ಅಧ್ಯಕ್ಷರೂ ಕಮೀಷನ್‌ ತಗೋತಾರಂತೆ: ಸದಸ್ಯರ ಆರೋಪ


Team Udayavani, Nov 23, 2017, 3:11 PM IST

23-25.jpg

ಶಿರಸಿ: ನಗರಸಭೆ ಅಧ್ಯಕ್ಷರು ಮೂರು ಪರ್ಸಂಟ್‌ ಕಮೀಷನ್‌ ತಗೋತೀರಂತೆ. ಗುತ್ತಿಗೆದಾರರು ದೂರುತ್ತಿದ್ದಾರೆ. ಆದರೂ ಕೆಲಸ ಆಗಲ್ಲ ಎಂದು ಸದಸ್ಯ ಅಮಾನುಲ್ಲಾ ಖಾನ್‌ ಗಂಭೀರವಾಗಿ ಆರೋಪಿಸಿದರು.

ಅಟಲ್‌ಜಿ ಸಭಾಂಗಣದಲ್ಲಿ ನಡೆದ ಮಾಸಿಕ  ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಮಾನುಲ್ಲಾ, ಸಾಕಷ್ಟು ದೂರು ಬಂದಿದೆ. ಏನ್‌ ಮಾಡ್ತೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ  ತಕ್ಷಣ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅರುಣಾ ವೆರ್ಣೇಕರ್‌, ಯಾರು ಕೊಟ್ಟಿದ್ದಾರೆ ಹೇಳಿ. ನಾನು ಒಂದು ರೂಪಾಯಿ ತಗೊಂಡಿಲ್ಲ. ನೀವೇ 14 ಸಾವಿರ ರೂ. ತಗೋಂಡಿದೀರಿ ಎಂದು ಗುತ್ತಿಗೆದಾರರು ಹೇಳ್ತಾರಲ್ಲ ಎಂದು ಮರು ಸವಾಲು ಹಾಕಿದರು. ಮಧ್ಯೆ ಮಾತನಾಡಿದ ಶ್ರೀಕಾಂತ ತಾರೀಬಾಗಿಲು, ನಗರಸಭೆ ಮಾನ ಹರಾಜು ಹಾಕಬೇಡಿ, ಮೊದಲೇ ಮರ್ಯಾದೆ ಹೋಗುತ್ತಿದೆ, ಇನ್ನೂ ಕಳಿಬೇಡಿ, ವಿಷಯ ಮುಂದೆ ತಗೊಳ್ಳಿ ಎಂದು ಸೂಚಿಸಿದರು. ಇದಕ್ಕೂ ನಿಲ್ಲದೇ ಅಮಾನುಲ್ಲಾ ಆರು ವಾಡ್‌ ಗೆ ಮಾತ್ರ ಕಾಮಗಾರಿ ಹಾಕಿದ್ದು ಯಾಕೆ ಎಂದು ಕೇಳಿದಾಗ, ಖಡಕ್‌ ಆಗಿಯೇ ಉತ್ತರಿಸಿದ ವೆರ್ಣೇಕರ್‌ ಹೌದ್ರಿ, ಹಾಕಿದ್ದೇನೆ ಏನೀಗ? ಇನ್ನೂ ಉತ್ತರ ಬೇಕು ಎಂದರೆ ಹೊರಗಡೆ ಬನ್ನಿ ಎಂದರು. 

ಕರಾವಳಿ ಅಭಿವೃದ್ಧಿ ಪ್ರಾದಿಕಾರದ ನೆರವಿನಿಂದ ನಿರ್ಮಾಣ ಮಾಡಲು ಉದ್ದೇಶಿಸಿದ ಮೀನು ಮಾರುಕಟ್ಟೆ ಬದಲಿಗೆ ಹೂವು, ತರಕಾರಿ
ಮಾರುಕಟ್ಟೆ ಪ್ರಸ್ತಾವನೆಗೆ ಅನುಮೋದನೆ ಇತ್ತು. ಇನ್ನೂ ಪತ್ರ ವ್ಯವಹಾರ ಆಗಿಲ್ಲ. ಹಣ ವಾಪಸ್‌ ಹೋಗಬಹುದು. ತಕ್ಷಣ ಏನೂ
ಅಂತ ಆಗಬೇಕು. ನಗರಕ್ಕೆ ಬಂದ ಅನುದಾನ ಹಿಂದೆ ಹೋಗಬಾರದು ಎಂದು ಶ್ರೀಕಾಂತ ತಾರೀಬಾಗಿಲು ಹೇಳಿದರು. ಮೀನು ಮಾರುಕಟ್ಟೆ ಆಗಿದ್ದರೆ ಸಮಸ್ಯೆ ಇರ್ತಿರಲಿಲ್ಲ ಎಂದು ಅಧ್ಯಕ್ಷರೇ ಹೇಳಿದಾಗ, ಆ ವಿಷಯ ಮುಗಿದಿದೆ. ಮತ್ತೆ ಪ್ರಸ್ತಾಪ ಮಾಡಬೇಡಿ ಎಂದು ತಾರೀಬಾಗಿಲು ಗರಂ ಆಗಿಯೇ ಹೇಳಿದರು. ಅರುಣ ಪ್ರಭು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಹಣ ವಾಪಸ್ಸು ಹೋಗದಂತೆ ಮನವಿ ಮಾಡಿಕೊಳ್ಳೋಣ ಎಂದೂ ಹೇಳಿದರು.

ಅರ್ಜಿ ನಮೂನೆ 3ರ ಕುರಿತು ಸಭೆಯ ಆರಂಭದಲ್ಲೇ ಅನೇಕ ಪ್ರಶ್ನೆಗಳನ್ನು ಪಕ್ಷ, ಪ್ರತಿ ಪಕ್ಷದ ಸದಸ್ಯರು ಪಟ್ಟು ಹಿಡಿದು ಕೇಳಿದರು.
ಕಳೆದ ಐದಾರು ತಿಂಗಳಿಂದ ಅಲೆದಾಟ ಮಾಡುತ್ತಿದ್ದಾರೆ. ಅವರಿಗೆ ಸಿಗದೇ ಇದ್ದ ಪರವಾನಗಿ ಏಜೆಂಟರ ಮೂಲಕ ಬಂದರೆ
ಆಗುತ್ತದೆ ಎಂದು ಕಾಂಗ್ರೆಸ್‌ ಸದಸ್ಯರೊಬ್ಬರು ದೂರಿದರು. ಯಾರು ಅಂತ ಹೇಳಿ, ಅವರಿಗೆ ಪ್ರವೇಶ ಇಲ್ಲ ಎಂದು ಫಲಕ ಹಾಕುತ್ತೇವೆ
ಎಂದು ಪೌರಾಯುಕ್ತ ಮಹೇಂದ್ರಕುಮಾರ ಹೇಳಿದರು. ಇದು ಇಲ್ಲಿಯ ಸಮಸ್ಯೆ ಅಲ್ಲ, ಇಡೀ ರಾಜ್ಯದ್ದು, ಕಂಪ್ಯೂಟರಲ್ಲೇ ತಗೋತಿಲ್ಲ ಎಂದು ಪೌರಾಯುಕ್ತರು ಹೇಳಿದರು. ನಾವು ಮರ್ಯಾದೆ ಇಟ್ಟುಕೊಳ್ಳೂವಂತೆ ಕೂಡ ಇಲ್ಲದಂತಾಗಿದೆ ಎಂದು ಸದಸ್ಯರು ಅಲವತ್ತುಕೊಂಡರು. ನಗರಸಭೆ ಮಾಲೀಕತ್ವದ ಅಂಗಡಿಗಳ ಬಾಡಗೆ ವಿಚಾರ, ವಿವಿಧ ಗಟಾರ ಕಾಮಗಾರಿಗಳು, ರಸ್ತೆ ಹೊಂಡ, ಅತಿಕ್ರಮಣ ಸೇರಿದಂತೆ ಅನೇಕ ಪ್ರಶ್ನೆಗಳು ಕೇಳಿಬಂದವು. ರಾಚಪ್ಪ ಜೋಗಳೇಕರ್‌, ರವಿ ಚಂದಾವರ್‌, ಜ್ಯೋತಿ ಗೌಡ, ರಾಕೇಶ ತಿರುಮಲೆ ಸೇರಿದಂತೆ ಇತರರು ಚರ್ಚೆಯಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.