Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ


Team Udayavani, Mar 28, 2024, 11:40 PM IST

1-dsad

ಗೋಕರ್ಣ : ಈಗ ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳು ನಡೆಯುತ್ತಿದ್ದರೆ, ಇನ್ನು ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದಿದೆ. ಹೀಗಾಗಿ ಸಹಜವಾಗಿ ಪ್ರವಾಸಿ ತಾಣಗಳತ್ತ ಆಗಮಿಸುತ್ತಿದ್ದು, ತಾಪಮಾನ ಏರಿಕೆಯಿಂದಾಗಿ ಸಹಜವಾಗಿಯೆ ನದಿ ಹಾಗೂ ಸಮುದ್ರದಲ್ಲಿ ಈಜಾಡುತ್ತಾರೆ. ಆದರೆ ಜೆಲ್ಲಿಫಿಶ್ ಹಾವಳಿಯಿಂದಾಗಿ ಪ್ರವಾಸಿಗರು ಆತಂಕಕ್ಕೆ ಸಿಲುಕಿದ್ದಾರೆ.

ಗೋಕರ್ಣ, ಮುರ್ಡೇಶ್ವರ, ಗಂಗಾವಳಿ ನೀರು ಇನ್ನು ಗೋವಾದ ಬೀಚ್‌ಗಳಲ್ಲಿ ಜೆಲ್ಲಿ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜೆಲ್ಲಿ ಮೀನುಗಳಿರುವ ಪ್ರದೇಶಗಳಲ್ಲಿ ಜನರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಬೀಚ್‌ಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಪ್ರಪಂಚದಾದ್ಯಂತದ ಕರಾವಳಿ ಪ್ರದೇಶಗಳಲ್ಲಿ ಕೆಲವು ಜಾತಿಯ ಜೆಲ್ಲಿ ಮೀನುಗಳು ವಿಷಪೂರಿತವಾಗಿವೆ ಮತ್ತು ಅವುಗಳು ಕಚ್ಚಿದರೆ ತೊಂದರೆಯುಂಟಾಗುವ ಸಾಧ್ಯತೆಯಿರುತ್ತದೆ. ಸುಮಾರು 2 ಸಾವಿರಕ್ಕೂ ಅಧಿಕ ಪ್ರಬೇಧವನ್ನು ಹೊಂದಿರುವ ಈ ಜೆಲ್ಲಿಫಿಶ್ ಫಿಲಿಪೈನ್ಸ್ ನಂತಹ ದೇಶಗಳಲ್ಲಿ ಪ್ರತಿವರ್ಷ ಅನೇಕ ನಾಗರಿಕರು ಜೆಲ್ಲಿ ಮೀನುಗಳ ಕುಟುಕಿಗೆ ಬಲಿಯಾಗುತ್ತಾರೆ.

ಗೋವಾ ರಾಜ್ಯದ ಕರಂಜಾಲೆ, ಮಿರಮಾರ್ ಸಿಕೇರಿ, ಸಮುದ್ರ ತೀರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಲ್ಲಿ ಮೀನುಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗೇ ಗೋಕರ್ಣದಲ್ಲಿ ಜೆಲ್ಲಿಫಿಶ್ ಕೆಲವು ವರ್ಷಗಳ ಹಿಂದೆ ತೀವ್ರವಾಗಿ ಕಾಣಿಸಿಕೊಂಡು ಸಮುದ್ರದಲ್ಲಿ ಈಜಾಡುವ ಪ್ರವಾಸಿಗರ ಮೇಲೆ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡಿ ನಂತರ ತಪ್ಪಿಸಿಕೊಂಡು ಬಂದ ಸಾಕಷ್ಟು ಉದಾಹರಣೆಗಳಿವೆ.

ಈ ಜೆಲ್ಲಿಫಿಶ್ ವಿವಿಧ ಆಕಾರಗಳನ್ನು ಹೊಂದಿದ್ದು, ಮನುಷ್ಯನ ಯಾವುದೇ ಭಾಗಗಳಿಗೆ ಅದು ಸುಲಭವಾಗಿ ಸುತ್ತಿಕೊಳ್ಳುತ್ತದೆ. ಹೀಗಾಗಿ ಮುಳ್ಳು ತಿರುಚಿದ ಗಾಯದಂತೆ ಕಂಡುಬರುವುದರ ಜತೆಗೆ ವಿಪರೀತ ತುರಿಕೆ ಬಂದು ಆಸ್ಪತ್ರೆಗೂ ಕೂಡ ದಾಖಲಾಗುವ ಪರಿಸ್ಥಿತಿ ಬರುತ್ತದೆ. ಇಂತಹುದೇ ಪರಿಸ್ಥಿತಿ ಗೋಕರ್ಣದಲ್ಲಿ 2 ವರ್ಷಗಳ ಹಿಂದೆ ನಡೆದಿದ್ದವು. ಆದರೆ ಈಗ ಪ್ರವಾಸಿಗರ ಕಣ್ಮುಂದೆಯೇ ಈ ಜೆಲ್ಲಿಫಿಶ್ ಹಾದುಹೋಗುವುದು ಹಾಗೂ ಕೆಲವರಿಗೆ ಸ್ಪರ್ಶ ಕೂಡ ಮಾಡಿದ್ದರಿಂದಾಗಿ ಸಹಜವಾಗಿಯೇ ನೀರಿಗಿಳಿಯುವ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ.

ಜೆಲ್ಲಿಫಿಶ್‌ನ್ನು ಭಕ್ಷಿಸುವ ಕಡಲಾಮೆ
ಈ ಜೆಲ್ಲಿಫಿಶ್ ಈಜಾಡುವವರಿಗೆ ಮಾತ್ರವಲ್ಲ, ಇದು ಮುಖ್ಯವಾಗಿ ಮೀನಿನ ಮೊಟ್ಟೆಗಳನ್ನು ತಿನ್ನುತ್ತದೆ. ಹೀಗಾಗಿ ಇದರ ಸಂಖ್ಯೆ ಹೆಚ್ಚಿದರೆ ಸಹಜವಾಗಿಯೇ ಮತ್ಯಕ್ಷಾಮ ಉಂಟಾಗುತ್ತದೆ. ಹಾಗೇ ಇದು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಮೀನುಗಳು ತಮ್ಮ ಪಥವನ್ನು ಬದಲಿಸಿ ಬೇರೆ ಕಡೆ ತೆರಳುವುದರಿಂದ ಸಹಜವಾಗಿಯೇ ಮೀನುಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಇಂತಹ ಅಪಾಯಕಾರಿ ಜೆಲ್ಲಿಫಿಶ್‌ಗಳನ್ನು ಭಕ್ಷಿಸುವ ಏಕೈಕ ಜೀವಿಯೆಂದರೆ ಅದು ಕಡಲಾಮೆಯಾಗಿದೆ. ಸಮುದ್ರದಲ್ಲಿ ಕಡಲಾಮೆಗಳ ಸಂಖ್ಯೆ ಹೆಚ್ಚಾದರೆ ಇಂತಹ ಜೆಲ್ಲಿಫಿಶ್‌ಗಳ ಸಂಖ್ಯೆ ಕೂಡ ಕ್ಷೀಣಿಸುತ್ತದೆ. ಹೀಗಾಗಿ ಮೀನುಗಾರರು ತಮ್ಮ ಬಲೆಗೆ ಕಡಲಾಮೆ ಸಿಕ್ಕರೂ ಅದನ್ನು ಪುನಃ ನೀರಿಗೆ ಬಿಡುತ್ತಾರೆ. ಹಾಗೇ ಅರಣ್ಯ ಇಲಾಖೆಯವರು ಕೂಡ ಇದರ ಮಹತ್ವವನ್ನು ಅರಿತು ಇದು ಮೊಟ್ಟೆ ಹಾಕಿದ ನಂತರ ಸುತ್ತಲೂ ರಕ್ಷಣಾ ಕವಚ ಹಾಕಿ ಅದು ಮರಿಯಾಗಿ ಹೊರಬಂದ ನಂತರ ಅದನ್ನು ಮತ್ತೆ ಸಮುದ್ರಕ್ಕೆ ಬಿಡುತ್ತಾರೆ. ಕೇವಲ ಒಂದು ತಿಂಗಳಲ್ಲಿ ಕಾರವಾರದಿಂದ ಮುರ್ಡೇಶ್ವರದವರೆಗೆ ಸಾಕಷ್ಟು ಕಡಲಾಮೆಗಳ ಗೂಡುಗಳು ಕಂಡುಬಂದಿದ್ದು, ಅದನ್ನು ಸಂರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಡುತ್ತಿದ್ದಾರೆ.

ಜೆಲ್ಲಿ ಮೀನುಗಳು ಪ್ರಪಂಚದಾದ್ಯಂತ ಮತ್ತು ಎರಡೂ ಧ್ರುವ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಜೆಲ್ಲಿ ಮೀನುಗಳು ಮೇಲ್ಮೈ ನೀರಿನಿಂದ ಆಳ ಸಮುದ್ರದವರೆಗೆ ಕಂಡುಬರುತ್ತವೆ. ಸ್ಕೈಫೋಜೋವಾನ್ಸ್ ಉಪ್ಪುನೀರಿನ ಜೆಲ್ಲಿ ಮೀನುಗಳು ಪ್ರತ್ಯೇಕವಾಗಿ ಸಮುದ್ರದಲ್ಲಿವೆ. ಆದರೆ ಹೈಡ್ರೋಜೋವಾದಂತಹ ಜೆಲ್ಲಿ ಮೀನುಗಳು ಸಿಹಿ ನೀರಿನಲ್ಲಿಯೂ ಕಂಡುಬರುತ್ತದೆ. ಇದು ಮನುಷ್ಯನಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
– ಡಾ. ಬಾಬನ್ ಇಂಗೋಲ್ ಹಿರಿಯ ಸಾಗರ ವಿಜ್ಞಾನಿ

ನಾಗರಾಜ ಎಂ.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.