ಯಲ್ಲಾಪುರ : ಬಿರುಗಾಳಿ ಸಹಿತ ಭಾರಿ ಮಳೆಗೆ ನೂರಾರು ಅಡಿಕೆ ಮರಗಳು ಧರೆಗೆ, ಅಪಾರ ನಷ್ಟ
Team Udayavani, Sep 3, 2022, 7:34 AM IST
ಯಲ್ಲಾಪುರ : ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಬಿರುಗಾಳಿ ಸಹಿತ ಗುಡುಗು , ಮಿಂಚು, ಸಿಡಿಲಿನೊಂದಿಗೆ ಸುರಿದ ಭಾರೀ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ.
ಮಾವಿನಮನೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೇರಾಳ ಮಜರೆಯ ರೈತರಾದ ಜಗದೀಶ್ ಶಂಕರ್ ಭಟ್ ಮತ್ತು ಸುಬ್ರಾಯ ತಿಮ್ಮಯ ಭಟ್ ಅವರಿಗೆ ಸೇರಿದ ಅಡಿಕೆ ತೋಟಗಳು ಒಂದು ಎಕರೆಗೂ ಮೇಲ್ಪಟ್ಟು ಅಡಿಕೆ ಮರಗಳು ಧರೆಗುರುಳಿವೆ. ಜೊತೆಗೆ ಹತ್ತಕ್ಕೂ ಹೆಚ್ಚು ಫಲಭರಿತ ತೆಂಗಿನ ಮರಗಳು ಮುರಿದು ಬಿದ್ದಿವೆ. ಮತ್ತೂ ತಿಮ್ಮಣ್ಣ ಗೋಪಾಲ ಭಟ್ ಅವರ ತೋಟವೂ ಸಹಿತ ಅಂದಾಜು ಒಂದು ಎಕರೆಯಷ್ಟು ಅಡಿಕೆ ಗಿಡಗಳಿಗೆ ಹಾನಿ ಆಗಿವೆ. ಅದರಂತೆ ಗಣಪತಿ ತಿಮ್ಮಯ್ಯ ಭಟ್ ರವರ ಮನೆಯ ಮೇಲ್ಚಾವಣಿಗೆ ಹೊದಿಸಿದ ನೂರಾರು ಹೆಂಚುಗಳು, ಸಿಮೆಂಟ್ ಶೀಟುಗಳು ಹಾರಿ ಹೋಗಿದ್ದು ಅಡಿಕೆ ತೋಟವೂ ಸಹಿತ ಭಾಗಶಃ ಹಾನಿಗೊಳಗಾಗಿದೆ.
ಘಟನೆ ನಡೆದ ಸ್ಥಳಕ್ಕೆ ಕಂದಾಯ ಇಲಾಖೆಯಿಂದ ಗ್ರಾಮ ಲೆಕ್ಕಾಧಿಕಾರಿಗಳಾದ ಈಶ್ವರ ಪಟಗಾರ ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ.
ಮಾವಿನಮನೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಕಳಿ ಹಾನಿಯಾದ ರೈತರ ಮನೆಗೆ ತೆರಳಿ ಹಾನಿಗೊಳಗಾದ ತೋಟವನ್ನು ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ