ಬಂಧಿತ ಕಳ್ಳನಿಂದ 7 ಬೈಕ್ಗಳ ಜಪ್ತಿ
Team Udayavani, Oct 14, 2021, 2:22 PM IST
ನಾರಾಯಣಪುರ: ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಓರ್ವ ಬೈಕ್ ಕಳ್ಳನನ್ನು ನಾರಾಯಣಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿತ ಮುದ್ದೇಬಿಹಾಳ ತಾಲೂಕಿನ ಬಿಳೆಬಾವಿ ಗ್ರಾಮದ ಮೌನೇಶ ಬಡಿಗೇರ (30) ಎಂದು ಗುರುತಿಸಲಾಗಿದೆ. ಬಂಧಿತನಿಂದ ಒಟ್ಟು 7 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕದ್ದು ತಂದಿದ್ದ ಎಚ್.ಎಫ್ ಡಿಲಕ್ಸ್ ಬೈಕ್ನಲ್ಲಿ ಆರೋಪಿ ಹೋಗುವ ಸಂದರ್ಭದಲ್ಲಿ ಹೈವೆ ಪೆಟ್ರೋಲಿಂಗ್ ಕರ್ತವ್ಯನಿರತ ಪೊಲೀಸರು ಅನುಮಾನಗೊಂಡು ಬೈಕ್ ಸವಾರನನ್ನು ತಡೆದು ವಿಚಾರಿಸಿದಾಗ ಬೈಕ್ ಕದ್ದು ತಂದು ಮಾರಾಟ ಮಾಡಲು ಹೋಗುತ್ತಿದ್ದೆ ಎಂದು ತಿಳಿಸಿದ್ದಾನೆ. ಬಳಿಕ ಠಾಣೆಗೆ ಕರೆದೋಯ್ದು ವಿಚಾರಣೆ ನಡೆಸಿದಾಗ ಜಮಖಂಡಿ ಸೇರಿದಂತೆ ವಿವಿಧೆಡೆಗಳಿಂದ ಇನ್ನು 6 ಬೈಕ್ಗಳನ್ನು ಕದ್ದಿರುವುದಾಗಿ ಆರೋಪಿತ ತಿಳಿಸಿದ್ದು, ಅಂದಾಜು 1.50 ಲಕ್ಷ ಮೌಲ್ಯದ ಒಟ್ಟು 7 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ, ಸಿಪಿಐ ದೌಲತ್ ಎನ್.ಕೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ಸಿದ್ದೇಶ್ವರ ಗೆರಡೆ ಹಾಗೂ ಎಚ್. ಸಿಗಳಾದ ಯಲ್ಲಪ್ಪ, ಪ್ರಕಾಶ, ಪಿಸಿಗಳಾದ ದೇವಿಂದ್ರಪ್ಪ, ವಿಶ್ವನಾಥ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ