Sirsi; ಮನೆಯಲ್ಲಿ ಜನರಿದ್ದಾಗಲೇ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು
ವರಮಹಾಲಕ್ಷ್ಮೀ ಪೂಜೆಗೆಂದು ದೇವರ ಕೋಣೆಯಲ್ಲಿ ತೆಗೆದಿಟ್ಟಿದ್ದ ಆಭರಣಗಳು
Team Udayavani, Aug 24, 2023, 6:17 PM IST
ಶಿರಸಿ: ನಗರದ ಅಯೋಧ್ಯಾ ಕಾಲೋನಿಯ ಮನೆ ಒಂದರ ದೇವರ ಕೋಣೆಯಲ್ಲಿ ಇಟ್ಟಿದ್ದ ಚಿನ್ನ ಬೆಳ್ಳಿ ಆಭರಣ ಮತ್ತು ನಗದುಗಳನ್ನು ಕಳ್ಳರು ದೋಚಿದ ಘಟನೆ ಬುಧವಾರ ರಾತ್ರಿ ರಾತ್ರಿ ನಡೆದಿದೆ. ಹೊಲಿಗೆ ಮಷೀನ್ ಡೀಲರ್ ಆಗಿರುವ ಆಶೀಶ್ ವಿಲಾಸ್ ಲೋಖಂಡೆ ಅವರು ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮನೆಯ ಮಹಡಿಯ ಮೇಲೆ ಹಾಗೂ ಕೆಳಗಡೆ ಒಂದು ರೂಮಿನಲ್ಲಿ ಮನೆಯ ಜನರು ಮಲಗಿದ್ದರೂ, ಯಾರೂ ಇರದ ಕೋಣೆಯಿಂದ ಚೋರರು ಸದ್ದಾಗದಂತೆ ಕಿಟಕಿ ಬಾಗಿಲು ಮುರಿದು ಒಳಗೆ ಬಂದು ವರಮಹಾಲಕ್ಷ್ಮೀ ಪೂಜೆಗೆ ಇಟ್ಟಿದ್ದ ಆಭರಣ ಕದ್ದೊಯ್ದಿದ್ದಾರೆ.
ದೇವರ ಕೋಣೆಯಲ್ಲಿದ್ದ ಬಂಗಾರದ ನೆಕ್ಲೆಸ್, ಬಂಗಾರದ ಬಳೆಗಳು, ಬೆಳ್ಳಿ ತಂಬಿಗೆ, ಆರತಿ ಸೆಟ್, ಬೆಳ್ಳಿಯ ಕಾಮಾಕ್ಷಿ ದೀಪ, ಬೆಳ್ಳಿ ಲೋಟ, 4000 ರೂ ನಗದು ಸೇರಿದಂತೆ 5,28,000 ರೂ. ಆಭರಣ ಮತ್ತು ನಗುದನ್ನು ದೋಚಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರುಕಟ್ಟೆಯ ಪಿಎಸ್ಐ ಮಾಲಿನಿ ಹಾಸಭಾವಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚೋರರು ಸ್ಥಳೀಯರೇ, ಹೊರಗಿನವರೇ ಎಂದೂ ತನಿಖೆ ಮಾಡಲಾಗುತ್ತಿದೆ. ಸಿಸಿಟಿವಿಗಳನ್ನೂ ಪರಿಶೀಲಿಸಲಾಗುತ್ತಿದೆ.
ಎಲ್ಲ ಮೂಲದಿಂದಲೂ ತನಿಖೆ
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಲ್ಲ ವಿಭಾಗದಿಂದಲೂ ಸೂಕ್ಷ್ಮ ತನಿಖೆ ಆರಂಭಿಸಿದ್ದಾರೆ. ಕಾರವಾರದಿಂದ ಶ್ವಾನ ದಳ, ಬೆರಳಚ್ಚು ತಜ್ಞರೂ ಕೂಡ ಆಗಮಿಸಿ ತನಿಖೆ ಚುರುಕಿಗೆ ಸಹಕಾರ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಸೋಕೋ ಅಧಿಕಾರಿ ವಿನುತಾ ಅವರು ಬಂದು ಪರಿಶೀಲಿಸಿದ್ದಾರೆ. ಹುಬ್ಬಳ್ಳಿಯಿಂದ ಪೋರೆನ್ಸಿಕ್ ತಂಡದ ಅಧಿಕಾರಿ ಡಾಕ್ಟರ್ ಮಾಂತೇಶ್ ರವರಿಂದಲೂ ಘಟನೆ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ.
ಮೂರು ತಂಡ ರಚನೆ
ಶಿರಸಿ ಡಿಎಸ್ಪಿ ರವರಾದ ಕೆ.ಎಲ್.ಗಣೇಶ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಸಿಪಿಐ ರಾಮಚಂದ್ರ ನಾಯಕ, ಗ್ರಾಮೀಣ ಠಾಣೆಯ ಇನಸ್ಪೆಕ್ಟರ್ ಸೀತಾರಾಮ್ ಪಿ, ಪಿಎಸ್ಐ ರತ್ನ ಕೆ, ಮಾಲಿನಿ ಹಾಂಸಬಾವಿ, ನಗರ ಠಾಣೆಯ ರಾಜಕುಮಾರ್ ಮಹಾಂತೇಶ್, ಪ್ರತಾಪ್, ದಯಾ ಜೋಗಳೇಕರ್, ಶಿರಸಿ ತಾಲೂಕಿನ ನುರಿತ ಅಪರಾಧ ಸಿಬ್ಬಂದಿಗಳಾದ ಮಹಾಂತೇಶ, ಅಶೋಕ, ಚಂದ್ರಪ್ಪ ಶಿವರಾಜ್, ಪ್ರಶಾಂತ್, ಸದ್ದಾಂ, ಗಣಪತಿ, ಎಲ್ಲಪ್ಪ ಇತರೆ ಅಧಿಕಾರಿ ಸಿಬ್ಬಂದಿಗಳು ಮನೆ ಕಳ್ಳತನದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಿರಸಿ ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಶೀಘ್ರ ಪತ್ತೆ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ