ಕೊಳಚೆ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ
Team Udayavani, Jun 7, 2019, 2:57 PM IST
ಶಿರಸಿ: ಪಾದುಕಾಶ್ರಮದ ಭಜಕರು ಪ್ರತಿಭಟನೆ ನಡೆಸಿದರು.
ಶಿರಸಿ: ನಾಡಿನ ಹಲವಡೆಯ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವ ಇಲ್ಲಿನ ಪ್ರಾದುಕಾಶ್ರಮಕ್ಕೆ ಶಿರಸಿಯ ಕೊಳಚೆ ಹಾಗೂ ಗಟಾರದ ನೀರು ಬಾರದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾವಿರಾರು ಭಕ್ತರು ಸಹಾಯಕ ಆಯುಕ್ತರಿಗೆ ಮೌನ ಮೆರವಣಿಗೆ ನಡೆಸಿ ಆಗ್ರಹಿಸಿದರು.
ಪಾದುಕಾಶ್ರಮದಿಂದ ಮೌನ ಮೆರವಣಿಗೆಯಲ್ಲಿ ಆಗಮಿಸಿದ ಭಕ್ತರು, ಪಾದುಕಾಶ್ರಮ ಇರುವಲ್ಲಿ ಯಾವುದೇ ಗಟಾರಗಳೂ ಇಲ್ಲ. ಆದರೂ ಪಟ್ಟಭದ್ರರು ಮಲೀನವಾದ ಕೊಳಚೆ ನೀರು ಹರಿಸಿ ಅಪವಿತ್ರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಆಶ್ರಮದ ಪುಷ್ಕರಣಿ, ಬಾವಿಗೆ ಕಲುಷಿತ ನೀರು ಬಂದು ವಾತಾವರಣ ಕೂಡ ಹಾಳಾಗುತ್ತದೆ. ಇದು ಭಕ್ತರ ನೋವಿಗೂ ಕಾರಣವಾಗುತ್ತದೆ ಎಂದರು.
ಈ ಸಂಬಂಧ ನಗರಸಭೆಗೆ ಅನೇಕ ಬಾರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಬೇರೆ ಬೇರೆ ಕಾಲುವೆಗೆ ಟೆಂಡರ್ ಕರೆದರೂ ಅದೂ ವಿಳಂಬವಾಗಿದೆ ಎಂದ ಭಕ್ತರು, ಶ್ರೀಧರ ಪಾದುಕಾಶ್ರಮದ ಸ್ಥಳವನ್ನು ಸ್ವಚ್ಛವಾಗಿಡಲು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಸದಾಶಿವ ಹೆಗಡೆ, ಎಂ.ಎಸ್. ಹೆಗಡೆ ಕೊಪ್ಪ, ಗಣಪತಿ ಹೆಗಡೆ ಮಾಳೇನಳ್ಳಿ, ಎಂ.ಎನ್. ಹೆಗಡೆ, ದಿವಾಕರ ಭಟ್ಟ, ರಮೇಶ ಶೆಟ್ಟಿ, ಗೋದಾವರಿ ಹೆಗಡೆ, ಗಣಪತಿ ಹೆಗಡೆ, ಎಂ.ಎನ್. ಭಟ್ಟ ಇತರರು ಇದ್ದರು. ಸಾಗರ, ಸಿದ್ದಾಪುರ, ಯಲ್ಲಾಪುರ, ಶಿರಸಿ ಸೀಮೆ ಭಕ್ತರು ಮೌನ ಮೆರವಣಿಗೆಯಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ