Sirsi ; ಗಂಗೆ ಗೆದ್ದ ಗೌರಿ ಇನ್ನು ‘ಜಲ ಗೌರಿ!’: ಸಂಸದರಿಂದ ಸಮ್ಮಾನ
Team Udayavani, Mar 8, 2024, 4:12 PM IST
ಶಿರಸಿ: ಹಲವು ಅಡೆತಡೆಗಳ ಮಧ್ಯೆ ಅಂಗನವಾಡಿ ಮಕ್ಕಳಿಗೆ ಬಾವಿ ತೋಡಿ ನೀರು ತರಿಸಿದ ಇಲ್ಲಿನ ಗಣೇಶ ನಗರದ ಗೌರಿ ನಾಯ್ಕ ಅವರನ್ನು ಮಹಿಳಾ ದಿನಾಚರಣೆ ದಿನದಂದು ಅವರ ಸ್ವಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಸಮ್ಮಾನಿಸಿದರು.
ಬಳಿಕ ಮಾತನಾಡಿದ ಸಂಸದರು, ಯಾರ ಸಹಾಯ ಪಡೆಯದೇ, ಏಕಾಂಗಿಯಾಗಿ, ಏನೇ ತೊಂದರೆ ಬಂದರೂ ಎದುರಿಸಿ ಮಕ್ಕಳಿಗೆ ನೀರು ಕೊಟ್ಟ ಗೌರಿ ನಾಯ್ಕ ಅವರನ್ನು ಜಲ ಗೌರಿ ಎಂದು ಸಮ್ಮಾನಿಸುದಾಗಿ ಹೇಳಿದರು.
ಈ ವೇಳೆ ರೇಖಾ ಹೆಗಡೆ, ಶೋಭಾ ನಾಯ್ಕ, ಉಷಾ ಹೆಗಡೆ, ಗೀತಾ ಮಹಾಲಿಂಗಣ್ಣವರ್, ವೀಣಾ ಶೆಟ್ಟಿ, ರಾಜೇಶ ಶೆಟ್ಟಿ, ಕೃಷ್ಣ ಎಸಳೆ ಇತರರು ಇದ್ದರು. ಬಳಿಕ ಅಂಗನವಾಡಿ ಬಳಿ ತೆರಳಿ ಬಾವಿಯ ಜಲಕ್ಕೂ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಗೌರಿ, ಜಿಲ್ಲಾಡಳಿತ ಬಾವಿ ತೋಡಲು ಅವಕಾಶ ನೀಡದೇ ಇದ್ದಾಗ ಧೈರ್ಯ ನೀಡಿ, ಸಮಸ್ಯೆ ಬಗೆಹರಿಸಿದ ಸಂಸದರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?