ಜುಲೈ 22;National Mango Day…ಹಣ್ಣುಗಳ ರಾಜನ ಇತಿಹಾಸ ಗೊತ್ತಾ?
ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಮಾವಿನ ಹಣ್ಣಿನ ಕುರಿತು ಉಲ್ಲೇಖ ಇದ್ದಿರುವುದಾಗಿ ವರದಿ ತಿಳಿಸಿದೆ.
Team Udayavani, Jul 22, 2021, 4:15 PM IST
ಮಣಿಪಾಲ: ತುಂಬಾ ರುಚಿಕರವಾದ ಹಾಗೂ ಹಣ್ಣುಗಳ ರಾಜ ಎಂದೇ ಜನಪ್ರಿಯವಾಗಿರುವ ಮಾವು ಎಲ್ಲರಿಗೂ ಅಚ್ಚುಮೆಚ್ಚು. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಅಷ್ಟೇ ಯಾಕೆ, ವಿಶೇಷ ದಿನಗಳಲ್ಲಿ ಮಾವಿನ ಹಣ್ಣಿನ ಜ್ಯೂಸ್ ಗೆ ಬೇಡಿಕೆ ಇದೆ. ಬೇಸಿಗೆ ಕಾಲದಲ್ಲಿ ನಮ್ಮ ಫೇವರಿಟ್ ಹಣ್ಣುಗಳ ಪಟ್ಟಿಯಲ್ಲಿ ಮಾವಿನ ಹಣ್ಣಿಗೆ ಮೊದಲ ಸ್ಥಾನ.
ಮಾವಿನ ಹಣ್ಣು ಕೇವಲ ತಿನ್ನಲು ಮಾತ್ರವಲ್ಲ, ಮಾವಿನ ಹಣ್ಣಿನ ರಸಾಯನ, ಮಾವಿನ ಕಾಯಿ ಉಪ್ಪಿನಕಾಯಿ, ಮ್ಯಾಂಗೋ ಐಸ್ ಕ್ರೀಮ್ ಹೀಗೆ ಹಲವು ಬಗೆಗಳಿವೆ. ಇಂದು(ಜುಲೈ 22) ರಾಷ್ಟ್ರೀಯ ಮಾವು ದಿನಾಚರಣೆ. ಈ ಹಿನ್ನೆಲೆಯಲ್ಲಿ ಮಾವಿನ ಹಣ್ಣಿನ ವಿಶೇಷತೆ ಮತ್ತು ಅದರ ಇತಿಹಾಸದ ಬಗ್ಗೆ ಕಿರು ಅವಲೋಕನ ಇಲ್ಲಿದೆ…
ನ್ಯಾಷನಲ್ ಮ್ಯಾಂಗೋ ಡೇ: ಇತಿಹಾಸ
ಹಣ್ಣುಗಳ ರಾಜ ಎಂದೇ ಪ್ರಸಿದ್ಧಿಯಾಗಿರುವ ಮಾವಿನ ಹಣ್ಣಿನ ಮೂಲ ಮತ್ತು ಇತಿಹಾಸದ ದಿನ ಗೊತ್ತಿಲ್ಲ. ಆದರೆ ಮಾವಿನ ಹಣ್ಣಿಗೆ ದೀರ್ಘಕಾಲದ ಇತಿಹಾಸವಿದೆ ಎಂದು ವಿಶ್ಲೇಷಿಸಲಾಗಿದೆ. ಮಾವಿನ ಹಣ್ಣನ್ನು ಸುಮಾರು 5000 ವರ್ಷಗಳ ಹಿಂದೆ ಭಾರತದಲ್ಲಿ ಮೊದಲು ಬೆಳೆಯಾಗಿದೆ ಎಂದು ವರದಿ ವಿವರಿಸಿದೆ. ಭಾರತೀಯ ಜಾನಪದ ಮತ್ತು ಧಾರ್ಮಿಕ ಕಾರ್ಯದಲ್ಲಿ ಮಾವಿನ ಹಣ್ಣು ನಿಕಟ ಸಂಬಂಧ ಹೊಂದಿದೆ. ಅಲ್ಲದೇ ಗೌತಮ ಬುದ್ಧನಿಗೆ ಮಾವಿನ ತೋಟವನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬುದ್ಧನ ಜಾತಕ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಮಾವಿನ ಹಣ್ಣಿನ ಕುರಿತು ಉಲ್ಲೇಖ ಇದ್ದಿರುವುದಾಗಿ ವರದಿ ತಿಳಿಸಿದೆ.
ರಾಮಾಯಣದಲ್ಲಿನ ಮಾವಿನ ಹಣ್ಣಿನ ಕಥೆ:
ಪ್ರಾಚೀನ ಕಾಲದಲ್ಲಿ ಭಾರತೀಯರಿಗೆ ಮಾವಿನ ಹಣ್ಣಿನ ಬಗ್ಗೆ ತಿಳಿದಿರಲಿಲ್ಲವಾಗಿತ್ತಂತೆ. ಆದರೆ ಮಾವಿನ ಹಣ್ಣನ್ನು ಭಾರತಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹನುಮಂತನಿಗೆ ಸಲ್ಲತಕ್ಕದ್ದು. ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ದಿದ್ದ ಕಥೆ ಎಲ್ಲರಿಗೂ ಗೊತ್ತಿದೆ. ಆ ಬಳಿಕ ಶ್ರೀರಾಮ ಸೀತೆಯನ್ನು ಹುಡುಕಲು ಹನುಮಂತನನ್ನು ಲಂಕೆಗೆ ಕಳುಹಿಸಿದ್ದ ಸಂದರ್ಭದಲ್ಲಿ ಹನುಮಂತನು ಅಶೋಕವನದಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ತಿಂದಿದ್ದ. ಅದರಲ್ಲಿ ಮಾವು ಆತನಿಗೆ ತುಂಬಾ ಇಷ್ಟವಾಗಿತ್ತಂತೆ. ಆಗ ಆ ಹಣ್ಣನ್ನು ಶ್ರೀರಾಮನಿಗೂ ಉಡುಗೊರೆಯಾಗಿ ನೀಡಬೇಕೆಂದು ಹನುಮಂತ ಯೋಚಿಸಿ, ಅದರಂತೆ ಶ್ರೀರಾಮನಿಗೆ ಮಾವಿನ ಹಣ್ಣನ್ನು ಸಮರ್ಪಿಸಿದ್ದ. ಆ ಹಣ್ಣನ್ನು ತಿಂದು ಎಸೆದ ಬೀಜದಿಂದ ಮಾವಿನ ಮರಗಳು ಬೆಳೆಯಲಾರಂಭಿಸಿತ್ತು ಎಂಬ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ