Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Team Udayavani, Mar 29, 2024, 12:33 AM IST
ಹೊಸದಿಲ್ಲಿ : ರಾಜಸ್ಥಾನ ರಾಯಲ್ಸ್ ತಂಡವು ಸದ್ಯ ಸಾಗುತ್ತಿರುವ ಐಪಿಎಲ್ ಪಂದ್ಯಗಳಿಗಾಗಿ ವೇಗಿ ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ.
ಕೋಲ್ಕತಾ ನೈಟ್ರೈಡರ್ ತಂಡವು ಗಾಯಗೊಂಡಿರುವ ಮುಜೀಬ್ ಉರ್ ರೆಹಮಾನ್ ಅವರ ಬದಲಿಗೆ 16ರ ಹರೆಯದ ಆಫ್ ಸ್ಪಿನ್ನರ್ ಅಫ್ಘಾನಿಸ್ಥಾನದ ಅಲ್ಲಾ ಘಾಜನ್ಫರ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ ಎಂದು ಐಪಿಎಲ್ನ ಪ್ರಕಟನೆ ತಿಳಿಸಿದೆ.
ಘಾಜನ್ಫರ್ ಅವರು ಅಘಾ^ನಿಸ್ಥಾನ ಪರ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಆರು ಲಿಸ್ಟ್ “ಎ’ ಪಂದ್ಯಗಳಲ್ಲಿ ಆಡಿದ್ದಾರೆ. 20 ಲಕ್ಷ ರೂ.ಗಳ ಮೂಲ ಬೆಲೆಗೆ ಅವರು ಕೆಕೆಆರ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಸಿದ್ಧ್
ಕೃಷ್ಣ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಬದಲಿಗೆ ಆಯ್ಕೆಯಾದ ಕೇಶವ ಮಹಾರಾಜ್ ಅವರು 27 ಟಿ20, 44 ಏಕದಿನ ಮತ್ತು 50 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದು 237 ವಿಕೆಟ್ ಪಡೆದಿದ್ದಾರೆ.