬರುತ್ತಿದೆ.

- ಸ್ವಾಮಿ

Also Read This…
►Part 1►ಮಾನವ ಪ್ರಪಂಚಕ್ಕೆ ಪ್ರಾಣಿಪ್ರಿಯ ಶಿವ ಸಂದೇಶ : http://bit.ly/2xm3x0G
►Part 2►ಗಣಗಳ ಪತಿಯಾಗಿ ಗಣಪತಿಯ ಸಂದೇಶ: http://bit.ly/2v0gC2U

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.