ಸಿದ್ದಾಪುರ: ಮಸೀದಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ
Team Udayavani, Nov 6, 2022, 8:29 PM IST
ಸಿದ್ದಾಪುರ(ಉತ್ತರಕನ್ನಡ): ಸಿದ್ದಾಪುರ ಪಟ್ಟಣದ ಬದ್ರಿಯಾ ಜಾಮಿಯ ಮಸೀದಿಯ ಶಾದಿ ಹಾಲ್ ನಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ಪ್ರಕರಣ ದಾಖಲಾಗಿದೆ.
ಸಿದ್ದಾಪುರ ದ ಬದ್ರಿಯಾ ಜಾಮಿಯ ಮಸೀದಿಯ ಶಾದಿ ಹಾಲ್ ನಲ್ಲಿ ಮಸೀದಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯ ಸಭೆ ನಡೆದು ಎಲ್ಲರ ಒಮ್ಮತದಿಂದ ಬುಡಾನ್ ಸಾಬ್ ರವರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು.
ನಂತರ ಬುಡನ್ ಸಾಬ್ ರವರು ಕೆಲವು ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಹೇಳಿದಾಗ ಚೀಟಿಯಲ್ಲಿದ್ದ ಹೆಸರುಗಳನ್ನು ಮಸೀದಿಯ ಹಂಗಾಮಿ ಅಧ್ಯಕ್ಷರಾದ ಮುನಾವರ್ ಗುರುಕಾರ್ ರವರು ಓದಲು ಶುರು ಮಾಡಿದಾಗ ಮಸೀದಿಯ ಎರಡು ಗುಂಪುಗಳಲ್ಲಿ ಗಲಾಟೆ ಪ್ರಾರಂಭವಾಗಿ ಹೊಡೆದಾಟ ನಡೆದಿದೆ.
ಎರಡು ಗುಂಪಿನವರು ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ