ಅಂಬಿಗರ ಚೌಡಯ್ಯ ಅಮೃತ ಶಿಲಾಮೂರ್ತಿ ಲೋಕಾರ್ಪಣೆ-ಮೆರವಣಿಗೆ


Team Udayavani, Nov 4, 2019, 11:29 AM IST

4-November-3

ವಾಡಿ: ಯಾರೂ ಬೇಡಿಕೆಯಿಡದಿದ್ದರೂ ಸ್ವ-ಇಚ್ಚೆಯಿಂದ ನಿಜಶರಣ ಅಂಬಿಗರ ಚೌಡಯ್ಯನ ಹುಟ್ಟೂರಾದ ಹಾವೇರಿ ಜಿಲ್ಲೆಯ ಚೌಡದಾನಪುರ ಅಭಿವೃದ್ಧಿಗೆ ನಾನು ಮಂತ್ರಿಯಾಗಿದ್ದಾಗ 5 ಕೋಟಿ ರೂ. ಕೊಟ್ಟಿದ್ದೇನೆ. ಸಪ್ತಖಾತೆ ಸಚಿವರಾಗಿದ್ದ ಕೋಲಿ ಸಮಾಜದ ನಾಯಕ ಎಂದು ಕರೆಯಿಸಿಕೊಳ್ಳುವ ಚಿತ್ತಾಪುರದ ಈ ಹಿಂದಿನ ಶಾಸಕರಿಗೇಕೆ ಇದು ಸಾಧ್ಯವಾಗಲಿಲ್ಲ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಚಿಂಚನಸೂರ ವಿರುದ್ಧ ವಾಗ್ಧಾಳಿ ನಡೆಸಿದರು.

ಹಳಕರ್ಟಿ ಗ್ರಾಮದಲ್ಲಿ ಸ್ಥಾಪಿಸಲಾದ ನಿಜರಣ ಅಂಬಿಗರ ಚೌಡಯ್ಯನವರ ಅಮೃತ ಶಿಲಾಪ್ರತಿಮೆ ಲೋರ್ಕಾಣೆಗೊಳಿಸಿ ಅವರು ಮಾತನಾಡಿದರು. ಚಿತ್ತಾಪುರದಲ್ಲಿ ಕೋಲಿ ಸಮಾಜ ಭವನಕ್ಕೆ ಒಂದು ಕೋಟಿ ರೂ. ಅನುದಾನ ನೀಡಿದ್ದೇನೆ. ಕನಕ ಭವನ, ಬಸವ ಭವನ, ಅಂಬೇಡ್ಕರ್‌ ಭವನ, ಜಗಜೀವನರಾಮ ಭವನಗಳ ನಿರ್ಮಾಣ ಸೇರಿದಂತೆ ಮಾಣಿಕೇಶ್ವರಿ ಕ್ಷೇತ್ರಕ್ಕೂ ಅನುದಾನ ಕೊಟ್ಟಿದ್ದೇನೆ. ಅಲ್ಲದೇ ಕೋಲಿ ಸಮಾಜದ ಅನೇಕ ನಾಯಕರಿಗೆ ರಾಜಕೀಯ ಅಧಿಕಾರದ ಸ್ಥಾನಮಾನ ಕಲ್ಪಿಸಲಾಗಿದೆ. ಹೇಳಿದ್ದನ್ನು ಮಾಡಿದ್ದೇವೆ. ಮಾಡಲಾಗದ್ದನ್ನು ಮಾಡುತ್ತೇವೆ ಎಂದು ಸುಳ್ಳು ಹೇಳಿ ಮನನೋಯಿಸುವುದು ನಮಗೆ ಸರಿಕಾಣಿಸುವುದಿಲ್ಲ ಎಂದರು.

ಕೋಲಿ ಸಮಾಜಕ್ಕೆ ಡಾ| ಮಲ್ಲಿಕಾರ್ಜುನ ಖರ್ಗೆ, ಡಾ| ಶರಣಪ್ರಕಾಶ ಪಾಟೀಲ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಇಂಥ ಪ್ರಾಮಾಣಿಕ ನಾಯಕರ ಸೋಲಾಗಿದ್ದು ನೋವಿನ ಸಂಗತಿ ಎಂದು ಅತೃಪ್ತಿ ಹೊರಹಾಕಿದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಎರಡು ಸಲ ಕೇಂದ್ರಕ್ಕೆ ಸಲ್ಲಿಸಲಾದ ಕಡತ ತಿರಸ್ಕಾರಗೊಂಡಿದೆ. ಐದು ವರ್ಷ ಆಡಳಿತ ನಡೆಸಿ ಈಗ ಪುನಃ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಎಸ್‌ಟಿ ಮಾನ್ಯತೆಗಾಗಿ ಕುರುಬ ಮತ್ತು ಕೋಲಿ ಸಮಾಜದ ಜನರು ಕೇಂದ್ರ ಸರಕಾರದ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಚಿಂಚನಸೂರ ನೇಣಿನ ಮಾತಿಗೆ ಕಮಕನೂರ ತಿರುಗೇಟು: ಬಿಜೆಪಿ ಸರಕಾರ ಅ ಧಿಕಾರಕ್ಕೆ ಬಂದ 15 ದಿನಗಳಲೊಳಗಾಗಿ ಕೋಲಿ ಸಮಾಜ ಎಸ್‌ ಟಿಗೆ ಸೇರುವುದು ಶತಸಿದ್ಧ. ಒಂದು ವೇಳೆ ಎಸ್‌ ಟಿಗೆ ಸೇರ್ಪಡೆಯಾಗದಿದ್ದರೆ ಸ್ವತಃ ನಾನೇ ನೇಣು ಬಿಗುದುಕೊಳ್ಳುತ್ತೇನೆ ಎಂದು ವಾಗ್ಧಾನ ಮಾಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಪ್ರಚಾರಗಿಟ್ಟಿಸಿಕೊಂಡ ಬಾಬುರಾವ್‌ ಚಿಂಚನಸೂರ,
ಈಗ ಮೌನವಾಗಿದ್ದಾರೆ.

ಸರಕಾರ ಬಂದು ತಿಂಗಳು ಉರುಳಿದರೂ ಎಸ್‌ಟಿ ವಿಚಾರ ಮಾತನಾಡುತ್ತಿಲ್ಲ. ನೇಣು ಬಿಗಿದುಕೊಳ್ಳುವ ಮಾತನಾಡುವ ಮೂಲಕ ಕೋಲಿ ಸಮಾಜವನ್ನು ಭಾವನಾತ್ಮಕವಾಗಿ ಸೆಳೆದು ಮೋಸ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಚಿಂಚನಸೂರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ನಲ್ಲಿದ್ದಾಗ ನನ್ನ ಎದೆ ಸೀಳಿದರೆ ಖರ್ಗೆ ಕಾಣಿಸುತ್ತಾರೆ ಎನ್ನುತ್ತಿದ್ದ ಬಾಬುರಾವ್‌ ಚಿಂಚನಸೂರ ಎದೆಯಲ್ಲೀಗ ಯಡಿಯೂರಪ್ಪ ಕಾಣಿಸುತ್ತಿದ್ದಾರಂತೆ. ಇವರ ಎಡಬಿಡಂಗಿತನದ ಹೇಳಿಕೆಗೆ ಸಮಾಜದ ಜನರು ಮರಳಾಗಬಾರದು ಎಂದರು.

ಹಾವೇರಿ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಮನೆಯ ಜಗುಲಿಗಳ ಮೇಲೆ ದೇವರುಗಳ ಫೋಟೊಗಳ ಬದಲು ಚೌಡಯ್ಯನವರ ವಚನ ಸಾಹಿತ್ಯ ಪುಸ್ತಕವಿರಬೇಕು ಎಂದರು.  ಕಾಗಿನೆಲೆಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಮುಗಳನಾಗಾಂವ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ
ಸ್ವಾಮೀಜಿ ಆರ್ಶೀವಚನ ನೀಡಿದರು.

ಹಳಕರ್ಟಿ ಮಠದ ಶ್ರೀ ಮುನೀಂದ್ರ ಸ್ವಾಮೀಜಿ, ಸಿಂಧಗಿ ಗುರುದೇವ ಆಶ್ರಮದ ಶ್ರೀ ಶಾಂತಗಂಗಾಧರ ಜಗದ್ಗುರು ಹಾಗೂ ಇತರ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೆಮೂದ್‌ ಸಾಹೇಬ, ಕೋಲಿ ಸಮಾಜದ ಅಧ್ಯಕ್ಷ ಕರಣಪ್ಪ ಇಸಬಾ, ದತ್ತಾತ್ರೇಯ ಬುಕ್ಕಾ, ಮುಖಂಡರಾದ ಭೀಮಣ್ಣ ಸಾಲಿ, ವೀರಣ್ಣಗೌಡ ಪರಸರೆಡ್ಡಿ, ಜಗದೀಶ ಸಿಂಧೆ, ಶಿವಾನಂದ ಪಾಟೀಲ, ಜಗನಗೌಡ ಪಾಟೀಲ, ಅಬ್ದುಲ್‌ ಅಜೀಜಸೇಠ, ಶ್ರೀನಿವಾಸ ಸಗರ, ನಾಗಣ್ಣ ಮುಗುಟಿ, ಜುಮ್ಮಣ್ಣ ಪೂಜಾರಿ, ನಾಗೇಂದ್ರ ಜೈಗಂಗಾ, ಶಿವುರುದ್ರ ಭೀಣಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಗ್ರಾಮದಲ್ಲಿ ನಡೆದ ಚೌಡಯ್ಯ ಭಾವಚಿತ್ರ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.