ಮತ್ತೆ ನೆಲಕಚ್ಚಿದ ಜವಳಿ-ಸ್ವರ್ಣೋದ್ಯಮ
Team Udayavani, May 13, 2021, 3:43 PM IST
ಯಾದಗಿರಿ: ಕೊರೊನಾ ಅಲೆಗೆ ತುತ್ತಾಗಿರುವ ಜವಳಿ ಮತ್ತು ಸ್ವರ್ಣೋದ್ಯಮ ಸೇರಿ ಹಲವು ಉದ್ಯಮಗಳ ವಹಿವಾಟು ನೆಲಕಚ್ಚಿದ್ದು, ಇದರಿಂದ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದೀಗ ಪ್ರಮುಖ ಆಚರಣೆಗಳಾದ ಅಕ್ಷಯ ತೃತೀಯ, ರಂಜಾನ್ ಹಬ್ಬಗಳು ಇದ್ದು, ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಬೇಕು ಎನ್ನುವವರಿಗೆ ಬಟ್ಟೆಯೂ ಸಿಗುತ್ತಿಲ್ಲ.
2020ನೇ ಸಾಲಿನಲ್ಲಿ ಮಾರ್ಚ್ ವೇಳೆ ಮದುವೆ ಸಮಾರಂಭಗಳು, ಶುಭ ಕಾರ್ಯಗಳು ನಡೆಯುವ ಸಂದರ್ಭದಲ್ಲಿಯೇ ಆರಂಭವಾದ ಮಹಾಮಾರಿ ಕೊರೊನಾ ಆರ್ಭಟದಲ್ಲಿ ಲಾಕ್ ಡೌನ್ದಿಂದ ಕಂಗೆಟ್ಟಿರುವ ವ್ಯಾಪಾರಸ್ಥರಿಗೆ ಕೊರೊನಾ ಎರಡನೇ ಅಲೆಯೂ ಇನ್ನಷ್ಟು ಕಂಗಾಲಾಗಿಸಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 50-60 ಆಭರಣ ಮಳಿಗೆಗಳಿದ್ದು, ಅಂದಾಜು ವಾರ್ಷಿಕ 5ರಿಂದ7 ಕೋಟಿಗಳನ್ನು ವ್ಯವಹಾರ ನಡೆಯುತ್ತಿತ್ತು.
ಅಲ್ಲದೆ ಜವಳಿ ಉದ್ಯಮದ ಸುಮಾರು 70 (ಸಣ್ಣ ಮತ್ತು ದೊಡ್ಡ) ಮಳಿಗೆಗಳಿದ್ದು, ಇವರ ಅಂದಾಜು ವ್ಯವಹಾರ ಸುಮಾರು 7 ಕೋಟಿಯಷ್ಟು ಸ್ಥಗಿತಗೊಂಡಿದೆ. ಇದೀಗ ಬಂದಿರುವ ಬೆಲೆ ಬಾಳುವ ಮದುವೆ ಸೀರೆಗಳು, ರೇಷ್ಮೆ ಸೀರೆ ಸೇರಿದಂತೆ ವಿವಿಧ ಸರಕುಗಳು ಅಂಗಡಿಗಳಲ್ಲಿಯೇ ಉಳಿದಿದೆ. ಕೊರೊನಾ ಮೊದಲ ಅಲೆಯಿಂದ ವ್ಯಾಪಾರ ವಹಿವಾಟು ನಷ್ಟವಾಯಿತು. ಈ ಬಾರಿಯಾದರೂ ಮದುವೆ ಸಮಾರಂಭಗಳು ಆರಂಭವಾಗುತ್ತಿವೆ.
ಉತ್ತಮ ವ್ಯಾಪಾರ ನಡೆಸಬೇಕು ಎಂಬ ನಿರೀಕ್ಷೆಯಲ್ಲಿದ್ದ ಉದ್ಯಮಿಗಳಿಗೆ ಕೊರೊನಾ ಎರಡನೇ ಅಲೆಯೂ ಶಾಕ್ ನೀಡಿದೆ. ಅಕ್ಷಯ ತೃತೀಯ ಮತ್ತು ರಂಜಾನ್ ಹಬ್ಬ ಹತ್ತಿರದಲ್ಲಿಯೇ ಇದ್ದು, ಜವಳಿ ಮತ್ತು ಸ್ವರ್ಣೋದ್ಯಮದಲ್ಲಿ ನಾವೆಲ್ಲ ನಿಯಮ ಪಾಲಿಸಿ ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸಿ ವ್ಯಾಪಾರ ವಹಿವಾಟು ನಡೆಸಲು ಸಿದ್ಧರಿದ್ದೇವೆ. ಇದಕ್ಕೆ ಸರ್ಕಾರ ಕನಿಷ್ಠ ನಿತ್ಯ 2 ತಾಸು ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು