ಯಲ್ಲಾಪುರ: ಬಡಕುಟುಂಬಕ್ಕೆ ದಿಕ್ಕಾಗಿದ್ದ ಟರ್ಕಿ ಕೋಳಿಗಳ ಸಾವು
Team Udayavani, Dec 14, 2022, 3:57 PM IST
ಯಲ್ಲಾಪುರ: ನಲ್ವತ್ತಕ್ಕೂ ಹೆಚ್ಚು ಟರ್ಕಿ ಕೋಳಿಗಳು ಸಾವಿಗೀಡಾದ ಘಟನೆ ತಾಲೂಕಿನ ಉಮ್ಮಚ್ಗಿ ಪಂಚಾಯತ್ ವ್ಯಾಪ್ತಿಯ ಕೋಟೆಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಉಮ್ಮಚಗಿಯ ಕಲಾವತಿ ಸೋಮಿನ್ ಸಿದ್ದಿ ಎಂಬ ಮಹಿಳೆಗೆ ಸೇರಿದ ಸುಮಾರು ನಲವತ್ತಕ್ಕೂ ಹೆಚ್ಚು ಟರ್ಕಿ ಕೋಳಿಗಳಿಗೆ ಕಿಡಿಗೇಡಿಗಳು ಮಾಡಿಸಿದ ವಿಷ ಪ್ರಾಶನದಿಂದಾಗಿ ಎರಡು ಹಂತಗಳಲ್ಲಿ ಸಾವಿಗೀಡಾಗಿದೆ.
ತಿಂಗಳ ಮೊದಲು ಮೊದಲ ಸಲ ಇದ್ದಕ್ಕಿದ್ದಂತೆ ಮೂವತ್ತಕ್ಕೂ ಹೆಚ್ಚು ಕೋಳಿಗಳು ಸಾವಿಗೀಡಾಗಿತ್ತು. ಆ ಸಂದರ್ಭದಲ್ಲಿ ಮನೆಮಂದಿ ಅವುಗಳನ್ನು ಅಡುಗೆ ಮಾಡಿ ಸೇವಿಸಿದ್ದರು. ಮರುದಿನ ಮನೆ-ಮಂದಿಗೆಲ್ಲ ವಾಂತಿ-ಭೇದಿಯಂತಹ ಸಮಸ್ಯೆಗಳು ಶುರುವಾಗಿ, ವೈದ್ಯರ ಬಳಿ ಪರೀಕ್ಷಿಸಿದ ಸಂದರ್ಭ, ಸಣ್ಣ ಪ್ರಮಾಣದ ವಿಷ ದೇಹ ಸೇರಿರುವುದು ತಿಳಿದು ಬಂದು, ನಾಲ್ಕಾರು ದಿನ ಔಷಧೋಪಚಾರ ನಡೆದಿರುವುದಾಗಿ ತಿಳಿಸಿದ್ದಾರೆ.
ಈಗ ಐದಾರು ದಿನಗಳ ಹಿಂದೆ ಮತ್ತೊಂದಿಷ್ಟು ಕೋಳಿಗಳು ಸಾವಿಗೀಡಾದಾಗ ಮನೆಮಂದಿ ಮತ್ತಷ್ಟು ಕಂಗಾಲಾದರು. ಸಂಘದಿಂದ ಸಾಲ ಮಾಡಿ ಕೋಳಿ ಸಾಕಿದ್ದ ಬಡಕುಟುಂಬಕ್ಕೀಗ ಕಣ್ಣೀರಲ್ಲದೆ ಮತ್ತೇನೂ ಉಳಿದಿರುವುದಿಲ್ಲ. ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿರುವ ಪರಿಣಾಮ ಈ ರೀತಿಯಾಗಿ ಕೋಳಿಗಳು ಸತ್ತು ಹೋಗಿವೆ ಎಂದು ಕೊಳ್ಳಲಾಗಿದೆ.
ಕೋಳಿಗಳು ಮನೆ ಬಾಗಿಲಿಗೆ ಬಂದು ತೊಂದರೆ ಕೊಡುತ್ತವೆಂದು ಅಮಾನವೀಯ ಕೆಲಸ ಮಾಡಬಾರದು. ಕೃತ್ಯ ಎಸಗಿದವರು ಯಾರೇ ಆಗಿದ್ದರೂ ತಕ್ಕ ಶಿಕ್ಷೆ ಆಗಲಿ. ನೊಂದ ಕುಟುಂಬಕ್ಕೆ ಪಂಚಾಯತ್ ನಿಂದ ಕೈಲಾದ ಸಹಾಯ ಮಾಡಲಾಗುವುದು. -ಗ.ರಾ.ಭಟ್ಟ, ಗ್ರಾ.ಪಂ ಸದಸ್ಯ, ಉಮ್ಮಚಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ