ವಸತಿ ಬಸ್ ತಡೆದು ಕಳಚೆ ಗ್ರಾಮಸ್ಥರ ಪ್ರತಿಭಟನೆ
Team Udayavani, Sep 27, 2022, 5:04 PM IST
ಯಲ್ಲಾಪುರ: ತಾಲೂಕಿನ ಕಳಚೆಯ ಕೆಲವು ಗ್ರಾಮಸ್ಥರು ದಿಢೀರ್ ವಸತಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಬೆಳಗ್ಗೆ 7:30 ಗೆ ಕಳಚೆಯಿಂದ ಬಿಡಬೇಕಾದ ಬಸ್ಸನ್ನು 6:30 ಕ್ಕೆ ಬಿಡಲು ಆರಂಭಿಸಿದ್ದು ಇದರಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಮೊದಲಿನಂತೆ 7:30 ಕ್ಕೇ ಬಿಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಕಳಚೆಗೆ ಬಿಡುತ್ತಿದ್ದ ಆರು ಬಸ್ಗಳಲ್ಲಿ ಈಗ ಮೂರು ಸಲ ಮಾತ್ರ ಬಿಡುತ್ತಿದ್ದಾರೆ.
ಈ ಮೊದಲಿನಂತೆ ಸಮಯ ಮತ್ತು ಬಸ್ಗಳನ್ನು ಬಿಡಬೇಕೆಂದು ಒತ್ತಾಯಿಸಿದರು. ನಂತರ ಜನರ ಬೇಡಿಕೆಗೆ ಸಾರಿಗೆ ಅಧಿಕಾರಿಗಳು ಸ್ಪಂದಿಸಿದ ಬಳಿಕ ತಡೆಹಿಡಿದಿದ್ದ ಬಸ್ಸನ್ನು ಕಳಿಸಿಕೊಟ್ಟರು. ಗ್ರಾಮಸ್ಥರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಳಗ್ಗೆ 9ಕ್ಕೆ ಕಳಚೆಗೆ ಹೋಗಬೇಕಿದ್ದ ಬಸ್ಸು ಯಲ್ಲಾಪುರದಿಂದ ಬಿಡದ ಕಾರಣ ಕಳಚೆ ಮತ್ತು ಆ ಮಾರ್ಗದಲ್ಲಿ ಆ ವೇಳೆಗೆ ಹೋಗಬೇಕಿದ್ದ ಶಿಕ್ಷಕರು, ಆರೋಗ್ಯ ಸಿಬ್ಬಂದಿ ಮಲವಳ್ಳಿ ಬಸ್ಸಿಗೆ ತೆರಳಿ ತಳಕೆಬೈಲ್ದಿಂದ ನಡೆದುಕೊಂಡೇ ಹೋದರು. ಆದರೆ ಆ ನಂತರದಲ್ಲಿ ಪ್ರತಿಭಟನಾಕಾರರ ಬೇಡಿಕೆ ಮನವಿ ಸ್ವೀಕರಿಸಲು ಸಾರಿಗೆ ನಿಯಂತ್ರಕರೊಬ್ಬರೇ ಪ್ರತ್ಯೇಕ ಬಸ್ಸಿನಲ್ಲಿ ಕಳಚೆಗೆ ಹೋದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?