ಭ್ರಷ್ಟಾಚಾರ ತನಿಖೆಗೆ ಡಿಎಸ್ಎಸ್ ಒತ್ತಾಯ
Team Udayavani, Nov 12, 2020, 3:49 PM IST
ಶಹಾಪುರ: ತಾಲೂಕಿನ ಹಲವಾರು ಗ್ರಾಪಂಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿತು.
ಸಮಿತಿ ಜಿಲ್ಲಾ ಸಂಚಾಲಕ ಶರಣುದೋರನಹಳ್ಳಿ ಮಾತನಾಡಿ, ತಾಲೂಕಿನ ದೋರನಹಳ್ಳಿ, ಹಯ್ನಾಳ(ಬಿ),ಕೊಂಕಲ್, ಹುರಸಗುಂಡಗಿ, ರಸ್ತಾಪುರ,ಮದ್ರಿಕಿ, ಐಕೂರು, ಟಿವಡಿಗೇರಾ,ಚಾಮನಾಳ, ಬೀರನೂರ, ಹೋತಪೇಠಗ್ರಾಪಂಗಳಲ್ಲಿ 14 ಮತ್ತು 15ನೇ ಸಾಲಿನಹಣಕಾಸು ಹಾಗೂ ವಸತಿ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿ ಕಾರಿಗಳುಮತ್ತು ಆಡಳಿತಾರೂಢ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಲವು ಪಂಚಾಯಿತಿಗಳಲ್ಲಿ 14 ಮತ್ತು15ನೇ ಹಣಕಾಸಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಮುಕ್ಕಾಲು ಭಾಗ ಯಾವುದೇ ಕಾಮಗಾರಿಗಳಿಗೆ ವಿನಿಯೋಗಿಸದೇ ಬೋಗಸ್ ಬಿಲ್ ಮಾಡಿದ್ದಾರೆ. ಶೌಚಾಲಯ ನಿರ್ಮಾಣ ಯೋಜನೆಯಡಿ ಶೌಚಾಲಯ ನಿರ್ಮಿಸದೇ ಹಣ ಬಿಡುಗಡೆಗೊಳಿಸಿದ್ದುಭ್ರಷ್ಟಾಚಾರದಲ್ಲಿ ತೊಡಗಿದ ಗ್ರಾಪಂಗಳಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.ದುರ್ಬಳಕೆ ಮಾಡಿಕೊಂಡ ಹಣ ವಾಪಸ್ ಪಡೆದು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ರಾಜ್ಯ ಸಂಚಾಲಕ ಈರಣ್ಣ ಕಸನ್, ವಿಶ್ವ ನಾಟೇಕಾರ, ರಾಜೂ ಸಲಾದಪುರ, ತಾಲೂಕು ಸಂಚಾಲಕ ಚಂದ್ರಶೇಖರ ಹುರುಸಗುಂಡಗಿ, ಸಂತೋಷ ಗೋಗಿ, ವೀರೇಶ ಕೊಂಕಲ್, ಸಾಬಣ್ಣ ಕಿರಿ ಹಯ್ನಾಳ, ಶಿವು ಪೋತೆ,ರಾಜು ಚಂದಾಪುರ, ಮಾನಪ್ಪ ಜಿಗ್ರಿ, ಮಲ್ಲು ಆರಬೋಳ, ಶೇಖರ ಬಡಿಗೇರ, ಮಲ್ಲಿಕಾರ್ಜುನ ಶಹಾಪುರ, ಮಂಜು ಹಾಲಬಾವಿ, ಸಿದ್ದು ಮುಂಡಾಸ, ಶರಣು ಐಕೂರ, ಬಸವರಾಜ ಕ್ಯಾತನಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ