ಗೃಹ ರಕ್ಷಕ ದಳದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರದ ಜೊತೆ ಮಾತಾನಾಡುತ್ತೇನೆ: ಕಾಗೇರಿ ಭರವಸೆ
Team Udayavani, Jan 23, 2022, 5:54 PM IST
ಶಿರಸಿ: ಗೃಹ ರಕ್ಷಕ ದಳದವರಿಗೆ ನಿತ್ಯದ ಗೌರವವ ಭತ್ಯೆ ದರ ಹೆಚ್ಚಿಸಬೇಕು, ಸಾರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಬೇಕು ಎಂಬ ಬೇಡಿಕೆಗಳನ್ನು ಒದಗಿಸಲು ಸರಕಾರದ ಜೊತೆ ಮಾತನಾಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ಭಾನುವಾರ ನಗರದ ವಿನಾಯಕ ಸಭಾಂಗಣದಲ್ಲಿ ನಡೆದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಗೃಹ ರಕ್ಷಕ,ರಕ್ಷಕಿಯರ ಸೇವಾ ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೃಹ ರಕ್ಷಕ ದಳದ ಸಮಸ್ಯೆ ಇರುವದನ್ನು ಗಮನಿಸಿ ಅದನ್ನು ಇತ್ಯರ್ಥಗೊಳಿಸಲು ಪ್ರಯತ್ನ ಮಾಡುತ್ತೇನೆ. ನಿರಂತರ ಸೇವಾ ಸೌಲಭ್ಯ ಒದಗಿಸಲು ಅವಕಾಶ ಆಗುವ ನಿಟ್ಟಿನಲ್ಲೂ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕೂಡ ಸಮಾಲೋಚನೆ ನಡೆಸುವುದಾಗಿ ಕಾಗೇರಿ ಹೇಳಿದರು.
ಗೃಹ ರಕ್ಷಕಕ್ಕೆ ಸುಧೀರ್ಘ ಇತಿಹಾಸ ಇದೆ. ಅಧಿಕೃತ ಸರಕಾರಿ ಸೇವಕರು ಇರುವದಕ್ಕಿಂತ ಒಂದು ಹೆಜ್ಜೆ ಮುಂದೆ ಇದ್ದು ಜನರಿಗೆ, ಸರಕಾರಕ್ಲೆ ಸೇವೆ ಸಲ್ಲಿಸಿದ್ದಾರೆ. ಜನ ನಿಬಿಡ, ಜಾತ್ರೆ ಉತ್ಸವಕ್ಕೆ ಗೃಹ ರಕ್ಷಕರು ಸೇವೆ ಸಲ್ಲಿಸಿದ್ದಾರೆ. ಸರಕಾರವಾಗಿ ಸಮಾಜವಾಗಿ ಇನ್ನಷ್ಟು ಗುರುತಿಸಬೇಕು ಎಂಬ ಭಾವನೆ ಸರಿಯಿದೆ ಎಂದರು.
ಸಮಾಜದಲ್ಲಿ ಕೇವಲ ಕಾನೂನಿಂದ ಶಿಸ್ತು ಬರುವದಿಲ್ಲ. ಸಮಾಜದ ಪ್ರತಿಯೊಬ್ಬರು, ಸಂಘ ಸಂಸ್ಥೆಗಳಿಂದ ಶಿಸ್ತು ಸಿಗಬೇಕು. ಸಮಾಜದಲ್ಲಿ ಶಿಸ್ತು ಬೆಳೆಸಬೇಕು. ಸಾಮಾಜಿಕ, ರಾಷ್ಟ್ರೀಯ ಜವಬ್ದಾರಿ ವಿಚಾರದಲ್ಲಿ ಸದಾ ಬದ್ದರಾಗಿ ಕೆಲಸ ಮಾಡಬೇಕು. ಗೃಹ ರಕ್ಷಕ ದಳ ಈ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ದೊಡ್ಡದು ಎಂದರು.
ಇಂದು ದೇಶವೇ ಮೊದಲೆಂಬ ಭಾವನೆ ಬೆಳಸಿಕೊಳ್ಳಲು ಪ್ರೇರೇಪಿಸಬೇಕಾಗಿದೆ. ನಮ್ಮ ಜೀವನದಲ್ಲೂ ದೇಶ ಮೊದಲಾಗಬೇಕು ಎಂದೂ ಸ್ಪೀಕರ್ ಹೇಳಿದರು.
ಪ್ರಮುಖರಾದ ಗೃಹರಕ್ಷಕ ದಳದ ಪ್ರಮುಖರಾದ ವಿ.ಬಿ.ಹೊಸೂರು, ರಾಜ್ಯದಲ್ಲೇ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ, ಸಿಎಂ ಪ್ರಶಸ್ತಿ ಪಡೆದವರು ನಮ್ಮ ಜಿಲ್ಲೆಯ ಗೃಹರಕ್ಷಕ ದಳದವರು ಎಂದರು.
ಎಸ್.ಜಿ.ಬನವಾಸಿ ಮಾತನಾಡಿ, ಬಸ್ ಪಾಸ್ ಸೌಲಭ್ಯ ಹಾಗೂ ಪೂರ್ಣಕಾಲಿಕ ಸೇವೆಗೆ ಅವಕಾಶ ಆಗಲಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಮನೊಹರ ಜೋಗಳೆಕರ, ರಾಜು ಕಾಸಬಾಗ, ಬ್ರಹ್ಮಕುಮಾರಿ ಗಾಯತ್ರೀ ದೇವಿ ಇತರರು ಇದ್ದರು.
ಬಿ.ಕೆ.ಬಲವಂತರಾವ್ ಸ್ವಾಗತಿಸಿದರು. ಪಿಡಿಓ ಪ್ರೀತಿ ಶೆಟ್ಟಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್