ಕದಂಬ ಸಾರಿಗೆ ಮಹಾಮಂಡಳಕ್ಕೆ 28 ಕೋಟಿ ರೂ. ನಷ್ಟ
Team Udayavani, Jul 13, 2020, 1:43 PM IST
ಪಣಜಿ: ಗೋವಾ ರಾಜ್ಯ ಕದಂಬ ಸಾರಿಗೆ ಮಹಾಮಂಡಳಕ್ಕೆ ಕಳೆದ ಮೂರು ತಿಂಗಳಲ್ಲಿ ಹೆಚ್ಚಿನ ಆರ್ಥಿಕ ನಷ್ಟವುಂಟಾಗಿದೆ. ಸದ್ಯ ಲಾಕ್ಡೌನ್ ಸಡಿಲಿಕೆ ನಂತರವೂ ಕದಂಬ ಸಾರಿಗೆಯ ಹೆಚ್ಚಿನ ಬಸ್ಗಳು ಓಡಾಟ ನಡೆಸುತ್ತಿಲ್ಲ. ಓಡಾಟ ನಡೆಸುತ್ತಿರುವ ಬಸ್ಗಳಲ್ಲಿ ಕೂಡ ಪ್ರಯಾಣಿಕರ ಕೊರತೆಯಿಂದಾಗಿ ನಷ್ಟವುಂಟಾಗುತ್ತಿದೆ.
ಕಳೆದ ಮೂರು ತಿಂಗಳಲ್ಲಿ ಕದಂಬ ಸಾರಿಗೆ ಮಹಾಮಂಡಳಕ್ಕೆ ಸುಮಾರು 28 ಕೋಟಿ ರೂ. ನಷ್ಟವುಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಸದ್ಯ ಕದಂಬ ಸಾರಿಗೆಯ 150 ಬಸ್ಗಳು ಮಾತ್ರ ಓಡಾಟ ನಡೆಸುತ್ತಿವೆ. ಹೊರ ರಾಜ್ಯಗಳಿಗೆ ಬಸ್ ಗಳು ಓಡಾಟ ನಡೆಸುತ್ತಿಲ್ಲ. ಕಳೆದ ಸುಮಾರು ಮೂರುವರೆ ತಿಂಗಳಿಂದ ಕದಂಬ ಸಾರಿಗೆಯು ಅಂತಾರಾಜ್ಯಗಳಿಗೆ ಬಸ್ ಸಂಚಾರ ಬಂದ್ ಮಾಡಿದೆ. ಲಾಕ್ಡೌನ್ಗೂ ಮುನ್ನ ಪ್ರತಿ ತಿಂಗಳು ಕದಂಬ ಸಾರಿಗೆಗೆ ಒಂಭತ್ತುವರೆ ಕೋಟಿ ಉತ್ಪನ್ನ ಲಭಿಸುತ್ತಿತ್ತು. ಇದು ಸದ್ಯ ಒಂದೂವರೆ ಕೋಟಿ ರೂ. ಗೆ ಬಂದು ನಿಂತಿದೆ ಎಂದು ಕದಂಬ ಮಹಾಮಂಡಳದಿಂದ ಮಾಹಿತಿ ಲಭ್ಯವಾಗಿದೆ.
ಲಾಕ್ಡೌನ್ಗೂ ಮುನ್ನ ದಿನವೊಂದಕ್ಕೆ ಕದಂಬ ಬಸ್ಗಳು ಒಂದು ಲಕ್ಷ ಕಿಮೀ ಓಡಾಟ ನಡೆಸುತ್ತಿದ್ದವು. ಆದರೆ ಸದ್ಯ ಸುಮಾರು 25,000 ಕಿ.ಮೀ ಓಡಾಟ ನಡೆಸುತ್ತಿವೆ. ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಸದ್ಯ ಹೆಚ್ಚಿನ ಜನರು ಸ್ವಂತ ವಾಹನಗಳಲ್ಲಿಯೇ ಓಡಾಟ ನಡೆಸುತ್ತಿದ್ದು, ಬಸ್ಗಳಲ್ಲಿ ಪ್ರಯಾಣಿಕರ ಕೊರತೆಗೂ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು