ಉತ್ತಮ ಇಳುವರಿಗಾಗಿ ಪ್ರಾರ್ಥನೆ
Team Udayavani, Jan 3, 2022, 5:32 PM IST
ಸುರಪುರ: ಎಳ್ಳ ಅಮಾವಾಸ್ಯೆ ನಿಮಿತ್ತ ತಾಲೂಕಿನ ಹೆಮನೂರ, ಹಾಲಗೇರಾ, ಶಖಾಪುರ, ರತ್ತಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಚರಗ ಚೆಲ್ಲಿ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹೊಲದಲ್ಲಿ ಬೆಳೆದ ಜೋಳ ದಂಟಿಗೆ ದಂಡೆ ಬಾಸಿಂಗ ಕಟ್ಟಿದರು. ಐದು ಕಲ್ಲುಗಳನಿಟ್ಟು ಪಾಂಡವರನ್ನಗಿ ಮಾಡಿದರು. ನದಿಯಿಂದ ತಂದಿದ್ದ ಜಲತೀರ್ಥ ಸಿಂಪಡಿಸಿ ಕುಂಕುಮ, ವಿಭೂತಿ ಹಚ್ಚಿ ನೈವೇದ್ಯ ಸಮರ್ಪಿಸಿದರು. ಕಾಯಿ ಒಡೆದು ಕರ್ಪೂರ ಬೆಳಗಿದರು. ನಂತರ ವಿಶೇಷ ಖ್ಯಾದ್ಯವನ್ನು ಹೊಲದ ನಾಲ್ಕು ದಿಕ್ಕುಗಳಲ್ಲಿ ಚೆಲ್ಲಿದರು. ಉತ್ತಮ ಇಳುವರಿಗಾಗಿ ಪ್ರಾರ್ಥಿಸಿದರು.
ಹತ್ತಿರದ ದೇವಸ್ಥಾನಗಳಿಗೆ ತೆರಳಿ ಕಾಯಿ ಹೊಡೆದು ಉತ್ತಮ ಇಳುವರಿ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ಕುಟುಂಬದ ಬಂಧುಬಾಂಧವರು, ಗೆಳೆಯರು ಸೇರಿ ಭೋಜನ ಸವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ