ಕುಂತುನಾಥನಿಗೆ ಮಹಾಭಿಷೇಕ-ನವಧಾನ್ಯ ಪೂಜೆ
ಸಂಗ್ವಿ ಮೋನಿಕಾ ಭರತಕುಮಾರ ಜೈನ್ ಸನ್ಯಾಸ ದೀಕ್ಷೆ
Team Udayavani, Jan 12, 2020, 5:06 PM IST
ಸುರಪುರ: ಸಂಗ್ವಿ ಮೋನಿಕಾ ಭರತಕುಮಾರ ಜೈನ್ ಸನ್ಯಾಸ ದೀಕ್ಷಾ ನಿಮಿತ್ತ ನಗರದ ಭಗವಾನ ಕುಂತುನಾಥಜೀ ಮಂದಿರದಲ್ಲಿ ಶನಿವಾರ ವಿವಿಧ ಪೂಜೆ ಸೇರಿದಂತೆ ವಿವಿಧ
ಧಾರ್ಮಿಕ ಕಾರ್ಯಕ್ರಮಗಳು ಜೈನ ಮುನಿ ಅಭಿಂಧನ ಚಂದ್ರ ಸಾಗರಜೀ ಸಾನ್ನಿಧ್ಯದಲ್ಲಿ ಜರುಗಿದವು.
ಧೀಕ್ಷಾರ್ಥಿಯನ್ನು ಶುಕ್ರವಾರ ಸಂಜೆ ಮನೆಯಿಂದ ದೇವಸ್ಥಾನದವರೆಗೆ ಕುದುರೆ
ಮೇಲೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಕುಂತುನಾಥ ಮೂರ್ತಿ ಪೂಜಕ ಸಂಘದ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ದೇವಸ್ಥಾನದಲ್ಲಿ ಸನ್ಯಾಸತ್ವದ ವಿಧಿ ವಿಧಾನಗಳು ಮತ್ತು ವಿಶೇಷ ಪೂಜೆ ನೆರವೇರಿದವು.
ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಧೀಕ್ಷಾರ್ಥಿ ಸಂಗ್ವಿ ಮೋನಿಕಾ ಜೈನ್ ಅವರಿಂದ
ಭಗವಾನ ಕುಂತುನಾಥ ಮೂರ್ತಿಗೆ ಮಹಾಭಿಷೇಕ ಮತ್ತು ಸಕರತ್ವ ಪೂಜೆ ನೆರವೇರಿತು. ಸಕರತ್ವ ಅಂಗವಾಗಿ ಒಂಭತ್ತು ಬಗೆಯ ವಿವಿಧ ಔಷಧಗಳ ನವ ಧಾನ್ಯ ಪೂಜೆ ನಂತರ ಬೆಳ್ಳಿ ತಟ್ಟೆಯಲ್ಲಿ ದೇವರಿಗೆ ಆರತಿ ಮಾಡಲಾಯಿತು.
ಜೈನ ಮುನಿ ಅಭಿಂಧನಚಂದ್ರ ಸಾಗರಜೀ ಸಾನಿಧ್ಯವಹಿಸಿ ಮಾತನಾಡಿ ಣಮೋಂ ಅರಿ
ಯಂತಾಣಂ, ಣಮೋಂ ಸಿದ್ದಾಣಂ, ಣಮೋ ಅಯರಿ ಯಾಣಂ. ಣಮೋಂ ಉವಜ್ಜಾ ಯಾಣಂ. ಣಮೋಂ ಲೋಏ ಸವ್ವಾ ಸಾಹೂಣಾಂ. ಎಂಬ ಪಂಚ ನಮೋಕಾರ
ಮಂತ್ರ ಜೈನ ಧರ್ಮದ ಸಂದೇಶವಾಗಿದೆ. ಇದು ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಪರಮ ಸಾಧನವಾಗಿದ್ದು, ಈ ಪಂಚ ತತ್ವಗಳನ್ನು ಜೀವನದಲ್ಲಿ ತಪ್ಪದೇ
ಅನುಸರಿಸಬೇಕು ಎಂದರು. ಜಿನಃ, ಜಿನೇಶ್ವರ ಅಂದರೆ ವೃಷಭ. ವೃಷಭತೀರ್ಥಂಕರರಿಂದಲೇ ವಿಶ್ವದಲ್ಲಿ ಜೈನ ಧರ್ಮ ಉಗಮವಾಗಿದೆ. ಇವರು ಜೈನ ಧರ್ಮದ ಮೂಲ ವಾರುಸುದಾರರು.
ಹಿಂದೂ ಧರ್ಮದಲ್ಲಿ ವೃಷಭನಾಥನಿಗೆ ಪರಮಾತ್ಮ ಎಂದು ಕರೆಯುತ್ತಾರೆ. ಈ ಬಗ್ಗೆ ಭಾಗವತದ ಮೊದಲನೇ ಸ್ಕಂದದಲ್ಲಿ ವೃಷಭ ದೇವನ ಉಪದೇಶಗಳ ಉಲ್ಲೇಖವಿದೆ.
ಅವರ ನಂತರ ಬಂದ ಮಹಾವೀರ ಮಹಾರಾಜ ಸೇರಿದಂತೆ ಎಲ್ಲ ತೀರ್ಥಂಕರರು ಜೈನ ಧರ್ಮದ ಏಳ್ಗೆ ಮತ್ತು ಪ್ರಸಾರಕ್ಕಾಗಿ ಶ್ರಮಿಸಿದ್ದಾರೆ ಎಂದರು.
ಕುಂತುನಾಥ ಜೈನ ಶ್ವೇತಾಬಂರ ಮೂರ್ತಿಪೂಜಕ ಸಂಘದ ಪದಾ ಧಿಕಾರಿಗಳು
ಸದಸ್ಯರು, ಭಕ್ತರು, ಮಹಿಳೆಯರು ಮಕ್ಕಳು ಇದ್ದರು. ರವಿವಾರ ದೇವಸ್ಥಾನದಿಂದ ನಗರದ
ಪ್ರಮುಖ ಬೀದಿಗಳಲ್ಲಿ ಧೀಕ್ಷಾರ್ಥಿಯ ಭವ್ಯ ಮೆರವಣಿಗೆ ನಂತರ ಸಯಂ ರಂಗಲಾಗಿಯೋ ತಾಂಡಿ ಸಂಜೆ 7ಕ್ಕೆ ವಿಜಯ ಸಮಾರೋಹಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ