ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ


Team Udayavani, Jul 26, 2021, 6:56 PM IST

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

ದಾಂಡೇಲಿ : ಅವ ಅಂಥವ, ಇವ ಇಂಥವ, ಅವ ಆ ಧರ್ಮದವ, ಇವ ಈ ಧರ್ಮದವ, ಅವ ಶ್ರೀಮಂತ, ಇವ ಬಡವ ಎಂಬ ನಮ್ಮ ನಮ್ಮಲ್ಲಿ ಕಚ್ಚಾಡುವ ಕಾಲಘಟ್ಟದಲ್ಲಿರುವ ಇಂದಿನ ದಿನಮಾನದಲ್ಲಿಯೂ ಎಲೋ ಮಾನವರೇ ನಮ್ಮನ್ನು ನೋಡಿ ಕಲಿಯಿರಿ ಎಂದು ಮಾತು ಬಾರದ ಪ್ರಾಣಿಗಳು ತಮ್ಮ ಹೃದಯವೈಶಾಲ್ಯತೆಯ ಮೂಲಕವೆ ಹೇಳುವಂತಹ ಅಪೂರ್ವ ದೃಶ್ಯವಿದು.

ಅಂದ ಹಾಗೆ ದಾಂಡೇಲಿ ನಗರದ ಸಮೀಪದಲ್ಲಿರುವ ಅಂಬೇವಾಡಿಯ ನವಗ್ರಾಮ-ಗಾವಟಾನದಲ್ಲಿ ಕಳೆದೆ ಮೂರು ತಿಂಗಳುಗಳಿಂದ ಪ್ರತಿನಿತ್ಯ ಕಂಡು ಬರುತ್ತಿರುವ ಮಾನವೀಯತೆಯ ದೃಶ್ಯವಿದು. ನವಗ್ರಾಮದಲ್ಲಿ ಮೂರು ಮರಿಗಳನ್ನು ಹಾಕಿ ಕೆಲವೆ ಕೆಲವು ದಿನಗಳೊಳಗೆ ವಾಹನದಡಿಗೆ ಸಿಕ್ಕಿ ತಾಯಿ ನಾಯಿಯು ಮೃತಪಟ್ಟಿತ್ತು. ಬೀದಿ ನಾಯಿಯಾಗಿದ್ದ ಮೃತ ನಾಯಿಯ ಮೂರು ಮರಿಗಳು ಆನಂತರ ಅನಾಥವಾಗತೊಡಗಿದ್ದವು. ಇನ್ನೂ ಕೆಲ ಸಮಯದವರೆಗೆ ತಾಯಿಯ ಹಾಲು ಕುಡಿಯಬೇಕಾದ ಈ ನಾಯಿ ಮರಿಗಳು ಇನ್ನೇನೂ ಸತ್ತೇ ಹೋಗಬಹುದು ಎನ್ನುವಷ್ಟರಲ್ಲಿ ಹಂದಿಯೊಂದು ತಾಯಿಯ ರೂಪದಲ್ಲಿ ಬಂದು ನಾಯಿಮರಿಗಳಿಗೆ ಹೊಸ ಬದುಕು ನೀಡುತ್ತದೆ.

ಇದನ್ನೂ ಓದಿ: ದಾಮೋದರ ದೇವರ ಕೃಪೆಯಿಂದ ದೇಶಸೇವೆ ಮಾಡುವ ಭಾಗ್ಯ ಲಭಿಸಿದೆ- ರಾಜ್ಯಪಾಲ ರಾಜೇಂದ್ರ ಅರ್ಲೇಕರ್

ನಗರದ ಆದರ್ಶ ಪ್ರೌಢಶಾಲೆಯ ಶಿಕ್ಷಕರಾದ ಸುಭಾಸ.ಎಸ್.ರಾಥೋಡ ಅವರು ಈ ನಾಯಿ ಮರಿಗಳ ಬಗ್ಗೆ ವಿಶೇಷ ಲಕ್ಷ್ಯವನ್ನಿಟ್ಟು ಕಾಪಾಡಿಕೊಂಡು ಬರುತ್ತಿದ್ದಾರೆ. ಕಳೆದೆರಡು ತಿಂಗಳುಗಳಿಂದ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಹಂದಿ ಬಂದು ಈ ನಾಯಿಮರಿಗಳಿಗೆ ಹಾಲುಣಿಸುತ್ತಿದೆ. ಯಾವುದೋ ಜಾತಿಯ, ಯಾವುದೋ ಹೊಟ್ಟೆಯಲ್ಲಿ ಹುಟ್ಟಿದ್ದ ತಬ್ಬಲಿ ನಾಯಿ ಮರಿಗಳಿಗೆ ತಾಯಿಯ ರೂಪದಲ್ಲಿ ಬಂದಿರುವ ಹಂದಿಯ ಮಾತೃ ಹೃದಯ ಹಾಗೂ ಹೃದಯವೈಶಾಲ್ಯತೆ ಅನೇಕತೆಯಲ್ಲಿ ಏಕತೆಯನ್ನು ಸಾರ ಹೊರಟಿದೆ. ಸಂಘರ್ಷಕ್ಕಿಂತ ಸಾಮಾರಸ್ಯವೆ ಲೇಸು ಎಂಬುವುದನ್ನು ಈ ಹಂದಿ ಮತ್ತು ನಾಯಿ ಮರಿಗಳು ತಮ್ಮ ದೈನಂದಿನ ಮಾನವೀಯತೆಯ ಮೂಲಕ ಸಾದರ ಪಡಿಸುತ್ತಿದೆ.

ಒಟ್ಟಿನಲ್ಲಿ ಹಂದಿಯ ಮಾತೃಹೃದಯ, ಮೂರು ತಬ್ಬಲಿ ನಾಯಿಮರಿಗಳ ತುಂಟಾಟ ಸ್ಥಳೀಯ ನವಗ್ರಾಮದ ಜನತೆಯ ಅಚ್ಚರಿಗೆ ಕಾರಣವಾಗಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.