ಮನೆಮನದೊಳಗಿನ ಸುಂದರ ಜಗತ್ತಿನ ಅರಿವಿರಲಿ

ಕಾಡುಗಳಲ್ಲಿರುವ ಹಣ್ಣುಗಳನ್ನು ಅಪರೂಪದ ವಸ್ತುವಿನಂತೆ ನೋಡಿದರೇ ಆಹಾ, ಎಂತಹ ಸುಂದರ ಅನುಭೂತಿ.

Team Udayavani, Jul 21, 2021, 3:32 PM IST

ಮನೆಮನದೊಳಗಿನ ಸುಂದರ ಜಗತ್ತಿನ ಅರಿವಿರಲಿ

ಮನಸು ಕಿಟಕಿಯಾದರೆ ತಲೆ ಬೆಳಕಂತೆ, ಹೃದಯ ಮಾತಿಗಿಳಿದರೆ ಕಿವಿ ಕೇಳುಗನಂತೆ… ಈಗ ಯಾಕೆ ಈ ಮಾತು ಅಂತಿದ್ದೀರಾ ? ಕೊರೊನಾ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ನಮಗೂ ಈಗ ವರ್ಕ್‌ ಫ್ರಮ್‌ ಹೋಮ್‌ ಮಾಡಿ ಅಭ್ಯಾಸ ಆಗಿದೆ. ಎಷ್ಟೋ ಜನ ಮನೆಯನ್ನೇ ಆಫೀಸು ಮಾಡಿಕೊಂಡಿದ್ದಾರೆ. ಮುಂದೆ ಮತ್ತೆ ಮಾಮೂಲಿಯ ಜಗತ್ತಿಗೆ ಹೋಗಲೇಬೇಕು.

ಆದರೆ ಯೋಚಿಸಿ, ಮನೆಯಲ್ಲಿ ಇದ್ದಾಗ ನಮ್ಮ ಮನೆಯ ಹಿರಿಯರು, ಕೆಲಸದವರು, ನೆರೆಹೊರೆಯವರನ್ನು ಮಾತನಾಡಿಸಿದಾಗ ನಾವು ಹೇಳುವ ಕೆಲವು ಸಂಗತಿಗಳನ್ನು ಕೇಳಿ ಹೌದಾ ! ಎಂದು ಆಶ್ಚರ್ಯದಿಂದ ಕೇಳಿದಾಗ, ಅಲ್ಲೇ ಇರುವ ನಮ್ಮವರು ಹೆಮ್ಮೆಯಿಂದ ನಮ್ಮತ್ತ ಒಮ್ಮೆ ನೋಡಲಿಲ್ಲವೇ ? ಮೊನ್ನೆ ಹೀಗೆ ವಾಟ್ಸಪ್‌ನಲ್ಲಿ ಒಂದು ಜೋಕ್‌ ಹರಿದಾಡುತ್ತಿತ್ತು. ವರ್ಕ್‌ ಫ್ರಮ್‌ ಹೋಮ್‌ ಬಿಟ್ಟು ಹೋಮ್‌ ವರ್ಕ್‌ ಕೊಟ್ಟರೆ ಒಳ್ಳೆಯದಿತ್ತು ಅಂತ.

ನಿಜವೇ ಅಲ್ವಾ ? ಗೊಂದಲಗಳ ಗೂಡಾದ ಮೆದುಳಿಗೆ ಒಂದು ಕಪ್‌ ಚಹಾ ತಂದು ಕೊಡುವ ಅಮ್ಮನ ಕೈ, ಮಕ್ಕಳು ಅವರವರೇ ಮಾತಾನಾಡಿಕೊಳ್ಳುವ ಮಾತುಗಳು ನಮ್ಮನ್ನು ಒಂದು ಕ್ಷಣದ ಚಿಂತೆಗೆ ದೂಡಿರುವುದು ಸುಳ್ಳಲ್ಲ. ಬದುಕು ಹಾಗೆ…ಎಣಿಸಿದಂತೆ ಹೋಗದಿದ್ದರೇ ನಾವೇ ಅಲ್ಲಿಗೆ ಹೋಗಬೇಕಾಗುತ್ತದೆ. ಈಗ ನಮಗೆ ಬಂದ ಪರಿಸ್ಥಿತಿ ಇದೆ. ಒಂದು ಹಂತದ ಮೇಲೇರಿ ನಿಂತು ಕೆಳಗೆ ನೋಡಿದಾಗ ಜೀವನ ಇಲ್ಲಿಯೇ ಚಂದವೆಂದು ಕಾಣುತ್ತದೆ. ಅದೇ ಇನ್ನೊಂದು ಮೆಟ್ಟಿಲೇರಿ ನೋಡಿದಾಗ ಮೊದಲಿನ ಸ್ಟೆಪ್‌ಗಿಂತ ಕೊನೆಯದೇ ಬೆಸ್ಟ್ ಅನಿಸುತ್ತದೆ.

ಅದೇ ವ್ಯತಿರಿಕ್ತ ಪರಿಣಾಮ ಬೀರಿದರೇ ಈಗನಿಸುವುದಿಲ್ಲವೇ ಮೊದಲಿನ ಕರೊನಾ ಲಾಕ್‌ಡೌನ್‌ ಒಳ್ಳೆಯದಿತ್ತು. ಈಗಿನಂತೆ ಅನಿಶ್ಚಿತತೆ ಇರಲಿಲ್ಲ. ಸ್ವಭಾವಜನ್ಯ ಮೆಂಟಾಲಿಟಿ ಇದು. ನೆಗೆಟಿವ್‌ ತೆಗೆದು ಒಂದಿಷ್ಟು ಪಾಸಿಟಿವ್‌ ಅಂಶಗಳಿಂದ ಈ ಕೊರೊನಾ ತೆಗೆದುಕೊಂಡು ನೋಡಿದರೆ ಆರ್ಥಿಕ ಹೊಡೆತ ಬಿಟ್ಟರೆ ಹಲವಾರು ವರ್ಷಗಳಿಂದ ಕಡಿದು ಹೋದ ಸಂಬಂಧಗಳು, ಸ್ನೇಹಿತರು, ಹೊಸ ಸಂಬಂಧ ಸಿಕ್ಕಲಿಲ್ಲವೇ? ಭಾರತೀಯ ಸಂಸ್ಕೃತಿ ಅದನ್ನೇ ಹೇಳುತ್ತಿದೆ, ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತುಗಳು ಇವೇ.

ಯುದ್ಧ ನಡೆಯುತ್ತಿದ್ದಾಗ, ಅರ್ಜುನ ತನ್ನವರನ್ನೇ ಕೊಲ್ಲಬೇಕಲ್ಲವೇ ಎಂಬ ಭಾವನೆಯಿಂದ ತನ್ನ ತೊಳಲಾಟ ಹೇಳಿದಾಗ ಕೃಷ್ಣ ಅರ್ಜುನ ನಿನ್ನ ತೊಳಲಾಟ ಸರಿ, ಆದರೆ ಒಳ್ಳೆಯದು ಜಗತ್ತಿಗೆ ಆಗುತ್ತದೆ ಅಂದಾಗ ನಿನ್ನ ಕರ್ತವ್ಯ ನೀನು ಮಾಡಲೇಬೇಕು. ಇದನ್ನು ನಾವು ಕೊರೊನಾದಿಂದ ಮಾನಸಿಕ ಒತ್ತಡದಿಂದ ಜರ್ಜರಿತವಾದವರಿಗೆ ಹೀಗೆ ಹೇಳಿದರೇ…ಇಷ್ಟು ವರ್ಷ ಹೇಗೋ ಹಣ, ಹುದ್ದೆ, ಆರ್ಥಿಕ ಸಫ‌ಲತೆ ಅಂತೆಲ್ಲ ಹೋಗಿ ಆಗಿದೆ. ಈಗ ನಮಗೊಂದು ಅವಕಾಶ ದೇವರು ಒದಗಿಸಿದ್ದಾನೆ.

ಮನೆಯವರೊಂದಿಗೆ ಕುಳಿತುಕೋ, ಮಾತಾನಾಡು, ನಗಿಸು, ನಗೆಯಾಡು, ಬಾಲ್ಯದ ತುಣುಕುಗಳನ್ನು, ಹಳೆ ಮನೆಯ ವಿನ್ಯಾಸವನ್ನು, ನಮ್ಮೂರಿನ ರಸ್ತೆಗಳನ್ನು, ಕಾಡುಗಳಲ್ಲಿರುವ ಹಣ್ಣುಗಳನ್ನು ಅಪರೂಪದ ವಸ್ತುವಿನಂತೆ ನೋಡಿದರೇ ಆಹಾ, ಎಂತಹ ಸುಂದರ ಅನುಭೂತಿ.

ಯಾರೋ ಒಬ್ಬ ಹೇಳಿದ್ದ ಅಂತೆ ಇದ್ದಾಗ ಏನೂ ಪ್ರಾಮುಖ್ಯತೆ ಪಡೆಯದ ವಸ್ತು ಇಲ್ಲದಿರುವಾಗ ಕಾಡುತ್ತದೆ. ನಿಜವೇ ಅಲ್ಲವೇ, ಈಗಲೂ ಕಾಲ ಮಿಂಚಿಲ್ಲ. ಮನೆಯಲ್ಲಿ ಕೆಲಸ ಮಾಡಿದರೂ ನಿಂತಲ್ಲಿ, ಕೂತಲ್ಲಿ, ಕೆಲಸವೇ ಕಾಡಿದರೂ ಮೊದಲು ನೀವು ಮಾಡುವುದು ಮನೆಯ ಹಿರಿಯರನ್ನು,ಮುಳ್ಳು ತುಂಬಿದ ರಸ್ತೆಗಳಲ್ಲಿ ಹೋಗಿ ಬರುವ ಅವರ ಕಾಲುಗಳನ್ನು. ನಿರ್ಜೀವ ರಸ್ತೆಗಳು ಅವರ ಪಾಲಿಗೆ ಹೇಗೆ ಸಜೀವ ವಸ್ತು ಆಯ್ತು ಎಂಬುದು ಅರ್ಥ ಆದಾಗ, ನಮಗೆ ಕುಟುಂಬದಿಂದ
ಜೀವನ ಮಾನಸಿಕ ಸದೃಢತೆ ಕೊಡುತ್ತದೆ ಎಂಬ ಅಂಶ ತಿಳಿಯುತ್ತದೆ.

ಹಲವರಲ್ಲಿ ಕುಟುಂಬ ಅಥವಾ ಪರಿವಾರ ಚಿಕ್ಕದಿದ್ದರೇ ಏನು ಮಾಡುವುದು? ಆಲೋಚನೆ ಬಂದರೇ ! ಸಿಂಪಲ್‌ ಅಕ್ಕಪಕ್ಕದವರನ್ನು, ಸಂತೆಯಲ್ಲಿ ಸಿಕ್ಕಿದವರನ್ನು ಮಾತಾನಾಡಿಸಿ. ಒಬ್ಬ ರಸ್ತೆ ಗುಡಿಸುವವನನ್ನು ಮಾತಾಡಿಸಿದರೇ ಒಂದು ಕಥೆ ತಿಳಿಯುತ್ತದೆ. ಇದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆ ಆಗಿ, ಕುಟುಂಬ ಸಣ್ಣದಿದ್ದರೂ ತೃಪ್ತವಾದ ಭಾವನೆ ನಮ್ಮೊಳಗೆ ಮೂಡುತ್ತದೆ.ಒಬ್ಬರ ಆಗಮನ ಇನ್ನೊಬ್ಬರ ನಿರ್ಗಮನಕ್ಕೆ ಕಾರಣವಾಗಿರುತ್ತದೆ. ಅರಿತರೇ ಜೀವನ ಸುಲಭ,
ಸರಳವಾಗಿರುತ್ತದೆ ಮಾತ್ರವಲ್ಲ ಸಂಭ್ರಮವನ್ನು ಕೊಡುತ್ತದೆ.
– ಶಾರದಾ ಭಟ್‌

ಟಾಪ್ ನ್ಯೂಸ್

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.