ವೈದ್ಯರ ಮೇಲೆ ಹಲ್ಲೆ: ಖಾಸಗಿ ಆಸ್ಪತ್ರೆಗಳು ಬಂದ್
•ಕೊಲ್ಕತ್ತದಲ್ಲಿ ನಡೆದ ಘಟನೆ ಖಂಡಿಸಿ ಜಿಲ್ಲಾದ್ಯಂತ ಎಲ್ಲ ಖಾಸಗಿ ವೈದ್ಯರ ಸೇವೆ ಸ್ಥಗಿತ•ಚಿಕಿತ್ಸೆ ಸಿಗದೆ ಪರದಾಡಿದ ರೋಗಿಗಳು
Team Udayavani, Jun 18, 2019, 8:30 AM IST
ಅಂಕೋಲಾ: ವೈದ್ಯರ ಮೇಲೆ ಆಗುತ್ತಿರುವ ಹಲ್ಲೆ ಖಂಡಿಸಿ ತಾಲೂಕಿನ ವೈದ್ಯರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಶಿರಸಿ: ಕಲ್ಕತ್ತದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಆಕ್ಷೇಪಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ಸದಸ್ಯರು ದವಾಖಾನೆ, ಆಸ್ಪತ್ರೆಗಳ ಬಾಗಿಲು ತೆರೆಯದೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಪ್ರಮುಖರಾದ ಡಾ| ತನುಶ್ರೀ ಹೆಗಡೆ, ಡಾ| ದಿನೇಶ ಹೆಗಡೆ, ಡಾ| ಶಿವರಾಮ ಕೆ.ವಿ., ಡಾ| ಕೃಷ್ಣಮೂರ್ತಿ ರಾಯಸದ, ಡಾ| ಡಿ.ಎಂ. ಹೆಗಡೆ ಇತರರು ಮಾತನಾಡಿ ಜನಪ್ರತಿನಿಧಿಗಳು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಸ್ವಾಸ್ಥ್ಯ, ರೋಗಿಯ ಆರೋಗ್ಯಕ್ಕೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುವ ವೈದ್ಯರ ವಿರುದ್ಧ ಇಂಥ ಘಟನೆಗಳು ಪದೇಪದೇ ಆಗುತ್ತಿದೆ. ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲವಾಗಿದೆ. ಇದರಿಂದ ಅಸುರಕ್ಷತೆ ವಾತಾವರಣದಲ್ಲಿ ವೈದ್ಯರಿದ್ದಾರೆ. ಈಗಾಗಲೇ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಬಿಗಿಯಾದ ಕಾಯಿದೆ ಅನುಷ್ಠಾನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಆಗಬೇಕು ಎಂದೂ ಆಗ್ರಹಿಸಿದರು. ಉತ್ತರ ಕನ್ನಡದಲ್ಲಿ ಕೂಡ ಸಾಕಷ್ಟು ಸಲ ವೈದ್ಯರ ಮೇಲೆ ಹಲ್ಲೆಯಾಗಿದೆ.
ಒಳ ರೋಗಿಗಳ ವಿಭಾಗದಲ್ಲಿ ತುರ್ತು ಸ್ಥಿತಿಯಲ್ಲಿ, ಡಿಲೆವರಿ ಸಂದರ್ಭದಲ್ಲಿ, ಅಪಘಾತದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಆಗುತ್ತವೆ. ವೈದ್ಯರು ಪ್ರಾಮಾಣಿಕವಾಗಿ ಕಾರ್ಯ ಮಾಡಿದರೂ ಚಿಕಿತ್ಸೆ ಸ್ಪಂದಿಸದೇ ಇದ್ದಾಗ ಏನು ಮಾಡಬೇಕು ಎಂದೂ ಕೇಳಿದ ಅವರು, 2009 ಕಾಯಿದೆ ಬಂದಿದ್ದರೂ ಪ್ರಯೋಜನ ಆಗಿಲ್ಲ ಎಂದೂ ಹೇಳಿದರು.
ಶಿರಸಿ ಐಎಂಎ ಅನೇಕ ಕಾರ್ಯ ಮಾಡುತ್ತಿದೆ. ಸರಕಾರದ ಜೊತೆಗೆ ಕೂಡ ಅನೇಕ ಪಬ್ಲಿಕ್ ಪ್ರೈವೇಟ್ ಪಾಟ್ನರ್ ಶಿಪ್ ಜೊತೆ ಕೆಲಸ ಮಾಡುತ್ತಿದೆ. ಬ್ಲಿಡ್ ಬ್ಯಾಂಕ್, ನವಜಾತ ಶಿಶು ವಿಭಾಗಗಳನ್ನೂ ಪಂಡಿತ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಶಿರಸಿ ಸಿಟಿಸ್ಕ್ಯಾನ್ನಲ್ಲಿ ರವಿವಾರ ಕೂಡ ತಜ್ಞರು ಪಾಳಿ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದಾದ ಎಲ್ಲ ಬಗೆಯ ಸೇವೆಗಳನ್ನೂ ಒದಗಿಸಲಾಗುತ್ತಿದೆ ಎಂದೂ ಹೇಳಿದರು.
ಐಎಂಎ ತೀರ್ಮಾನಕ್ಕೆ ದಂತ ವೈದ್ಯರ ಸಂಘ ಕೂಡ ಬೆಂಬಲ ಕೊಡುತ್ತದೆ ಎಂದು ಜಿಲ್ಲಾ ಘಟಕದ ಪ್ರಮುಖರಾದ ಡಾ| ಅರ್ಪಣಾ ಹೆಗಡೆ ತಿಳಿಸಿದರು.
ಡಾ| ರವಿಕಿರಣ ಪಟವರ್ಧನ್, ಡಾ| ಧರ್ಮಶಾಲಾ, ಡಾ| ರಮೇಶ ಹೆಗಡೆ, ಡಾ| ಕೈಲಾಶ ಪೈ, ಡಾ| ಎನ್.ಆರ್. ಹೆಗಡೆ, ಡಾ| ಮಧುಕೇಶ್ವರ ಜಿ.ವಿ., ಡಾ| ಸುಮನ್ ಹೆಗಡೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?