ಬುದ್ಧಿಜೀವಿಗಳಿಂದ ದೇಶ ಹಾಳು: ಹೆಗಡೆ
Team Udayavani, Mar 26, 2018, 6:55 AM IST
ಯಾದಗಿರಿ: ದೇಶ ಹಾಳು ಮಾಡಿದವರು ವಿದೇಶಿಗರಲ್ಲ, ಎಡಬಿಡಂಗಿಗಳು, ಮಂದ ಬುದ್ಧಿ ಜೀವಿಗಳು ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ನಗರದಲ್ಲಿ ಹಿಂದೂ ಜಾಗರಣಾ ವೇದಿಕೆ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧಿ ಜೀವಿಗಳು, ವಿಚಾರವಂತರ ಬಲಿಗೆ ಕುರಿಯಾಗಿ ಹಿಂದೂ ಸಮಾಜ ಬೇಕಾಗಿದೆ. ಆದ್ದರಿಂದ ಹಿಂದೂಗಳು ಹುಲಿಯಾಗಿ ಎದ್ದು ನಿಲ್ಲಬೇಕು ಎಂದರು.
ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಆದರೆ ಪಂಜಿನ ಮೆರವಣಿಗೆ ಮಾಡುವ ಗೌರಿ ಸಂತಾನ ಎಲ್ಲಿ ಹೋಗಿದೆ? ಜಾತಿ ಹೆಸರು ಹೇಳಿ ದೇಶ ಒಡೆದ ಕಾಂಗ್ರೆಸ್ನವರಿಗೆ ದೇಶ ಕಟ್ಟುವ ಬುದ್ಧಿ ಬರಲಿಲ್ಲ. ಅವರ ದೇಶ ಒಡೆಯುವ ನೀತಿಯನ್ನು ಡಾ| ಬಿ.ಆರ್. ಅಂಬೇಡ್ಕರ್ ವಿರೋ ಧಿಸಿದಾಗ ಅವರನ್ನು ಸಹ ಕಾಂಗ್ರೆಸ್ ಮಟ್ಟ ಹಾಕಿತ್ತು. ದಲಿತರ ಹೆಸರಿನಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮ ಒಡೆಯಲು ಜಾತಿಗಳನ್ನು ಎತ್ತಿ ಕಟ್ಟಿದ ಕಾಂಗ್ರೆಸ್ ಈಗ ಒಳ ಜಾತಿಗಳನ್ನು ಒಡೆದು ಹಾಕುತ್ತಿರುವುದು ದುರಂತವಾಗಿದೆ. ಇದರ ವಿರುದ್ಧ ಹಿಂದೂ ಕಾರ್ಯಕರ್ತರು ಹೋರಾಟ ನಡೆಸಬೇಕು. ದೇಶ, ಧರ್ಮ ಗೊತ್ತಿಲ್ಲ. ಸೋ ಕಾಲ್ಡ್ ಸಭ್ಯರು ಹಿಂದೂ ಧರ್ಮದ ಕುರಿತು ಮಾತ ನಾಡುತ್ತಿದ್ದಾರೆ ಎಂದು ಗುಡುಗಿದರು.
ಸಮಾಜ ಒಡೆಯುವ ಛಿ(ಸಿ)ದ್ಧರಾಮಯ್ಯ ರಾಜ್ಯಕ್ಕೆ ಕಂಟಕ ವಾಗಿದ್ದು, ಅವರಿಗೆ ಉತ್ತರ ಕೊಡುವ ಕಾಲ ಸನಿಹ ಬಂದಿದೆ. ಸಮಾಜ ಒಡೆಯುವವರು ಯಾರೇ ಆಗಲಿ ಅವರ ಅಪ್ಪ-ಅಮ್ಮ ಕ್ಷಮಿಸುವುದಿಲ್ಲ. ರಜಾಕರ ಆಕ್ರಮಣ, ಲವ್ ಜಿಹಾದ್ನಲ್ಲಿ ಬಲಿಯಾದವರ ಆಕ್ರಂದನ ಕೇಳಿಸುತ್ತಿದೆ. ಆದ್ರೆ ಸಭ್ಯರ ಕಿವಿಗೆ ಇದು ಕೇಳಿಸುತ್ತಿಲ್ಲ. ಸಭ್ಯರ ಮುಖ ನೋಡಬಾರದು. ಹಿಂದೂಗಳು ಬದುಕಿದ್ರೆ ದೇಶ ಬದುಕುತ್ತದೆ. ಹಿಂದೂ ಸಮಾಜ ಒಗ್ಗಟ್ಟಾಗಿದ್ದರೆ ಸಭ್ಯರ ಸಮಾಜ, ಮನೆತನಕ್ಕೆ ಗೌರವ ಸಿಗುತ್ತದೆ. ಇತಿಹಾಸ ಮರೆತು ಸಮಾಜ ಬದುಕಲು ಸಾಧ್ಯವಿಲ್ಲ. ಇತಿಹಾಸದ ಘಟನೆಗಳನ್ನು ಪಾಠವೆಂದು ತಿಳಿದುಕೊಂಡು ಹಿಂದೂ ಕಾರ್ಯಕರ್ತರು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್