ಶಿರಸಿ: ಲಸಿಕೆಯೇ ಆಗಿಲ್ಲ,ಕೊಟ್ಟಾಯ್ತು ಮೆಸೇಜ್ ಬಂತು!
Team Udayavani, Oct 14, 2021, 1:25 PM IST
ಶಿರಸಿ: ಕೋವಿಡ್ ಸೋಂಕು ನಿರೋಧಕ ಎರಡನೇ ಡೋಸ್ ಲಸಿಕೆಯೇ ಹಾಕಿಲ್ಲ, ಆದರೂ ಎರಡನೇ ಬಾರಿಯ ಲಸಿಕೆ ಪಡೆದ ಕುರಿತು ದೃಢೀಕರಣ ಮೆಸೇಜ್ ಮೊಬೈಲ್ ಗೆ ಬಂದು ಬೀಳುತ್ತಿದೆ.
ಇಂಥದೊಂದು ವಿಲಕ್ಷಣ ಪ್ರಸಂಗ ಇಲ್ಲಿ ದಾಖಾಗುತ್ತಿದೆ. ಶಿರಸಿಯ ವಕೀಲ ರವೀಂದ್ರ ನಾಥ ನಾಯ್ಕ ಅವರಿಗೂ ಬುಧವಾರ ಸಾಯಂಕಲ ಈ ಮಾದರಿಯ ಮೆಸೇಜ್ ಬಂದಿದ್ದರೆ, ಇನ್ನೊಂದಡೆ ಹೋರಾಟಗಾರ ಪರಮಾನಂದ ಹೆಗಡೆ ಅವರ ಮಗಳಿಗೂ ಇದೇ ರೀತಿ ಮೆಸೇಜ್ ಬಂದಿದೆ!
ಈಗಾಗಲೇ ಶಿರಸಿಯಲ್ಲಿ ಪ್ರಥಮ ಬಾರಿಯ ಲಸಿಕೆ ಪಡೆದು ಡೆಹರಾಡೂನಕ್ಕೆ ಹೋದ ನೌಕರಸ್ಥ ಯುವತಿಗೂ ಎರಡನೇ ಡೋಸ್ ಪಡೆದಿದ್ದಿದ್ದೀರಿ ಎಂಬ ಮಾಹಿತಿ ಬಂದಿದೆ.
ಈ ಮಧ್ಯೆ ಸೋಮನಳ್ಳಿಯ ರೈತರೋರ್ವರು ಪ್ರಥಮ ಬಾರಿಗೆ ಲಸಿಕೆ ಹಾಕಿಸಿಕೊಂಡು ಎರಡನೇ ಡೋಸ್ ಗೆ ಹೋದರೆ ಪ್ರಥಮ ಬಾರಿ ಪಡೆದ ಮಾಹಿತಿಯೇ ದಾಖಲು ಆಗಿಲ್ಲ!
ಲಸಿಕೆ ಹಂಚಿಕೆಯಲ್ಲಿ ಗೋಲ್ಮಾಲ್ ಆಗುತ್ತಿದೆಯಾ ಅಥವಾ ಕಂಪ್ಯೂಟರ್ ಸಂವಹನದ ಕೊರತೆಯಾ ಎಂಬುದು ತನಿಖೆ ಆಗಬೇಕಾಗಿದೆ ಎಂದು ಹೋರಾಟಗಾರ ಪರಮಾನಂದ ಹೆಗಡೆ ಉದಯವಾಣಿ ಮೂಲಕ ಆಗ್ರಹಿಸಿದ್ದಾರೆ.
ಒಮ್ಮೆ ಲಸಿಕೆ ಪಡೆದಿದ್ದೀರಿ ಎಂದು ದಾಖಲಾದರೆ ಜಿಲ್ಲಾ ಕೇಂದ್ರದ ಆರೋಗ್ಯ ಕಚೇರಿ ಟೆಕ್ನಿಕಲ್ ಜನರೇ ಸರಿ ಮಾಡಬೇಕು. ಬಹುತೇಕ ಜನರಿಗೂ ಈ ಬಗ್ಗೆ ಮಾಹಿತಿ ಇಲ್ಲ.
ಲಸಿಕೆ ಪಡೆಯದೇ ಇರುವಂತೆ ಇಲ್ಲ, ಆಧಾರ ನಂಬರ್ ಕೊಡದಿದ್ದರೆ ಲಸಿಕೆ ಇಲ್ಲ. ಕೊಟ್ಟರೆ ಪಡೆದಿದೆ ಲಸಿಕೆ ಎಂದು ಆ್ಯಪ್ ಹೇಳುತ್ತಿದೆ. ಪೀಕಲಾಟಕ್ಕೆ ಕೋವಿಡ್ ಲಸಿಕೆ ಪಡೆಯುವವರು ಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ