ಒಬ್ಬರಿಗೊಂದೊಂದು ರೀತಿ ಹೋಂ ಕ್ವಾರಂಟೈನ್‌


Team Udayavani, Jul 18, 2020, 12:50 PM IST

ಒಬ್ಬರಿಗೊಂದೊಂದು ರೀತಿ ಹೋಂ ಕ್ವಾರಂಟೈನ್‌

ಶಿರಸಿ: ಹೋಂ ಕ್ವಾರಂಟೈನ್‌ ನಿಯಮ ಸರಕಾರಿ ವೈದ್ಯರಿಗೊಂದು ಹಾಗೂ ಖಾಸಗಿ ಆಸ್ಪತ್ರೆ ವೈದ್ಯರಿಗೊಂದು ಎಂಬಆರೋಪ ಬಲವಾಗಿ ಕೇಳಿ ಬಂದಿದೆ. ಈ ನೋವು ಈಗ ಜನಸಾಮಾನ್ಯರ ಆರೋಗ್ಯ ರಕ್ಷಣೆಗೂ ತೊಡಕಾಗುವ ಸಾಧ್ಯತೆ ಎದುರಾಗಿದೆ.

ಶಿರಸಿಯಲ್ಲಿ ಕೋವಿಡ್‌ 19ರ ಆತಂಕ ಹಾಗೂ ಕ್ವಾರಂಟೈನ್‌ ನಿಯಮ ಕಾರಣದಿಂದ ಅನೇಕ ಆಸ್ಪತ್ರೆಗಳು, ವೈದ್ಯರು ಸೇವೆ ಸಲ್ಲಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶಾಲನ ನಗರದ ಸೋಂಕಿತ ವ್ಯಕ್ತಿಗೆ ಎರಡು ಖಾಸಗಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಕಾರಣಕ್ಕೆ ವೈದ್ಯರು ಗಂಟಲು ದ್ರವ ಕೊಟ್ಟು ಕ್ವಾರಂಟೈನ್‌ ಆಗಿದ್ದರು. ಇದಾದ ಬಳಿಕವೇ ಈ ಸಮಸ್ಯೆ ಉಲ್ಬಣಗೊಂಡಿದೆ. ವೈದ್ಯರಿಗೆ, ಸಿಬ್ಬಂದಿಗೆ ನೆಗೆಟಿವ್‌ ಬಂದರೂ ದವಾಖಾನೆಗೆ ಎಷ್ಟು ದಿನ ಸೀಲ್‌ಡೌನ್‌, ಕ್ವಾರಂಟೈನ್‌ ಎಂಬುದಕ್ಕೆ ಗೊಂದಲಗಳಿವೆ. ಇವರು ಪುನಃ ಸೇವೆ ಯಾವಾಗ ಕೊಡಬೇಕು ಎಂಬುದು ಆಡಳಿತದವರು ಸ್ಪಷ್ಟಗೊಳಿಸಬೇಕಿದೆ.

ಈ ಮಧ್ಯೆ ಖಾಸಗಿ ಆಸ್ಪತೆಗಳಿಗೆ ಕಿಡ್ನಿ, ಹೃದಯ ಸಂಬಂಧಿಸಿ ತೆರಳಿದವರೂ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಇಲ್ಲ, ಜ್ವರ ಇಲ್ಲ ಎಂದು ಪತ್ರ ತರಬೇಕಾಗಿದೆ. ರೋಗಿಯೊಬ್ಬರನ್ನು ಕರೆದುಕೊಂಡು ಹೋಗಿ ಸರಕಾರಿ ವೈದ್ಯರನ್ನು ಕಂಡು ಪತ್ರ ತರುವ ತನಕ ಹೈರಾಣಾದ ಉದಾಹರಣೆ ಕೂಡ ನಡೆಯುತ್ತಿದೆ. ಕೋವಿಡ್‌ 19ರ ಆತಂಕದ ನಡುವೆ ಸಣ್ಣಪುಟ್ಟ ಕಾಯಿಲೆಗಳಿಗೆ ಕೂಡ ಚಿಕಿತ್ಸೆಗೆ ಕಷ್ಟವಾಗುತ್ತಿದೆ.

ಪ್ರಶ್ನೆಗಳು ಹಲವು: ಎಲ್ಲ ಸೌಲಭ್ಯವನ್ನೂ ಸರಕಾರಿ ಆಸ್ಪತ್ರೆಯಲ್ಲಿ ಕೊಡಿಸಲು ಸಾಧ್ಯವಿಲ್ಲ.ಕೆಲ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳು ಅನಿವಾರ್ಯವಾಗಿದೆ. ಅವುಗಳಲ್ಲಿ ಉಳಿಸಿಕೊಂಡು ಚಿಕಿತ್ಸೆ ಕೊಡಬೇಕಾದರೆ ಸರಕಾರಿ ಆಸ್ಪತ್ರೆಯ ಕೋವಿಡ್‌ ಟೆಸ್ಟ್‌ ಆಗಬೇಕು. ಅದರ ವರದಿ ಬರುವ ತನಕ ಏನು? ಚಿಕಿತ್ಸೆ ಯಾರು ಕೊಡುತ್ತಾರೆ? ಒಮ್ಮೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ನಂತರ ಕೋವಿಡ್‌ ಬಂದರೆ ಕ್ವಾರಂಟೈನ್‌ ಕಷ್ಟ. ಈ ಕಾರಣದಿಂದ ಅಂತರ ಕಾಯ್ದುಕೊಳ್ಳುವಂತಾಗಿದೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ ಕೂಡ ಉಂಟಾಗಿದೆ. ಕೋವಿಡ್‌ ಆತಂಕದಿಂದ ಕೆಲ ನರ್ಸ್‌ಗಳು ಕೂಡ ಆಸ್ಪತ್ರೆ ತೊರೆದದ್ದೂ ಇದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿ ರೋಗಿಗಳಿಗೆ ಉಂಟಾಗುವ ಆತಂಕ ದೂರ ಮಾಡಬೇಕಿದೆ. ಅನೇಕರು ಆಸ್ಪತ್ರೆಗೇ ಬರಲು ಹಿಂದೇಟು ಹಾಕುವವರೂ ಇದ್ದಾರೆ. ಈ ವಿಲಕ್ಷಣ ಸಂಕಟ ಹೋಗಲಾಡಿಸಬೇಕಿದೆ.

ಕ್ವಾರಂಟೈನ್‌ ನಿಯಮ ಖಾಸಗಿ, ಸರಕಾರಿ ಆಸ್ಪತ್ರೆಗಳಿಗೆ ಬೇರೆ ಬೇರೆ ಇಲ್ಲ. ಗೊಂದಲಗಳನ್ನು ಶೀಘ್ರ ಇತ್ಯರ್ಥಗೊಳಿಸುತ್ತೇವೆ. ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.- ಡಾ| ಈಶ್ವರ ಉಳ್ಳಾಗಡ್ಡಿ, ಎಸಿ ಶಿರಸಿ

ಕೋವಿಡ್‌ ನೆಗೆಟಿವ್‌ ಬಂದರೂ ಎಷ್ಟ ದಿನಗಳ ಕ್ವಾರಂಟೈನ್‌ ನಿಯಮ ಎಂಬುದು ಪಕ್ಕಾ ಆಗಬೇಕು. ಚಿಕಿತ್ಸೆ ಕೊಡಲು ತೊಂದರೆ ಇಲ್ಲ. ಆದರೆ, ನಿಯಮಗಳದ್ದೇ ಆತಂಕ. –ಹೆಸರು ಹೇಳದ ಪ್ರಸಿದ್ಧ ಖಾಸಗಿ ಆಸ್ಪತ್ರೆ ವೈದ್ಯ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.