ಸೆಲ್ಕೋ -ಬಿವಿಟಿ ಬಂಧ: ಸೌರಶಕ್ತಿಯಿಂದ ಸ್ವ ಉದ್ಯೋಗ ಸೃಷ್ಟಿ
ಗ್ರಾಮೀಣ ಭಾಗದ ಅಭಿವೃದ್ಧಿಗೆ ಪಣ; ಸದ್ದಿಲ್ಲದೆ ನಡೆದಿದೆ ಸಾಮಾಜಿಕ ಕ್ರಾಂತಿ
Team Udayavani, Oct 20, 2022, 3:51 PM IST
ಹೊನ್ನಾವರ: ಈ ಯುಗದ ಸಂಶೋಧನೆ ಸೌರಶಕ್ತಿ ಕೇವಲ ಬೆಳಕು, ಬಿಸಿ ನೀರಿಗೆ ಮಾತ್ರವಲ್ಲ, ಜನರಿಗೆ ಬದುಕು ಕಟ್ಟಿಕೊಳ್ಳಲು ಸಹಾಯವಾಗಬೇಕು ಎಂದು ಆಸೆಪಟ್ಟ ಸೆಲ್ಕೋದ ಅಧ್ಯಕ್ಷ, ಬಿವಿಟಿಯ ನಿರ್ದೇಶಕ ಹರೀಶ ಹಂದೆ ಮತ್ತು ಮಣಿಪಾಲದ ಅಶೋಕ ಪೈ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಭಾರತೀಯ ವಿಕಾಸ ಟ್ರಸ್ಟ್ ಜಂಟಿಯಾಗಿ ತಮ್ಮ ಸಂಸ್ಥೆಗಳ ಮುಖಾಂತರ ವಿದ್ಯುತ್ ಹಂಗಿಲ್ಲದೆ ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗ ಸೃಷ್ಟಿಸಿ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿ ಮಾಡುತ್ತಿದ್ದಾರೆ.
ದಿ| ಟಿ.ಎ. ಪೈ ಮಣಿಪಾಲ ಇವರಿಂದ ಸ್ಥಾಪಿಸಲ್ಪಟ್ಟು ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಭಾರತೀಯ ವಿಕಾಸ ಟ್ರಸ್ಟ್ ಗ್ರಾಮೀಣ ಯುವಕರಿಗೆ, ಮಹಿಳೆಯರಿಗೆ ಬ್ಯಾಂಕ್ಗಳ ಆರ್ಥಿಕ ನೆರವು ಕೊಡಿಸಿ, ತಾವು ಸಬ್ಸಿಡಿ ನೀಡಿ, ವಿದ್ಯುತ್ ಹಂಗಿಲ್ಲದೆ ಸ್ವ ಉದ್ಯೋಗ ಸೃಷ್ಟಿಸಿ ದೇಶದ ಪ್ರಗತಿಗೆ ಕಾರಣವಾಗಿದೆ. ಇದಕ್ಕಾಗಿ ಇಂಗ್ಲೆಂಡ್ನ ಎಶ್ಡೆನ್ ಸಂಸ್ಥೆ 2021ರ ಎಶೆxನ್ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸೆಲ್ಕೋ ಸೋಲಾರ್ನ ಕುಮಟಾ ವ್ಯವಸ್ಥಾಪಕ ದತ್ತಾರಾಮ್ ಭಟ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ನ ಹಿರಿಯ ಯೋಜನಾ ವ್ಯವಸ್ಥಾಪಕ ಪ್ರಶಾಂತ ಭಾಗವತ್ ಉದಯವಾಣಿಗೆ ತಿಳಿಸಿದ್ದಾರೆ.
ಕಾರವಾರದಿಂದ ಭಟ್ಕಳದವರೆಗೆ ಇಂತಹ 22ಕ್ಕೂ ಹೆಚ್ಚು ಸ್ವ ಉದ್ಯೋಗಗಳಿಗೆ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಸೆಲ್ಕೋ ಸೋಲಾರ್ ಜೊತೆಯಾಗಿ ಹಿಟ್ಟಿನ ಗಿರಣಿ, ಹೊಲಿಗೆ ಯಂತ್ರ, ಹಾಲುಕರೆಯುವ ಯಂತ್ರ, ಕಬ್ಬಿನ ರಸ ತೆಗೆಯುವ ಯಂತ್ರ, ಝೆರಾಕ್ಸ್ ಮಶಿನ್, ಮಜ್ಜಿಗೆ ಕಡೆಯುವ ಯಂತ್ರ, ಪ್ರಿಡ್ಜ್ ಮೊದಲಾದವುಗಳನ್ನು ನೀಡಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಈಶಾನ್ಯ ರಾಜ್ಯಗಳಾದ ಆಸ್ಸಾಂ, ಮಣಿಪುರ, ಮೇಘಾಲಯಗಳಲ್ಲಿ ಇವುಗಳನ್ನು ಅನುಷ್ಠಾನ ಮಾಡಲಾಗಿದೆ. ಜನರಿಗೆ ಯಾವ ಉಪಕರಣ ಬೇಕೋ ಅದನ್ನು ಸಿದ್ಧಪಡಿಸಿಕೊಡಲಾಗಿದೆ. ಕುಂಬಾರನ ಚಕ್ರ, ಪವರ್ಲೂಮ್ ಮೊದಲಾದ ಯಂತ್ರಗಳನ್ನು ಪೂರೈಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಹೊಲಿಗೆಯಂತ್ರಗಳು ಮತ್ತು ಬಟ್ಟೆಯ ಮೇಲೆ ಡಿಸೈನ್ ಮಾಡುವ ಯಂತ್ರಗಳು ಜನರ ಆಯ್ಕೆ. ಉತ್ತರ ಕನ್ನಡದಲ್ಲಿ ಹಿಟ್ಟಿನ ಗಿರಣಿ, ಕಬ್ಬಿನ ಹಾಲು ತೆಗೆಯುವ ಯಂತ್ರಗಳು ಮೆಚ್ಚುಗೆ ಪಡೆದಿವೆ. ಬ್ಯಾಂಕ್ಗಳಿಂದ ಸಾಲ ಕೊಡಿಸುವ, ಸಬ್ಸಿಡಿ ಮೊತ್ತವನ್ನು ಬ್ಯಾಂಕ್ಗೆ ಜಮಾ ಮಾಡುವ ಉಪಕರಣಗಳನ್ನು ಪೂರೈಸುವ ಕೆಲಸಗಳನ್ನು ಈ ಎರಡು ಸಂಸ್ಥೆಗಳು ಯಶಸ್ವಿಯಾಗಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನ ಮೂಲಗಳು ಕಡಿಮೆಯಾಗಿ ಬೆಲೆ ಹೆಚ್ಚಾಗಿ ಉತ್ಪಾದಕರು ಸಂಕಷ್ಟದಲ್ಲಿ ಸಿಲುಕದಿರಲು ಹೆಚ್ಚಾಗಿ ಸೌರಶಕ್ತಿಯ ಉಪಕರಣಗಳನ್ನು ಬಳಸಬೇಕು, ನಮ್ಮ ಸಂಸ್ಥೆಗಳು ಎಲ್ಲ ರೀತಿಯ ಮಾರ್ಗದರ್ಶನ ಮತ್ತು ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ. ಆಸಕ್ತರು ವಿವರಗಳಿಗೆ ಪ್ರಶಾಂತ ಭಾಗ್ವತ್ ಮೊ: 9880117376, ದತ್ತಾರಾಮ್ ಭಟ್ – 9449360181
ಜೀಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್