ಶಿರಸಿ-ಹಾಸ್ಯ ಬದುಕಿನಲ್ಲಿ ಅಂತರ್ಗತ: ಪ್ರೊ| ಭುವನೇಶ್ವರಿ ಹೆಗಡೆ


Team Udayavani, Jan 1, 2024, 5:43 PM IST

Udayavani Kannada Newspaper

ಶಿರಸಿ: ಹಾಸ್ಯಕ್ಕೆ ಪಕ್ಷವಿಲ್ಲ. ಹಾಸ್ಯಕ್ಕೆ ಪಂಥವೂ ಇಲ್ಲ. ಹಾಸ್ಯ ಸಾಹಿತ್ಯ ಎಲ್ಲವನ್ನೂ ಮೀರಿದ್ದು. ಹಾಸ್ಯವು ನಮ್ಮ ಬದುಕಿನಲ್ಲಿ ಅಂತರ್ಗತವಾಗಿರುತ್ತದೆ ಎಂದು ಪ್ರಸಿದ್ಧ ಹಾಸ್ಯ ಸಾಹಿತಿ, ಪ್ರೊ| ಭುವನೇಶ್ವರಿ ಹೆಗಡೆ ಹೇಳಿದರು.

ಭಾನುವಾರ ಅವರು ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಎಂ. ರಮೇಶ ಪ್ರಶಸ್ತಿ ಸಮಿತಿ ನೀಡುವ ಎಂ. ರಮೇಶ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹಾಸ್ಯ ಪ್ರಬಂಧವು ನಮ್ಮ ಬದುಕಿನಲ್ಲಿ ನವಿರಾದ ಪ್ರಭಾವ ಬೀರುತ್ತವೆ.

ನವಿರಾದ ಹಾಸ್ಯ ಓದಿ ಮುಗಿಸುವ ತನಕ ಒಂದು ಉಲ್ಲಾಸ ಸಿಗಬೇಕು ಎಂದ ಅವರು, ಹಾಸ್ಯ ಸಾಹಿತ್ಯಕ್ಕೆ ಭವಿಷ್ಯವಿದೆ ಎಂದೇ ನಂಬಿದ್ದೇನೆ ಎಂದರು. ನಾನು ಹಾಸ್ಯ ಸಾಹಿತ್ಯದ ಸಂಪರ್ಕಕ್ಕೆ ಬರಲು ಪ್ರೊ| ಎಂ.ರಮೇಶ ಅವರು ಕಾರಣ. ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ರಮೇಶ ಅವರ ಮಾತು ಕಾರಣ. ಸತ್ಯವನ್ನು ನವಿರಾಗಿ ಹೇಳುತ್ತಿದ್ದರು ಎಂದರು.

ಪ್ರಶಸ್ತಿ ಪ್ರದಾನ ನೆರವೇರಿಸಿದ ಕವಿ, ಅನುವಾದಕ ಧರಣೇಂದ್ರ ಕುರಕುರಿ, ಬದುಕನ್ನು ಗಾಢವಾಗಿ ಪ್ರೀತಿಸಿದವರು ರಮೇಶರು. ಶಿಷ್ಯರ, ಸ್ನೇಹಿತರ ಬದುಕನ್ನು ರೂಪಿಸಿದವರರು. ಟಿ. ಸುನಂದಮ್ಮ ಅವರ ಹಾಸ್ಯ ಪರಂಪರೆಯನ್ನು ಮುಂದುವರಿಸಿದವರು ಭುವನೇಶ್ವರಿ ಹೆಗಡೆ ಅವರು. ಅವರಿಗೆ ರಮೇಶ ಅವರ ಪ್ರಶಸ್ತಿ ಲಭಿಸಿದ್ದು ಅತ್ಯಂತ ಖುಷಿಯ ಸಂಗತಿ ಎಂದರು. ಅಧ್ಯಕ್ಷತೆವಹಿಸಿದ್ದ ನಿವೃತ್ತ ಪ್ರಾಚಾರ್ಯೆ ಕುಮುದಾ ಶರ್ಮಾ ಮಾತನಾಡಿ, ನಿತ್ಯ ಬದುಕಿನಲ್ಲಿ ರಮೇಶರು ನೆನಪಾಗುತ್ತದೆ ಎಂದರು. ವೈಶಾಲಿ ವಿ.ಪಿ.ಹೆಗಡೆ, ಪ್ರೊ. ವಿಜಯನಳಿನಿ ರಮೇಶ ಇತರರು ಇದ್ದರು. ಡಾ| ಜಿ.ಎಂ. ಹೆಗಡೆ, ಡಾ| ಶಿವರಾಮ ಕೆ.ವಿ ಅವರು ಸಭಿಕರ ಪರವಾಗಿ ಮಾತನಾಡಿದರು.

ರೋಹಿಣಿ ಹೆಗಡೆ ಪ್ರಾರ್ಥಿಸಿದರು. ಮಧು ಮತ್ತೀಹಳ್ಳಿ ಸ್ವಾಗತಿಸಿದರು. ಪ್ರಜ್ಞಾ ಮತ್ತಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಮ್ಮಾನ ಪತ್ರವನ್ನು ಶೈಲಜಾ ಗೋರ್ನಮನೆ ವಾಚಿಸಿದರು. ವೈಶಾಲಿ ಹೆಗಡೆ ನಿರ್ವಹಿಸಿದರು. ಮಹಿಮಾ ಭಟ್ಟ ವಂದಿಸಿದರು. ಕಾರ್ಯಕ್ರಮಕ್ಕೆ ನಯನ ಫೌಂಡೇಶನ್‌ ಸಹಭಾಗಿತ್ವ ನೀಡಿತ್ತು.

ಗುರುಗಳಾದ ರಮೇಶರ ಸ್ಮರಣೆಯ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪುಣ್ಯ. ನತಮಸ್ತಕಳಾಗಿ ಸ್ವೀಕರಿಸಿದ್ದೇನೆ. ಹರ ಮುನಿದರೂ ಗುರು ಕಾಯುವನು ಎಂಬ ಮಾತು ನಳಿನಿ ಮೇಡಂ ಅವರ ಮೂಲಕ ಸತ್ಯವಾಗಿಸಿದೆ.
*ಭುವನೇಶ್ವರಿ ಹೆಗಡೆ, ಪ್ರಸಿದ್ಧ ಹಾಸ್ಯ ಲೇಖಕಿ

ಹಾಸ್ಯ ಸಾಹಿತ್ಯಕ್ಕೆ ಅತ್ಯಂತ ಪ್ರಮುಖ ಸ್ಥಾನ ಇದೆ. ನಿತ್ಯ ಬದುಕಿನಲ್ಲಿ ಅನೇಕ ಹಾಸ್ಯ ಘಟನೆಗಳು ನಡೆಯುತ್ತವೆ.
*ಡಾ| ಧರಣೇಂದ್ರ ಕುರಕುರಿ,
ಹಿರಿಯ ಸಾಹಿತಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.