ರಂಜಾನ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ
Team Udayavani, Jun 18, 2018, 12:24 PM IST
ಶಹಾಪುರ: ಅಲ್ಪಸಂಖ್ಯಾತ ಸಮುದಾಯವು ಶೈಕ್ಷಣಿಕ, ಆರ್ಥಿಕ ಪ್ರಗತಿ ಸಾಧಿಸಬೇಕಿದೆ. ಸಮುದಾಯದ
ಪ್ರಗತಿಗಾಗಿ ನಾನು ಕೂಡ ಶ್ರಮಿಸುತ್ತೇನೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಚಾಂದ್ ಫಂಕ್ಷನ್ ಪ್ಯಾಲೇಸ್ನಲ್ಲಿ ಯುವ ಮುಖಂಡ ಇಬ್ರಾಹಿಂ ಶಿರವಾಳ ಆಯೋಜಿಸಿದ್ದ ರಂಜಾನ್ ಹಬ್ಬದ ಔತಣಕೂಟ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಂಜಾನ್ ಹಬ್ಬ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭಾವೈಕ್ಯತೆಯ ಸಂಕೇತವಾಗಿದೆ. ನಗರದಲ್ಲಿ
ಈ ಎರಡು ಸಮುದಾಯಗಳು ಭಾತೃತ್ವದ ಸಂಬಂಧ ಹೊಂದಿರುವುದರಿಂದ ನೆಮ್ಮದಿಯ ಕ್ಷೇತ್ರವಾಗಿದೆ ಎಂದರು.
ಇದೇ ವೇಳೆ ಯುವ ಮುಖಂಡ ಇಬ್ರಾಹಿಂ ಶಿರವಾಳರಿಂದ ಹಾಗೂ ಮುಸ್ಲಿಂ ಸಮುದಾಯದ ಅನೇಕ ಮುಖಂಡರಿಂದ
ಶಾಸಕ ದರ್ಶನಾಪುರ ಹಾಗೂ ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಪಾಟೀಲ ಅನಪುರ ಅವರಿಗೆ ಸನ್ಮಾನಿಸಲಾಯಿತು.
ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಬಸನಗೌಡ ಯಡಿಯಾಪುರ, ನಗರ
ಯೋಜನೆ ಪ್ರಾಧಿಕಾರದ ಅಧ್ಯಕ್ಷ ಸಲಿಂ ಸಂಗ್ರಾಮ, ಮಾಜಿ ಅಧ್ಯಕ್ಷ ಸುರೇಂದ್ರ ಪಾಟೀಲ ಮಡ್ನಾಳ,
ಗುಂಡಪ್ಪ ತುಂಬಗಿ, ಸೈಯದ್ ಶೇಖ ಮುಸ್ತಫಾ ಮೆಕ್ಕಾ, ಇಸ್ಮಾಯಿಲ್ ಚಾಂದ್, ನಗರಸಭೆ ಉಪಾಧ್ಯಕ್ಷ
ಡಾ| ಬಸವರಾಜ ಇಜೇರಿ, ಶೇಖ್ ಅಬೀದ್, ಮಹಿಬೂಬ್ ಅಲಿ ಮಾಸ್ಟರ್, ಬಸವರಾಜ ಹಿರೇಮಠ, ಬಸವರಾಜ
ಹೇರುಂಡಿ, ಅಮರ್ ಬಿನ್ ಚಾವುಸ್, ಬಸವರಾಜಪ್ಪಗೌಡ ತಂಗಡಗಿ ಗೋಗಿ, ನೀಲಕಂಠ ಬಡಿಗೇರ, ರಾಮಣ್ಣ
ಸಾದ್ಯಾಪುರ, ಮಲ್ಲಿಕಾರ್ಜುನ ಪೂಜಾರಿ, ಶಿವಮಹಾಂತ ಚಂದಾಪುರ, ಮಹಾದೇವಪ್ಪ ಸಾಲಿಮನಿ, ಅಲ್ಲಾ ಪಟೇಲ್
ಮಕ್ತಾಪುರ, ಶ್ರೀಶೈಲ್ ಮಾಸ್ಟರ್, ಯಲ್ಲಪ್ಪ ದೊಡ್ಮನಿ ಇದ್ದರು. ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಸರ್ವರೂ ರಂಜಾನ್ ಔತಣಕೂಟದಲ್ಲಿ ಭೋಜನ ಸವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ