ಬೆಳೆ ಸಮೀಕ್ಷೆ ನ್ಯೂನತೆ ಸರಿಪಡಿಸಲು ರೈತರ ಒತ್ತಾಯ
Team Udayavani, Jan 11, 2019, 10:47 AM IST
ಸುರಪುರ: ಕರ್ನಾಟಕ ರಾಜ್ಯ ರಹಿತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆ ಸಮೀಕ್ಷೆಯಲ್ಲಿ ಆಗಿರುವ ನ್ಯೂನತೆ ಸರಿಪಡಿಸುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡ ಹಣಮಂತ್ರಾಯ ಮಡಿವಾಳ ಮಾತನಾಡಿ, ಬೆಳೆ ಸಮೀಕ್ಷೆ ವರದಿಯಲ್ಲಿ ಸಾಕಷ್ಟು ತಪ್ಪುಗಳು ಇವೆ. ಪಹಣಿಯಲ್ಲಿ ಬೇರೆ ಬೆಳೆ ನಮೂದು ಮಾಡಲಾಗಿದೆ. ಇದಕ್ಕೆ ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಕಂದಾಯ ಇಲಾಖೆಯಿಂದ ಮಾಡಿರುವ ಬೆಳೆ ಸಮೀಕ್ಷೆಗೂ ವಾಸ್ತವಿಕ ಬೆಳೆಗೂ ತಾಳೆಯಾಗುತ್ತಿಲ್ಲ. ಇನ್ನೂ ಕೆಲ ಪಹಣಿಗಳಲ್ಲಿ ರೈತರ ಹೆಸರು ಮತ್ತು ಸರ್ವೇ ನಂಬರಿಗೂ ಹೊಂದಾಣಿಕೆ ಇಲ್ಲಾ. ಯಾರದೋ ಹೊಲ ಇನಾರದೋ ಹೆಸರು ನಮೂದಾಗಿವೆ. ಇದರಿಂದ ಬೆಳೆ ನಷ್ಟ ಪರಿಹಾರ ಮತ್ತು ತೊಗರಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ರೈತರು ಪರದಾಡುವಂತಾಗಿದೆ ಎಂದು ದೂರಿದರು.
ತೊಗರಿ ಹೆಸರು ನೋಂದಣಿಗೆ ಇದೇ ತಿಂಗಳು 14 ಕೊನೆ ದಿನದ ಗಡುವು ನೀಡಾಲಾಗಿದೆ. ನೋಂದಣಿ ಇಲ್ಲದೆ ತೊಗರಿ ಖರೀದಿಸುವಂತ್ತಿಲ್ಲ. ದೃಢೀಕರಣಕ್ಕಾಗಿ ಬೆಳೆ ಸಮೀಕ್ಷೆಯಲ್ಲಿ ತಪ್ಪಾಗಿರುವ ರೈತರ ಬೆಳೆ ತಿದ್ದುಪಡಿ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ತಿದ್ದುಪಡಿಗೆ ಕೆಲ ಷರತ್ತುಗಳನ್ನು ವಿಧಿಸಿರುವುದರಿಂದ ಬೇಗ ತಿದ್ದುಪಡಿ ಆಗುತ್ತಿಲ್ಲ. ಇದರಿಂದ ರೈತರು ಆತಂಕಗೊಂಡಿದ್ದಾರೆ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಸೊಫೀಯಾ ಸುಲ್ತಾನ್ ರೈತರೊಂದಿಗೆ ಚರ್ಚಿಸಿ ಬಹಳಷ್ಟು ತಪ್ಪುಗಳಾಗಿವೆ. ತಿದ್ದುಪಡಿ ಜವಾಬ್ದಾರಿ ತಹಶೀಲ್ದಾರ್ಗೆ ವಹಿಸಲಾಗಿದೆ. ಗ್ರಾಮ ಲೆಕ್ಕಿಗರು ಸಮಸ್ಯೆ ಸರಿಪಡಿಸಿ ಜಿಪಿಆರ್ಎಸ್ ಮಾಡಿಕೊಟ್ಟರೆ ತಹಶೀಲ್ದಾರರು ತಮ್ಮ ಲಾಗಿನ್ನಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಿಐಟಿಯು ಮುಖಂಡ ದೇವಿಂದ್ರಪ್ಪ ಪತ್ತಾರ ರೈತ ಸಂಘದ ಮುಖಂಡರಾದ ವೆಂಕಟೇಶ ಮಾಲಿ ಪಾಟೀಲ, ಶಿವನಗೌಡ ಪೊಲೀಸ್ ಪಾಟೀಲ, ವೆಂಕೋಬ ದೊರೆ, ರಾಮು ನಾಯಕ ಕುಪಗಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
MUST WATCH
ಹೊಸ ಸೇರ್ಪಡೆ
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!