Kali River; ತಡೆಬೇಲಿಯನ್ನು ದಾಟಿ ನದಿಗಿಳಿಯುತ್ತಿರುವ ಜನತೆ!
ಈಗಾಗಲೇ ಐವರನ್ನು ಬಲಿ ಪಡೆದುಕೊಂಡಿರುವ ಮೊಸಳೆಗಳು...!!
Team Udayavani, Nov 15, 2023, 11:22 PM IST
ದಾಂಡೇಲಿ : ಮೊಸಳೆಗಳಿಂದ ಜೀವ ಹಾನಿ ಘಟನೆ ಸಂಭವಿಸದಂತೆ ಅರಣ್ಯ ಇಲಾಖೆಯವರು ನಗರದ ಕುಳಗಿ ರಸ್ತೆಯ ಕಾಳಿ ನದಿ ತಟದಲ್ಲಿ ನದಿಗಿಳಿಯದಂತೆ ತಡೆಬೇಲಿಯನ್ನು ಅಳವಡಿಸಿದ್ದಾರೆ.
ಈಗಾಗಲೆ ನಗರದಲ್ಲಿ ಐವರನ್ನು ಮೊಸಳೆ ಬಲಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಇಂತಹ ದುರ್ಘಟನೆಗಳು ನಡೆಯಬಾರದೆಂದು ತಾಲೂಕ್ ಆಡಳಿತ ನಗರ ಆಡಳಿತ ಮತ್ತು ಅರಣ್ಯ ಇಲಾಖೆ ಸಾಕಷ್ಟು ಬಾರಿ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಲೆ ಬರುತ್ತಿದೆ. ಇನ್ನೂ ನದಿ ಹತ್ತಿರದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಇದನ್ನು ಮೀರಿ ನದಿಗಳಿದವರಿಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಎಚ್ಚರಿಕೆಯನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇಷ್ಟೆಲ್ಲ ಆದರೂ ನಗರದ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರ ನದಿಗಿಳಿಯದಂತೆ ನಿರ್ಮಿಸಿದ ತಡೆ ಬೇಲಿಯನ್ನು ದಾಟಿ ನದಿಗಳಿದು ಬಟ್ಟೆ ತೊಳೆಯುವುದು ಬುಧವಾರ ಕಂಡು ಬಂದಿದೆ. ಬಟ್ಟೆ ತೊಳೆಯುತ್ತಿರುವ ಹತ್ತಿರದಲ್ಲಿ ಸೇತುವೆಯ ಸಮೀಪ ಮೊಸಳೆಯು ಪ್ರತ್ಯಕ್ಷ ವಾಗಿದೆ. ಆದರೂ ಜನತೆ ಮಾತ್ರ ಇದು ಯಾವುದಕ್ಕೂ ಕ್ಯಾರೆಯೆನ್ನದೆ ನದಿಗಿಳಿಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?