ಮನೆ ಅಂಗಳದಲ್ಲೇ ಮೃತಪಟ್ಟ ಜೋಡೆತ್ತು
Team Udayavani, Jul 5, 2021, 9:00 PM IST
ಶಿರಸಿ: ಜೋಡೆತ್ತಿನ ಮಾಲೀಕ ಕೆರೆಯಲ್ಲಿ ಮೈ ತೊಳಸಿಕೊಂಡು ಮನೆ ಅಂಗಳಕ್ಕೆ ಕರೆ ತರುತ್ತಿದ್ದಂತೆ ಕುಸಿದು ಬಿದ್ದ ಎರಡೂ ಎತ್ತುಗಳು ರೈತನ ಕಣ್ಣೆದುರೇ ಮೃತಪಟ್ಟ ಧಾರುಣ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.
ಇಲ್ಲಿನ ರೈತ ಹಾಲೇಶ ತಿಪ್ಪಣ್ಣ ಗಾಳಿ ದಾಸನಕೊಪ್ಪ ಅವರಿಗೆ ಸಂಬಂಧಿಸಿದ ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯದ ಎತ್ತುಗಳು ಮೃತಪಟ್ಟು ರೈತನಿಗೆ ದಿಕ್ಕು ಕಾಣದಂತಾಗಿದೆ. ಎಂದಿನಂತೆ ರವಿವಾರ ಕೆರೆಯಲ್ಲಿ ಮೈ ತೊಳಸಿಕೊಂಡು ಮನೆಗೆ ಕರೆ ತಂದಿದ್ದರು. ಹಾಲೇಶ ಅವರ ಎರಡು ಎಕರೆ ಕೃಷಿ ಕ್ಷೇತ್ರ ಹಾಗೂ ಉಳಿದವರ ಬೇಸಾಯಕ್ಕೂ ನೆರವಾಗುತ್ತಿದ್ದ ಜೋಡೆತ್ತಿನ ಅಕಾಲಿಕ ಸಾವು ಕೈತನನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
ಪಶು ತಜ್ಞರು ವಿಷ ಆಹಾರ ಸೇವಿಸಿದ ಪರಿಣಾಮ ಆಗಿರಬೇಕು ಎಂದಿದ್ದು, ಮರಣೋತ್ತರ ಪರೀಕ್ಷೆಯಿಂದ ಇದು ದೃಢವಾಗಬೇಕಿದೆ. ಪಶು ಆಹಾರದಲ್ಲಿ ವಿಷ ಇತ್ತೋ? ಕೆರೆಯ ನೀರಿನಲ್ಲೋ ಎಂಬುದೂ ತನಿಖೆಯಿಂದ ಗೊತ್ತಾಗಬೇಕಿದೆ. ಬಡ ರೈತನ ನೋವಿಗೆ ಸ್ಪಂದಿಸುವಂತೆ ಈ ಭಾಗದ ನಾಗರಿಕರು ಸರಕಾರವನ್ನು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…